DEVARA POOJEYA VICHARA
****************************************************************************************************************************
*ಶ್ರೀ ವಿಷ್ಣು ಸಹಸ್ರನಾಮದ ಮಹತ್ವ*:
*ಭೋಜನ ಕಾಲದಲ್ಲಿ ಬಡಿಸಲಾಗುವ ಪದಾರ್ಥಗಳು ಮತ್ತು ಅವುಗಳ ಭಗವದ್ರೂಪಗಳ ಪರಿಚಯ*:
*ಶ್ರೀ ವಿಷ್ಣು ಸಹಸ್ರನಾಮದ ಮಹತ್ವ*:
ಮನುಷ್ಯನ
ಆಯಸ್ಸು ನೂರು ವರ್ಷ... ಈ ನೂರು ವರ್ಷಗಳಲ್ಲಿ 36 ಸಾವಿರ ಹಗಲು ಮತ್ತು 36 ಸಾವಿರ
ರಾತ್ರಿಗಳಿವೆ. ಮನುಷ್ಯ ದೇಹ 72 ಸಾವಿರ ನಾಡಿಗಳಿಂದಾಗಿದೆ. ಈ ನಾಡಿಗಳಲ್ಲಿ 36 ಸಾವಿರ
ನಾಡಿಗಳು ಎಡ ಭಾಗದಲ್ಲೂ ಮತ್ತು 36 ಸಾವಿರ ನಾಡಿಗಳು ನಮ್ಮಬಲಭಾಗಲ್ಲೂ ಇರುತ್ತವೆ. ಈ
ನಾಡಿಗಳಲ್ಲಿ ರಕ್ತ ಸಂಚಾರ ಸರಿಯಾಗಿ ಆದರೆ ಮನುಷ್ಯನಿಗೆ ಯಾವುದೇ ರೋಗ ಬರಲಾರದು.
ವೇದಗಳ
ಸಾರವಾದ ಬ್ರಹತೀಸಹಸ್ರದಲ್ಲಿ ಒಂದು ಸಾವಿರ ಮಂತ್ರಗಳಿವೆ, ಹಾಗೂ ಈ ಒಂದು ಸಾವಿರ
ಮಂತ್ರದಲ್ಲಿ 72 ,000 ಅಕ್ಷರಗಳಿವೆ. ಈ ಒಂದು ಸಾವಿರ ಮಂತ್ರಗಳ ಸಾರವನ್ನು ಒಂದು ಸಾವಿರ
ನಾಮಗಳ ರೂಪದಲ್ಲಿ ವೇದವ್ಯಾಸರು ನಮಗೆ ಕರುಣಿಸಿದ್ದಾರೆ..- ಶ್ರೀ ವಿಷ್ಣು ಸಹಸ್ರ ನಾಮ ..
ವಿಷ್ಣುಸಹಸ್ರನಾಮವನ್ನು
ಪಠಿಸುವುದರಿಂದ ನಾವು ಬ್ರಹತೀಸಹಸ್ರದ 72 ಸಾವಿರ ಅಕ್ಷರಗಳನ್ನು ಜಪಿಸಿದಂತಾಗುತ್ತದೆ.
ಇದರಿಂದ ನಮ್ಮ 72 ಸಾವಿರ ನಾಡಿಗಳಲ್ಲಿ ಪೂರ್ಣಪ್ರಮಾಣದ ರಕ್ತ ಸಂಚಾರವಾಗುತ್ತದೆ.
ಆದ್ದರಿಂದ ವಿಷ್ಣುಸಹಸ್ರನಾಮ ಭವರೋಗ ಪರಿಹಾರಕ. ಆದರೆ ಅರ್ಥ ತಿಳಿದು ಹೃದಯತುಂಬಿ
ಭಕ್ತಿಯಿಂದ ಪಾರಾಯಣ ಮಾಡುವುದು ಮುಖ್ಯ.
ವೇದಗಳಿಗೆ
ಕನಿಷ್ಠ 3 ಅರ್ಥಗಳಿವೆ, ಮಹಾಭಾರತ ಶ್ಲೋಕಗಳಿಗೆ ಕನಿಷ್ಠ 10 ಅರ್ಥಗಳಿದ್ದರೆ, ಶ್ರೀ
ವಿಷ್ಣು ಸಹಸ್ರನಾಮದ ಪ್ರತೀ ನಾಮಕ್ಕೆ ಕನಿಷ್ಠ ನೂರು ಅರ್ಥಗಳಿವೆ !! ಈ ಕಾರಣಕ್ಕಾಗಿಯೇ
ಪ್ರಾಚೀನರು ಭಗವದ್ಗೀತೆ ಮತ್ತು ಶ್ರೀ ವಿಷ್ಣುಸಹಸ್ರನಾಮವನ್ನು ಅತ್ಯಮೂಲ್ಯ ಗ್ರಂಥವಾಗಿ
ಪರಿಗಣಿಸಿದ್ದಾರೆ. ವೇದಗಳ ಸಾರವಾದ ಬ್ರಹತೀಸಹಸ್ರದಲ್ಲಿ ಒಂದು ಸಾವಿರ ಮಂತ್ರಗಳಿವೆ,
ಹಾಗೂ ಈ ಒಂದು ಸಾವಿರ ಮಂತ್ರದಲ್ಲಿ 72 ,000 ಅಕ್ಷರಗಳಿವೆ. ಈ ಒಂದು ಸಾವಿರ ಮಂತ್ರಗಳ
ಸಾರವನ್ನು ಒಂದು ಸಾವಿರ ನಾಮಗಳ ರೂಪದಲ್ಲಿ ವೇದವ್ಯಾಸರು(ಸಾಕ್ಷಾತ್ ಶ್ರೀಹರಿ) ನಮಗೆ
ಕರುಣಿಸಿದ್ದಾರೆ..
|| ಶ್ರೀಕೃಷ್ಣಾರ್ಪಣಮಸ್ತು ||
|| ನಾಹಂ ಕರ್ತಾ ಹರಿಃ ಕರ್ತಾ ||
*****************************************************************************************************************************************************
*ಭೋಜನ ಕಾಲದಲ್ಲಿ ಬಡಿಸಲಾಗುವ ಪದಾರ್ಥಗಳು ಮತ್ತು ಅವುಗಳ ಭಗವದ್ರೂಪಗಳ ಪರಿಚಯ*:
ಬಡಿಸುವ ಕ್ರಮಾನುಸಾರವಾಗಿ ಭಗವಂತನ ೨೪ ನಾಮಗಳನ್ನು ಅನುಕ್ರಮವಾಗಿ ನೀಡಲಾಗಿದ್ದು ಇದೇ ಕ್ರಮವನ್ನು ಸಾಮಾನ್ಯವಾಗಿ ಅನುಸರಿಸಲಾಗುತ್ತದೆ.
1 *ಉಪ್ಪು* (ಸೌಗಂಧಿ ಸಹಿತ ಜನಾರ್ಧನ)
2 *ಚಟ್ನಿ, ಕೋಸಂಬರಿ,* ಮುಂತಾದುವು (ಸತ್ಯ ಸಹಿತ ಪ್ರದ್ಯುಮ್ನ)
3 *ಕೊಬ್ಬರಿ ಬಳಸಿರುವ ಪಲ್ಯ* (ಬುದ್ಧಿಸಹಿತ ಪದ್ಮನಾಭ)
4 *ಸೊಪ್ಪು ಬಳಸಿರುವ ಪಲ್ಯಗಳು* (ಮಂಗಳಾದೇವಿ ಸಹಿತ ಹೃಶೀಕೇಷ)
5 *ಹುಳಿರಹಿತ ಪದಾರ್ಥಗಳು* (ಹರಿಣಿ ಸಹಿತ ಸಂಕರ್ಷಣ)
6 *ಕಟು ಅಥವಾ ಕಹಿ ಪದಾರ್ಥಗಳು* (ನಿತ್ಯ ಸಹಿತ ಅನಿರುದ್ಧ)
7 *ಹುಳಿ ಪದಾರ್ಥಗಳು* (ಇಂದಿರಾ ಸಹಿತ ದಾಮೋದರ)
8 *ಭಕ್ಷ್ಯ ಅಥವಾ ಸಿಹಿ ಪದಾರ್ಥಗಳು* (ಕಮಲಾ ಸಹಿತ ಯಾಧವ)
9 *ಹೋಳಿಗೆ* (ಕಮಲಾಲಯ ಮಧುಸೂದನ)
10 *ಗೊಜ್ಜು ಮತ್ತು ಕರಿದ ಪದಾರ್ಥಗಳು* (ಸದಾಶ್ರಯ ಆಧೊಷಜ)
11 *ಜಹಾಂಗೀರು, ವಡೆ* ಮುಂತಾದ ಉದ್ದು ಬಳಸಿರುವ ಪದಾರ್ಥಗಳು (ಸಖಾದೇವಿ ಸಹಿತ ಆಚ್ಯುತ)
12 *ಕುಂಬಳಕಾಯಿ, ಎಳ್ಳು, ಉದ್ದಿನ ಪದಾರ್ಥಗಳು-ಹಪ್ಪಳ ಸಂಡಿಗೆ* ಮುಂತಾದುವು (ಲಕ್ಷ್ಮೀ ಸರಸಿಂಹ)
13 *ಹಣ್ಣು ಮತ್ತು ಪಾನಕಗಳು* (ಸುಂದರಿ ಸಹಿತ ಉಪೇಂದ್ರ)
14 *ತೊವ್ವೆ* (ಧಾನ್ಯ ಸಹಿತ ಶ್ರೀಧರ)
15 *ಪರಮಾನ್ನ -ಪಾಯಸ* (ಲಕ್ಷ್ಮೀ ಸಹಿತ ನಾರಾಯಣ)
16 *ಅನ್ನ* (ಶ್ರೀಕೇಶವ)
17 *ತುಪ್ಪ* (ಪದ್ಮಾ ಸಹಿತ ಗೋವಿಂದ)
18 *ಬೆಣ್ಣೆ* (ರಮಾ ಸಹಿತ ತ್ರಿವಿಕ್ರಮ)
19 *ಹಾಲು / ಕ್ಷೀರ* (ಪದ್ಮಿನೀ ಸಹಿತ ಗೋವಿಂದ)
20 *ಮೊಸರು* (ವೃಕ್ಷಾಕಪಿ ಸಹಿತ ವಾಮನ)
21 *ಕುಡಿಯುವ ನೀರು* (ಶ್ರೀಕೃಷ್ಣ)
22 *ಸಕ್ಕರೆ, ಬೇಳೆ* (ದಕ್ಷಿಣಾ ಸಹಿತ ವಾಸುದೇವ)
23 *ಶ್ಯಾವಿಗೆ, ಇಂಗು, ಏಲಕ್ಕಿ, ಕೇಸರಿ, ಕರ್ಪೂರ, ಜೀರಿಗೆ*, ಮುಂತಾದುವು (ಆನಂದ ಸಹಿತ ಪುರುಷೋತ್ತಮ)
24 *ವೀಳ್ಯದೆಲೆ* (ಶ್ರೀಹರಿ)
25 *ಪಾನಕ - ನಿಂಬೆ* (ವಿಶ್ವ)
ವಿಷಯಸೂಚಿ :
1. ಕೆಲವು ಸಂಪ್ರದಾಯಗಳಲ್ಲಿ ತುಪ್ಪವನ್ನು ಭೋಜನಾರಂಭಕ್ಕೆ ಮುಂಚಿತವಾಗಿ ಬಡಿಸುವುದು ರೂಢಿಯಲ್ಲಿದೆ. ಈ ಕ್ರಮವನ್ನು ಪಾತ್ರಾಭಿಗಾರ ಎನ್ನುತ್ತಾರೆ.
2. ಬಡಿಸುವವರು ಭೋಜನ ಮಾಡುವವರ ಎದುರಿನಿಂದ ಬಡಿಸಬೇಕು.
****************************************************************************************************************************************
*ದೇವರಿಗೆ ಬಾಳೆ ಹಣ್ಣು ಮತ್ತು ತೆಂಗಿನಕಾಯಿ ಯಾಕೆ ಶ್ರೇಷ್ಟ ನೈವೇದ್ಯ. ?
ದೇವಸ್ಥಾನಕ್ಕೆ ಹೋಗವಾಗ ಬಾಳೆಹಣ್ಣು ಮತ್ತೆ ತೆಂಗಿನಕಾಯಿ ಯಾಕೆ ತೆಗೆದುಕೊಂಡು ಹೋಗುತ್ತೇವೆ ?
ದೇವರಿಗೆ ಇದೇ ಹಣ್ಣು ಮತ್ತು ತೆಂಗಿನಕಾಯಿ ಶ್ರೇಷ್ಠ ಏಕೆ??
ಬೇರೆ ಯಾವ ಹಣ್ಣನ್ನು ಯಾಕೆ ನಾವು ತೆಗೆದುಕೊಂಡು ಹೋಗುವುದಿಲ್ಲ .
ಪೂಜೆಗಳಲ್ಲಿ ಹೂವು ನೈವೇದ್ಯದ ಪದಾರ್ಥಗಳು, ಪತ್ರೆಗಳಲ್ಲಿ ಕೂಡ ಭಿನ್ನತೆಯಿರುವಾಗ ಎಲ್ಲಾ ದೇವರಿಗೂ ಬಾಳೆ ಹಣ್ಣು ನಿವೇದಿಸುತ್ತಾರೆ ಹಾಗೆಯೇ
ತೆಂಗಿನಕಾಯಿ ಒಡೆದು ಮಂಗಳಾರತಿ ಬೆಳಗುತ್ತಾರೆ ಇವೆರಡರ ವೈಶಿಷ್ಟ್ಯ ಏನು?
ಹೆಚ್ಚಾಗಿ ನಾವು ಒಂದು ಹಣ್ಣನ್ನೂ ತಿಂದು ಬೀಜವನ್ನು ಎಸೆದಾಗ ಅಥವಾ ಪಕ್ಷಿ, ಮೃಗಗಳ ಮೂಲಕ ಎಲ್ಲಿಯಾದರೂ ಬಿದ್ದಾಗ ಅವು ಮೊಳಕೆಯೊಡೆದು ಗಿಡವಾಗಿ ಬೆಳೆಯುತ್ತವೆ.
ಆದರೆ ಬಾಳೆಹಣ್ಣನ್ನು ಸುಲಿದು ಸಿಪ್ಪೆಯಾಗಿ ಅಥವಾ ಇಡೀ ಬಾಳೆಹಣ್ಣನ್ನೇ ಹಾಗೇ ಎಸೆದರು ಅದು ಮತ್ತೆ ಬೆಳೆಯುವುದಿಲ್ಲ.
ತೆಂಗಿನಕಾಯಿಯೂ ಅಷ್ಟೆ ಒಮ್ಮೆ ಒಡೆದರೆ ಅದರಿಂದ ಗಿಡ ಹುಟ್ಟುವುದಿಲ್ಲ .
ಹಾಗೆಯೇ
ಈ ಜನ್ಮವನ್ನು ಮುಗಿಸಿಬಿಟ್ಟರೆ ಮತ್ತೆ ಜನ್ಮವಿಲ್ಲದ ಮುಕ್ತಿಯನ್ನು ಭಗವಂತನಲ್ಲಿ
ಬೇಡುವುದಕ್ಕಾಗಿಯೇ ಇವೆರಡನ್ನೂ ನೈವೇದ್ಯ ಮಾಡುವ ಪದ್ದತಿಯನ್ನು ನಮ್ಮ ಹಿರಿಯರು
ಮಾಡಿರುವರು.ನಮ್ಮ ಹಿರಿಯರು ಏನೇ ಮಾಡಲಿ ಅದಕ್ಕೊಂದು ಅರ್ಥವಿರುತ್ತದೆ.
ಅಷ್ಟೇ ಅಲ್ಲ ಬಾಳೆ ಮರದ ಕಂದೇ ಇನ್ನೊಂದು ಮರವಾಗುತ್ತೆ;ಉಪಯೋಗಿಸದ ತೆಂಗು ಇಡೀ ಕಾಯಿಯಿಂದಲೇ ಬೆಳೆಯುತ್ತದೆ. ಅರ್ಥಾತ್ ಎಂಜಲಿನಿಂದ ಬೆಳೆಯುವುದಿಲ್ಲ.
ಪರಿಶುದ್ಧವಾದ ಪದಾರ್ಥಗಳೇ ದೇವರಿಗೆ ಅರ್ಪಿಸಲು ಯೋಗ್ಯ ಎಂಬ ತತ್ವವು ಇದರಲ್ಲಿದೆ.
ಇನ್ನೂ
ಹೇಳಬೇಕೆಂದರೆ ಬಾಳೆ ಮತ್ತು ತೆಂಗಿನ ಮರದ ಎಲ್ಲಾ ಭಾಗಗಳು ವ್ಯರ್ಥವಾಗದೆ
ಉಪಯುಕ್ತವಾಗಿವೆ, ಹಾಗೆಯೇ ಬೇರೆಯವರಿಗೆ ಸಹಾಯ ಮಾಡುವುದೇ ನಮ್ಮ ಜನ್ಮಕ್ಕೆ ಸಫಲತೆ
ನೀಡುವುದು.
ತೆಂಗಿನ
ಕಾಯಿಯನ್ನು ದೇವರ ಮುಂದೆ ಒಡೆದರೆ ನಮ್ಮ ಪಾಪ ಕರ್ಮ ದೋಷ ವೂ ಕೂಡ ಪರಿಹಾರ ಆಗುತ್ತದೆ
ಎಂಬ ನಂಬಿಕೆ ಇದೆ ಹಾಗೆಯೇ ಆ ಶಕ್ತಿ ತೆಂಗಿನಕಾಯಿಗೆ ಇದೆ.ಅದಕ್ಕೆ ಇದನ್ನು ಕಲ್ಪವೃಕ್ಷ
ಎಂದು ಕರೆಯುತ್ತಾರೆ.
ನಮ್ಮ ಸಂಪ್ರದಾಯದಲ್ಲಿ ಇಷ್ಟೊಂದು ಅರ್ಥವಿರುವುದು ನಮ್ಮ ಭಾರತದ ಪರಂಪರೆಯ ಘನತೆಗೆ ಸಾಕ್ಷಿಯಾಗಿದೆ.
******************************************************************************************************************
ಶ್ರೀವಾದಿರಾಜಯತಿದೃಷ್ಟ
*******************************************************************************************************************************
*"ವಾದಿರಾಜ ಗುರು ನೀ ದಯ ಮಾಡದೆ ಈ ದುರಿತಗಳ ನಿವಾರಿಸುವರಾರೋ"*
--------------------------------------------------------------------------------------------------------------------------------
ಶಿವರಾತ್ರಿ ಪೂಜೆಗೂ ಮೊದಲು ಈ ವಿಷಯ ತಿಳಿದುಕೊಳ್ಳಿ
ಶಿವರಾತ್ರಿ ಪೂಜೆಗೂ ಮೊದಲು ಈ ವಿಷಯ ತಿಳಿದುಕೊಳ್ಳಿ:
16 STEPS OF POOJA / ಪೂಜಾ ವಿಧಾನ
ಶ್ರೀನೃಸಿಂಹಪುರಾಣಸ್ಥಂ
ಋಣಮೋಚನಸ್ತೋತ್ರಮ್
ದೇವತಾಕಾರ್ಯಸಿದ್ಧ್ಯರ್ಥಂ
ಸಭಾಸ್ತಂಭಸಮುದ್ಭವಮ್ I
ಶ್ರೀನೃಸಿಂಹಂ ಮಹಾವೀರಂ
ನಮಾಮಿ ಋಣಮುಕ್ತಯೇ II ೧ II
ಲಕ್ಷ್ಮ್ಯಾಲಿಂಗಿತವಾಮಾಂಗಂ
ಭಕ್ತಾನಾಂ ವರದಾಯಕಮ್ I
ಶ್ರೀನೃಸಿಂಹಂ ಮಹಾವೀರಂ
ನಮಾಮಿ ಋಣಮುಕ್ತಯೇ II ೨ II
ಆಂತ್ರಮಾಲಾಧರಂ ಶಂಖ-
ಚಕ್ರಾಬ್ಜಾಯುಧಧಾರಿಣಮ್ I
ಶ್ರೀನೃಸಿಂಹಂ ಮಹಾವೀರಂ
ನಮಾಮಿ ಋಣಮುಕ್ತಯೇ II ೩ II
ಸ್ಮರಣಾತ್ ಸರ್ವಪಾಪಘ್ನಂ
ಕದ್ರೂಜವಿಷನಾಶನಮ್ I
ಶ್ರೀನೃಸಿಂಹಂ ಮಹಾವೀರಂ
ನಮಾಮಿ ಋಣಮುಕ್ತಯೇ II ೪ II
ಸಿಂಹನಾದೇನ ಮಹತಾ
ದಿಗ್ದಂತಿಭಯನಾಶನಮ್ I
ಶ್ರೀನೃಸಿಂಹಂ ಮಹಾವೀರಂ
ನಮಾಮಿ ಋಣಮುಕ್ತಯೇ II ೫ II
ಪ್ರಹ್ಲಾದವರದಂ ಶ್ರೀಶಂ
ದೈತ್ಯೇಶ್ವರವಿದಾರಣಮ್ I
ಶ್ರೀನೃಸಿಂಹಂ ಮಹಾವೀರಂ
ನಮಾಮಿ ಋಣಮುಕ್ತಯೇ II ೬ II
ಕ್ರೂರಗ್ರಹೈಃ ಪೀಡಿತಾನಾಂ
ಭಕ್ತಾನಾಮಭಯಪ್ರದಮ್ I
ಶ್ರೀನೃಸಿಂಹಂ ಮಹಾವೀರಂ
ನಮಾಮಿ ಋಣಮುಕ್ತಯೇ II ೭ II
ವೇದ-ವೇದಾಂತ-ಯಜ್ಞೇಶಂ
ಬ್ರಹ್ಮ-ರುದ್ರಾದಿವಂದಿತಮ್ I
ಶ್ರೀನೃಸಿಂಹಂ ಮಹಾವೀರಂ
ನಮಾಮಿ ಋಣಮುಕ್ತಯೇ II ೮ II
ಯ ಇದಂ ಪಠತೇ ನಿತ್ಯಂ
ಋಣಮೋಚನಸಂಜ್ಞಿತಮ್ I
ಅನೃಣೀ ಜಾಯತೇ ಸದ್ಯೋ
ಧನಂ ಶೀಘ್ರಮವಾಪ್ನುಯಾತ್ II ೯ II
ಇತಿ ಶ್ರೀವಾದಿರಾಜಯತಿದೃಷ್ಟ
ಶ್ರೀನೃಸಿಂಹಪುರಾಣಸ್ಥಂ
ಋಣಮೋಚನಸ್ತೋತ್ರಮ್
*******************************************************************************************************************************
*"ವಾದಿರಾಜ ಗುರು ನೀ ದಯ ಮಾಡದೆ ಈ ದುರಿತಗಳ ನಿವಾರಿಸುವರಾರೋ"*
"ನನ್ಮ
ದುರಿತಗಳು ಹೆಚ್ಚುಪ್ರಬಲವೋ, ನಿಮ್ಮ ದಯೆ ಕರುಣೆ ಹೆಚ್ಚು ಪ್ರಬಲವೋ " ಅಥವಾ
ದುರಿತಗಳನ್ನು ಕತ್ತರಿಸಲು ಬೇಕು ನಿಮ್ಮ ದಯೆ, ಆ ದಯೆಗೆ ನಾ ಪಾತ್ರನಲ್ಲವೋ ಎನೊಂದೂ
ಅರ್ಥವಾಗದ ಹಾಗಿದೆ.
ಶ್ರೀಮಟ್ಟೀಕಾಕೃತ್ಪಾದರು ರಚಿಸಿದ
ಶ್ರೀಮನ್ಯಾಸುಧಾ ಹಾಗೂ ತತ್ವಪ್ರಕಾಶಿಕಾ ಗ್ರಂಥಕ್ಕೆ ಮೊಟ್ಟಮೊದಲ "ಗುರ್ವರ್ಥದೀಪಿಕಾ"
ಎಂಬ ವ್ಯಾಖ್ಯಾನವನ್ನು ರಚಿಸಿದ ಹೇ ಜ್ಙಾನಿವರೆಣ್ಯ! ! ಬಂದ ಜನಸಾಗರಕ್ಕೆ ದುಃಖವನ್ನು
ದೋರೋಡಿಸುವ ಹೇ ಹೆದ್ದೊರೆ ಎನ್ನ ಕಡೆಯೂ ನಗು ಮೊರೆ ಮಾಡಿರಿ ಅನುಗ್ರಹಿಸಿರಿ.
ಶ್ರೀಶ್ರೀವಾದಿರಾಜರ
ಮಹಿಮೆ ಪರಮಾದ್ಭುತ. ಭೂತರಾಜರನ್ನು ಅಧೀನದಲ್ಲಿ ಇಟ್ಟುಕೊಂಡರು. ಕೃಷ್ಣನ
ಪರ್ಯಾಯವ್ಯವಸ್ಥೆಯನ್ನು ಮಾಡಿದರು. ೫ ಬಾರಿ ಕೃಷ್ಣನ ಒತ್ತಾಯವನ್ನು ನೆರೆವೇರಿಸಿದರು.
೧೨೦ ವರ್ಷ ಬಾಳಿದರು. ಅನೇಕ ಉದ್ಗರಂಥಗಳನ್ನು ಸ್ವಯಂ ಬರೆದರು. ಅನೇಕ ಗ್ರಂಥಗಳಿಗೆ
ವ್ಯಾಖ್ಯಾನ ಮಾಡಿದರು. ಸಾವಿರಾರು ಸ್ತೋತ್ರಗಳನ್ನು ರಚಿಸಿದರು. ಸಾವಿರಾರು
ಕನ್ನಡಪದ್ಯಗಳನ್ನೂ ರಚಿಸಿದರು.
ವಾದಿರಾಜರ ಕಣ್ಣಮುಂದೆ
ಒಂದು ಸ್ತರದ ವ್ಯಕ್ಯಗಳು ಕಣ್ಣಿಗೆ ಕಾಣಲಿಲ್ಲ. ಎಲ್ಲ ಸ್ತರದ ಜನರೂ ಕಣ್ಣಿಗೆ ಕಂಡರು.
ಅಂತೆಯೇ ಎಲ್ಲ ಸ್ತರದ ಜನರಿಗೆ ಉಪಯುಕ್ತವಾಗಲೆಂದೆ ಅವರ ಕೃತಿಗಳು ಹೊರಬಂದವು.
ಬಾಲಕರು
ಕಾಣಿಸಿದರು.. ಮದುವೆಗಾಗಿ ಪರಿತಪಿಸುವ ಯುವಕ ಯುವತಿಯರು ಕಂಡರು.. ನಿರಂತರ ಶ್ರಮಿಸುವ
ಶಾಸ್ತ್ರ ಪಿಪಾಸುಗಳು ಕಂಡರು... ಆಲಸಿಗಳನ್ನು ಕಂಡರು... ಜ್ಙಾನಿಗಳು ಕಂಡರು... ಭಕ್ತರು
ಕಾಣಿಸಿದರು... ದೀನರು... ಶ್ರೀಮಂತರು... ಸೊಕ್ಕಿನವರು... ದರಿದ್ರರು...
ಭೋಗಿಗಳು.... ವಿರಾಗಿಗಳು... ಹೀಗೆ ಪ್ರತಿಸ್ತರದ ಜನರನ್ನು ಕಂಡೆ ಆ ಆ ಜನರಿಗೆ
ಅತ್ಯುಪಯುಕ್ತವಾದ ಕೃತಿಗಳನ್ನು ರಚಿಸಿದರು ಮಹಾತ್ಮರು ಶ್ರೀವಾದಿರಾಜಪಗರಭುಗಳಿ.
ಹಯಗ್ರೀವೋಪಾಸಕರು. ನಿತ್ಯ ಹಯಗ್ರೀವ ರೂಪೀ ಭಗವಂತನನ್ನು ಕಂಡು ಊಟ ಮಾಡಿಸಿದ ಮಹಾತ್ಮಾ.
ಪಂಚ
ವೃಂದಾವನಸ್ಥಾರಾಗಿ ಬೇಡಿ ಬಂದ ಎಲ್ಲ ಭಿಕ್ಷುಕರಾದ ನಮ್ಮಂಥವರನ್ನು ,ಯಾವ ತರಹದ
ದಾರಿದ್ರ್ಯವನ್ನು ನಾನು ಗುರುತಿಸಿಕೊಂಡಿದ್ದೇನೆಯೋ ಆ ದಾರಿದ್ರ್ಯವನ್ನು ನಾಶಮಾಡಿ,
ಶ್ರೀಮಂತರನ್ನಾಗಿ ಮಾಡುವ ಕರುಣಾಳು.
*ಕಾಮಧೇನುರ್ಯಥಾಪೂರ್ವಂ ಸರ್ವಾಭೀಷ್ಟಫಲಪ್ರದಃ |
ತಥಾ ಕಲೌ ವಾದಿರಾಜಃ ಶ್ರೀಪಾದೋ ಅಭೀಷ್ಟದಸ್ಸತಾಮ್ ||*
ಮಹಾಮಹಿಮೋತರಾದ
ನಿಮ್ಮ ಕರುಣಾಬಲ ತುಂಬ ದೊಡ್ಡದು. ಎನ್ನ ದುರಿತಗಳೆ ಅಲ್ಲ. ನಾ ನನ್ನ ಆಲಸ್ಯದಿಂದ
ದುರಿತಗಳಿವೆ ಎಂದು ಭ್ರಮಿಸಿದ್ದೇನೆ. ಭ್ರಮೆ ದೂರಮಾಡಿ. ತಮ್ಮ ಹಾಗೂ ಟೀಕಾರಾಯರ
ಶ್ರೀಮದಾಚಾರ್ಯರ ಹಯಗ್ರೀವ ಹಾಗೂ ಶ್ರೀಕೃಷ್ಣನ ಅನುಗ್ರಹವಾಗಿ ದುರಿಗಳನ್ನು
ಕಳೆದುಕೊಳ್ಳುವಂತೆ ಮಾಡಿರಿ. ದುರಿತಗಳನ್ನು ಪರಿಹಾರ ಮಾಡುತ್ತೀರಾ ಎಂನ ಪೂರ್ಣ ಭರವಸೆ
ನನ್ನದು. ಇಂತಹ ವಾದಿರಾಜರನ್ನು ನಿರಂತರ ನೆನೆಯೋಣ. ನಮಸ್ಕರಿಸೋಣ. ಆರಾಧಿಸೋಣ.
ಈ ಸುಂದರ ಚಿತ್ರ ನಿರ್ಮಿಸಿ ಸೇವೆ ಮಾಡಿದ ನನ್ನ ಆತ್ಮೀಯರಿಗೂ ವಾದಿರಾಜರು ಶೀಘ್ರದಲ್ಲಿ ಉತ್ತಮ ಅನುಗ್ರಹವನ್ನು ಮಾಡಲಿ ಎಂದು ಪ್ರಾರ್ಥಿಸುವೆ.
*********************************************************************************************************************************************
"ಸುಹಾನ" ಹಿಂದೂ ದೇವರ ಮೇಲೆ ಗೀತೆಯನ್ನು ಹಾಡಿದ್ದಾರೆ. ಇದಕ್ಕೆ ಮುಸ್ಲಿಮರ ಆಕ್ರೋಶ ವ್ಯಕ್ತಪಡಿಸಲು ಕಾರಣವೆನ್ನಬಹುದು ನಿಮಗೆ ಗೊತ್ತೇ ಇದನ್ನು ಓದಿ:
ಈಶ್ವರ-ಅಲ್ಲಾ
ರಾಮ-ರಾವಣರ ಯುಧ್ಧ ಮುಗಿದಿದ್ದ ಸಂದರ್ಭ ರಾಕ್ಷಸರ ಸಂಹಾರವಾಗಿತ್ತು
ರಾವಣನ ತಂಗಿ ಶೂರ್ಪನಖಿ ಅವಮಾನದಿಂದ ಕುದ್ದುಹೋಗಿದ್ದಳು
ಜಗತ್ತಿಗೆ ತನ್ನ ಮುಖ ತೋರಿಸಲಾಗದೆ ಮುಖಕ್ಕೆ ಬಟ್ಟೆಸುತ್ತಿಕೊಂಡು ರಾಕ್ಷಸ ರಾಜಗುರು ಶುಕ್ರಾಚಾರ್ಯರ ಆಶ್ರಯದಲ್ಲಿ ದಿನಗಳನ್ನು ದೊಡುತ್ತಿದ್ದಳು
ಶುಕ್ರಾಚಾರ್ಯರ ಬಳಿಬಂದ ಆಕೆ ಸಂಕಲ್ಪ ಮಾಡಿದಂತೆ ಹೇಳತೊಡಗಿದಳು ನಾನು ಮರಳಿ ಶಕ್ತಿಪಡೆಯಬೇಕು ದಾನವರು ಮತ್ತೆ ವಿಜೃಂಭಿಸಲೇಬೇಕು
ನನಗೆ ದಾರಿತೋರಿಸಿ ಎಂದಳು
ಆಗ ಶುಕ್ರಾಚಾರ್ಯರು ಹೇಳುತ್ತಾರೆ
ದಾನವರ ಸಂರಕ್ಷಕನಾದ ಹರನನ್ನು ಕುರಿತು ತಪಸ್ಸು ಮಾಡು ಒಳಿತಾಗುತ್ತದೆಂದು......
ಘೋರ ತಪಸ್ಸಿಗೆ ಕುಳಿತ ಆಕೆಯ ಭಕ್ತಿಗೆ ಮೆಚ್ಚಿ ಶಿವನು ಪ್ರತ್ಯಕ್ಷನಾಗಿ ಏನು ಬೇಕೆಂದು ಕೇಳಿದಾಗ.....
ನಿರ್ನಾಮವಾಗಿರುವ ದಾನವರ ಕುಲ ಮತ್ತೆ ಹುಟ್ಟಬೇಕು ದಾನವರು ಭೂ ಭಾಗವೆಲ್ಲ ವ್ಯಾಪಿಸಬೇಕು ಎಂದು ಬೇಡುತ್ತಾಳೆ
ತಥಾಸ್ತು ಎಂದ ಶಿವ ಯಥಾಪ್ರಕಾರ ಒಂದು ಸಮಸ್ಯೆಯಿಡುತ್ತಾನೆ
ಈ ಜಾಗದಲ್ಲೊಂದು ಶಿವಲಿಂಗ ಸ್ಥಾಪಿಸಿ ಪೂಜಿಸಿ ನಿಮ್ಮ ಸಂಖ್ಯಾಬಲ ವೃಧ್ಧಿಸುತ್ತಲೇ ಇರುತ್ತದೆ
ಯಾರಾದರೂ ವಿಷ್ಣುವಿನ ಆರಾಧಕರು ಆ ಶಿವಲಿಂಗದ ಮೇಲೆ ಗಂಗಾಜಲ ಪ್ರೋಕ್ಷಿಸಿದರೆ ಸಾಕು ದಾನವ ಕುಲದ ಅಂತ್ಯವಾಗುತ್ತದೆ ಎಂದು ಆಶೀರ್ವದಿಸಿದ
ಶೂರ್ಪನಖಿಯು ಮುಖ ಮುಚ್ಚಿಕೊಂಡ ರೀತಿಯೇ ಸಂಪ್ರದಾಯವಾಗಿ ಬುರ್ಖಾ
ಮೆಕ್ಕಾದ ಕಪ್ಪುಶಿಲೆಯೇ ಶಿವಲಿಂಗ ಗುರುಗಳಾದ ಶುಕ್ರಾಚಾರ್ಯರ ನೆನಪಿಗಾಗಿ ಶುಕ್ರವಾರವೇ ಪವಿತ್ರದಿನ ವಿಷ್ಣುವಿನ ಆರಾಧಕರು.ಅಲ್ಲಿ ಬರಬಾರದೆಂದು ಮುಸ್ಲೀಮೇತರರಿಗೆ ಮೆಕ್ಕಾಗೆ ಪ್ರವೇಶವಿಲ್ಲ.ಪೊಜೆಮಾಡುವ ನೆಪದಲ್ಲಿ ವಿಷ್ಣು ಆರಾಧಕರು ಮಾರುವೇಷದಲ್ಲಿ ಬಂದು ಗಂಗಾಜಲ ಸುರಿದಾರೆಂದು ಮೂರ್ತಿಪೂಜೆಯೇ ಸ್ಥಗಿತ ಹರಿಭಕ್ತರೇ ಇರಬಾರದೆಂದು ಮುಸ್ಲೀಮೇತರರು ಕಾಫೀರರೆಂದು ಕೊಲ್ಲುವುದು.ಹಂದಿ ವಿಷ್ಣುವಿನ ಅವತಾರವೆಂದು ಹಂದಿಯನ್ನು ಸೈತಾನನೆಂದು ದೂರವಿಟ್ಟಿರುವುದು .ಶಿವನ ತಲೆಯಮೇಲಿರುವ ಅರ್ಧಚಂದ್ರನನ್ನು ಪವಿತ್ರವಾಗಿಸಿಕೊಂಡಿರುವುದು
ಮುಂದಿನ ಆಲೋಚನೆಗಳು ನಿಮಗೇ ಸೇರಿದ್ದು......
********************************************************************************************************************************
************************************************************************************************************
*ದಾನ ಅಂದರೆ ಏನು?: ತಾನು ಸನ್ಮಾರ್ಗದಿಂದ ಸಂಪಾದಿಸಿದ ಸಂಪತ್ತನ್ನು ಸತ್ಪಾತ್ರರಿಗೆ ಸದ್ವಿನಿಯೋಗಿಸುವುದನ್ನು ದಾನ ಎನ್ನುತ್ತಾರೆ.
🔺ಯಾರಿಗೆ ದಾನ ಕೊಡ ಬಹುದು?: ಬ್ರಾಹ್ಮಣರಿಗೆ, ವಿಪ್ರರಿಗೆ, ಗುರುಗಳಿಗೆ, ವಿದ್ಯೆಯನ್ನು ದಾನ ಮಾಡುವ ಸಂಸ್ಥೆಗೆ.
🔺ಏನನ್ನು
ದಾನ ಕೊಡ ಬಹುದು?: ಶ್ರೇಷ್ಠವಾದ ಶೋಡಷ (ಹದಿನಾರು) ದಾನಗಳು: ಗೋದಾನ, ಭೂದಾನ, ಹಿರಣ್ಯ
(ಬಂಗಾರ) ದಾನ, ವಸ್ತ್ರ ದಾನ, ಆಭರಣ ದಾನ, ಛತ್ರ ದಾನ, ಚಾಮರ ದಾನ, ಶಯ್ಯಾ ದಾನ, ವ್ಯಜನ
(ಬೀಸಣಿಗೆ)ದಾನ, ಸಾಲಿಗ್ರಾಮ ದಾನ, ಧನ ದಾನ, ಧಾನ್ಯ ದಾನ, ದೀಪ ದಾನ, ಪಾದುಕಾ ದಾನ,
ತುಪ್ಪ ದಾನ, ಕನ್ಯಾ ದಾನ.
🔺ಬೇಡದ ವಸ್ತು ಕೊಟ್ಟರೆ ದಾನವಾಗುತ್ತದೆಯೇ?: ಇಲ್ಲ. ಅದು ವಿಲೇವಾರಿ ಎನಿಸುತ್ತದೆ.
🔺ಪ್ರಾಣಿಗಳಿಗೆ ಆಹಾರವನ್ನು ಕೊಟ್ಟರೆ: ಅದು ಪ್ರಾಣಿಗಳ ಮೇಲೆ ಮಾಡುವ ದಯೆ.
🔺ಸಹಾಯ ಯಾಚಿಸಿ ಬಂದವರಿಗೆ ಕೊಟ್ಟರೆ ಅದು ಸಹಾಯ ಎನಿಸುತ್ತದೆ ದಾನ ಅಲ್ಲ.
🔺ಭಿಕ್ಷುಕರಿಗೆ
ಭಿಕ್ಷೆ ನೀಡುವುದು: ಭವತಿ/ ಭವಾನ್ ಬಿಕ್ಷಾಮ್ ದೇಹಿ ಎಂದವರಿಗೆ ತಪ್ಪದೇ ನೀಡ ಬೇಕು.
ಬೀದಿಯಲ್ಲಿ ಕಾಡಿ ಬೇಡುವವರು ಭಿಕ್ಷೆಗೆ ಅರ್ಹರಲ್ಲ ಅದು ಅವರ ಸ್ವಭಾವ ಅಥವಾ ವ್ಯವಹಾರ.
🔺ಹಸಿದವನಿಗೆ ಆಹಾರ, ನೀರು ನೀಡ ಬಹುದೇ?: ಶಾಸ್ತ್ರದ ಪ್ರಕಾರ ಹಸಿದು ಬಂದು ಅನ್ನ ಯಾಚಿಸುವ ಶತ್ರುವಿಗೂ ಅನ್ನ ನೀಡ ಬೇಕು.
🔺ದಾನ ಕೊಡುವಾಗ ಜನರಿಗೆ ಡಂಗುರ ಸಾರಿ ದಾನ ಮಾಡಿದರೆ ಅದು ನಿಷ್ಫಲ.
🔺ಅಂಗೈಯಲ್ಲಿ ಐದು ತೀರ್ಥಗಳಿವೆ:
🔸ಕೈ ಬೆರಳಿನ ತುದಿ : ದೇವ ತೀರ್ಥ -ದೇವ ತರ್ಪಣ ನೀಡಲು.
🔸ಕಿರುಬೆರಳು : ಋಷಿ ತೀರ್ಥ - ಋಷಿ ತರ್ಪಣ
🔸ಅಂಗುಷ್ಠ (ತೋರು) ಬೆರಳು : ಪಿತೃ ತೀರ್ಥ - ಪಿತೃ ತರ್ಪಣ
🔸ಅಂಗೈ ಮಧ್ಯ ಭಾಗ: ಅಗ್ನಿ ತೀರ್ಥ - ದಾನ ಸ್ವೀಕಾರ
🔸ಅಂಗೈ ಬುಡ ಭಾಗ: ಬ್ರಹ್ಮ ತೀರ್ಥ -ಆಚಮನ ಮತ್ತು ತೀರ್ಥ ಪ್ರಾಶನ.
*ಮರಣವನ್ನು ಯಾರು ನೋಡಿಲ್ಲ !ಬಹುಶ...ಅದು ಅಂದವಾಗಿ ಇರಬಹುದು !*
*ಏಕೆಂದರೆ ಅದನ್ನು ಒಂದು ಸಲ ಭೇಟಿಯಾದವರು...ಮತ್ತೆ ಜೀವಿಸಲು ಮರೆತುಬಿಡುತ್ತಿದ್ದಾರೆ !*
*ಪ್ರಕೃತಿಯ ನಿಯಮಗಳು ಕೂಡಾ ತುಂಬ ವಿಚಿತ್ರವಾಗಿದೆ -*
*ಪ್ರಾಣವಿರುವ ಮನುಷ್ಯ ನೀರಿನಲ್ಲಿ ಮುಳುಗಿ ಹೋಗುತ್ತಾನೆ !*
*ಸತ್ತವನು ನೀರಿನಲ್ಲಿ ತೇಲುತ್ತಾನೆ !*
*ಜೀವನವೆಲ್ಲ ಹಣದ ಹಿಂದೆ ಓಡುವವನಿಗೆ ಗೊತ್ತಾ ?*
*ನಾಳೆ ಸತ್ತ ಮೇಲೆ ಅವನು ಬರೀ ಕೈಯಲ್ಲಿ ಹೋಗುತ್ತಾನೆಂದು !*
*ಸುಂದರವಾದ ಶರೀರವನ್ನು ನೋಡಿ ಆನಂದಿಸುತ್ತೇವೆ ಆದರೆ...ನೀವಾದರು ನಾನಾದರು ಆಗುವುದು ಬೂದಿನೆ...*
*ಒಬ್ಬರು ಅತ್ತು ಮನಸು ಹಗುರ ಮಾಡಿಕೊಳ್ಳುತ್ತಾರೆ !*
*ಇನ್ನೊಬ್ಬರು ನಕ್ಕು ದುಃಖವನ್ನು ಮರೆಮಾಡಿಕೊಳ್ಳುತ್ತಾರೆ !*
*ಈ ಮನುಷ್ಯರ ಐಕ್ಯತೆಯನ್ನು ನೋಡಿದರೆ ನನಗೆ ಆಶ್ಚರ್ಯವಾಗುತ್ತದೆ !*
*ಬದುಕಿರುವವರೆಗು ಒಬ್ಬರನ್ನು ತುಳಿದು ಮೇಲೆ ಬರಬೇಕೆನ್ನುಕೊಳ್ಳುತ್ತಾನೆ...*
*ಇರುವಷ್ಟು ದಿನ ಕಿತ್ತಾಡಿಕೊಳ್ಳುತ್ತಾರೆ...*
*ಸತ್ತ ಮೇಲೆ ತನ್ನ ಹೆಗಲ ಮೇಲೆ ಹೊತ್ತುಕೊಂಡು...*
*ಮಸಣದ ವರೆಗೆ ಹೋಗುತ್ತಾನೆ...*
*ಇರುವವರೆಗು ಎಲ್ಲರನ್ನು ಪ್ರೀತಿಸೊಣ...*
*ಒಳ್ಳೆಯ ಮಾತನ್ನೆ ಆಡೊಣ..*
*ಒಬ್ಬರಿಗೊಬ್ಬರು ಸಹಾಯ ಮಾಡೊಣ....*
------------------------------------------------------------------------------------------------------------------------------------------------
ಹರಿನಾಮ*.
ಶ್ರೀಮಧ್ವಾಚಾರ್ಯರು ಸಾರುತ್ತಾರೆ-:-
*ನಾಮ್ನೋsಸ್ತಿ ಯಾವತೀ ಶಕ್ತಿಃ ಪಾತಕೀ ಹರೇಃ*
*ತಾವತ್ಕರ್ತುಂ ನ ಶಕ್ನೋತಿ ಪಾತಕಂ ಪಾತಕೀ ಜನಃ* ||
*ಎಷ್ಟು ಪಾಪಗಳನ್ನು ಹರಿನಾಮ ಕಳೆಯಲು ಸಾಧ್ಯವಿದೆಯೋ ಅಷ್ಟು ಪಾಪವನ್ನು ಅತ್ಯಂತ ಪಾಪಿಷ್ಠಿನಿಗೂ ಮಾಡಲು ಸಾಧ್ಯವಿಲ್ಲ ಎಂದು*
ಆಜಾಮಿಳ ಬ್ರಾಹ್ಮಣ .ಎಲ್ಲ ಕರ್ತವ್ಯಗಳನ್ನು ಬಿಟ್ಟು ಎಲ್ಲ ವಿಧಿ ನಿಷೇಧಗಳನ್ನು ಮೀರಿ
ನಡೆದ. ಸಂಧ್ಯಾವಂದನೆ, ದೇವ ಪೂಜೆ ಬಿಟ್ಟ.ವೇಧ್ಯಾಯನ ತೊರೆದ.ತಂದೆ ತಾಯಿಂದರನ್ನು
ಮಡದಿಯನ್ನೂ ಬಿಟ್ಟ .ದುಷ್ಟ ಸ್ತ್ತೀಯೊಂದಿಗೆ ಸಂಸಾರ ಮಾಡಿದ.ಮಧ್ಯಪಾನ ಮಾಂಸಭಕ್ಷಣೆ, ಗೋ
ಹತ್ಯೆ,ಇವೇ ಮೊದಲಾದ ಎಲ್ಲ ದುಷ್ಟ ಕರ್ಮಗಳನ್ನು ಮಾಡಿದ ಕೊನೆಗೊಮ್ಮೆ ಯಮದೂತರು ಬಂದರು
ಪಾಶವನ್ನು ಹಾಕಿ ಎಳೆದರು.ಕರಾಳ ಮುಖ, ಕೆಂಪು ಕಣ್ಣು ,ಒರಟು ಕೂದಲು, ವಿಕರಾಳ ಗಾತ್ರ, ಆ
ಗಾತ್ರವನ್ನು ಕಂಡೇ ಅಜಾಮಿಳ ನಡುಗಿದ *ನಾರಾಯಣ*" ಎಂದು ಕೂಗಿದ. ಅಜಾಮಿಳನಿಗೆ ಕೊನೆಯ
ಪ್ರೀತಿಯ ಮಗ ನಾರಾಯಣ .ಅವನ ಹೆಸರು ನೆನಪಾಯಿತು.ಜೊತೆಗೆ ಈ ದುಃಖವನ್ನು ಅವನು ತಡೆಯಲಾರ .
ಆ ಜಗದೊಡನೆಯ ನಾರಾಯಣನೇ ನನ್ನನ್ನು ರಕ್ಷಿಸಬಲ್ಲ ಎಂದೂ ನೆನೆದ .ಅದೇ ಹೊತ್ತಿಗೆ
ಯಮಭಟರು ಪಾಶ ತುಂಡಾಗಿತ್ತು.ಕಠಿಣವಾದ ಯಮಭಟರ ಪಾಶವನ್ನು ವಿಷ್ಣುದೂತರು ತುಂಡರಿಸಿದ್ದರು
ಬೆದರಿಸುವರು ಬೆರಗಾದರೂ ಯಮಧೂತರು ಯಮರಾಜನಲ್ಲಿ ಕೇಳಿದರು.
*ಸ್ವಾಮೀ ನಾವು ಯಾರನ್ನು ತರಬೇಕು*
ಯಮಧರ್ಮರಾಜರುಹೇಳಿದರು- *ಜಿಹ್ವಾ ನ ವಕ್ತಿ ಭಗವದ್ಗುಣ ಧೇಯಮ್* "
*ಯಾರ ನಾಲಿಗೆ ಹರಿನಾಮವನ್ನು ಹೇಳಲಿಲ್ಲವೋ ಅವರನ್ನು ಕರೆತನ್ನಿ* ":
ಎಂದು ಇದೇ ಸಂಭಾಷಣೆಯನ್ನು ದಾಸರಾಯರು """
*ಯಮ ತನ್ನ ದೂತರಿಗೆ ಸಾರಿದನು"* ಎಂಬ ಪದ್ಯದಲ್ಲಿ ಹೇಳಿದ್ದಾರೆ....
ಹೀಗೆ ಹರಿನಾಮವುಳ್ಳವರಿಗೆ ಯಮನ ಭೀತಿಯಿಲ್ಲ.ಅಷ್ಟು ಮಾತ್ರವಲ್ಲ ,
ಎಲ್ಲ
ಪಾವಿತ್ರ್ಯ ,ಸಮೃದ್ದಿ ,ಹರಿನಾಮ ಕೀರ್ತನೆಯಿಂದ ಉಂಟಾಗುತ್ತದೆ ಪುರಂದರ ದಾಸರು
ಸಾರುತ್ತಾರೆ *ಎಲ್ಲಿ ಹರಿಕಥಾಪ್ರಸಂಗವೋ ಅಲ್ಲಿ ಗಂಗಾ ಯುಮುನಾ ಸಿಂದು, ಸರಸ್ವತಿ ...
ವಲ್ಲಭ ಶ್ರೀ ಪುರಂದರ ವಿಠಲನು ಮೆಚ್ಚುವನು* ...
*ಶ್ರೀಮಧ್ವಾಚಾರ್ಯರು ಕೃಷ್ಣಾಮೃತವರ್ಣವದಲ್ಲಿ ಶಪಥಮಾಡಿ ಹೇಳುತ್ತಾರೆ*
*ಅಚ್ಯುತಾನಂತ ಗೋವಿಂದ ನಾಮೋಚ್ಚಾರಣಭೇಷಜಾತ್* |
*ನಶ್ಯಂತಿ ಸಕಲಾ ರೋಗಾಃ ಸತ್ಯಂ ಸತ್ಯಂ ವದಾಮ್ಯಹಮ್* ||
*ಅಚ್ಯುತ ,ಅನಂತ ಗೋವಿಂದ ಎಂಬ ನಾಮಗಳ ಉಚ್ಚಾರಣೆಯೇ ದೊಡ್ಡ ಔಷದ.ಇದನ್ನು ಸೇವಿಸುವು ದರಿಂದ ಎಲ್ಲ ರೋಗಗಳೂ ನಾಶವಾಗುತ್ತವೆ. ಇದು ಸತ್ಯ. ಇದು ಸತ್ಯ*.
ಶ್ರೀಮಧ್ವಾಚಾರ್ಯರು ಹರಿಗುಣಗಾನದ ಮಹತ್ವವನ್ನು ಹೇಳಿಧ್ದಲ್ಲದೇ ಹರಿನಾಮ ಸಂಕೀರ್ತನೆ ಮಾಡದವರನ್ನು ಕಟುವಾಗಿ ನಿಂದನೆಯನ್ನು ಮಾಡಿದ್ದಾರೆ. ..
""" *ರೋಗೋ ನಾಮ ನಸಾ ಜಿಹ್ವಾ ಯಾ ನ ವಕ್ತಿ ಹರೇರ್ಗುಣಾನ್*""
*ಯಾರ ನಾಲಿಗೆ ಹರಿ ನಾಮವನ್ನು ಪಾಡಲಿಲ್ಲ ಅದು ನಾಲಿಗೆಯಲ್ಲ ಅದೊಂದು ರೋಗ, ಶರೀರದಲ್ಲಿ ಬೇಡದ ಚರ್ಮ ಕೆಲವರಿಗೆ ಬೆಳೆಯುತ್ತದೆ. ಅದರಂತೆಯೇ ಈ ನಾಲಿಗೆ ಆಗಿದೆ*
ಅಷ್ಟು ಮಾತ್ರವಲ್ಲ ಕಲಿಯುಗದಲ್ಲಿ ಹರಿಸಂಕೀರ್ತನೆಯೇ ಮುಕ್ತಿಗೆ ಮುಖ್ಯ ಸಾಧನ ಎಂದು ಶ್ರೀಪಾದರಾಜರು ಹೀಗೆ ತಿಳಿಸಿದ್ದಾರೆ.
*ಧ್ಯಾನವುಕೃತಯಗದಲ್ಲಿ*
*ಯಜನ | ಯಜ್ಞವು ತ್ರೇತಾಯುಗದಲ್ಲಿ| ದಾನವಾಂತಕನು ದೇವತಾರ್ಚನೆಯು ದ್ವಾಪರಯುಗ ದಲ್ಲಿ |
ಕಲಿಯುಗದಿ ಗಾನದಿ ಕೇಶವ ನೆಂದರೆ ಕೈಗೊಡುವನು ಶ್ರೀರಂಗ ವಿಠಲ*||
ಇದೇ ಕಲಿಯುಗದ ಮಹತ್ವ ಈ ಸದವಕಾಶವನ್ನು ಸಾರ್ಥಕಗೊಳಿಸೋಣ. *ಹರಿದಾಸರಾಗೋಣ ಹರಿಯನ್ನು ಪಾಡೋಣ ಮುಕುತಿಯನ್ನು ಪಡೆಯೋಣ* .....
OM SRI GURU RAGHVENDRAYA NAMAHA.
--------------------------------------------------------------------------------------------------------------------------------
*ಪೂಜ್ಯಾಯ
ರಾಘವೇಂದ್ರಾಯ ಮಂತ್ರದ ಸಂಪೂರ್ಣ ಅರ್ಥ ತಿಳಿಯಿರಿ*
ಗುರು ರಾಘವೇಂದ್ರರು ಸಕಲರಿಗೂ ಆಶೀರ್ವದಿಸಲಿ.
ಪೂಜ್ಯಾಯ ರಾಘವೇಂದ್ರಾಯ ಸತ್ಯ ಧರ್ಮ ರಥಾಯ ಚಾ |
ಭಜಾತಂ ಕಲ್ಪವೃಕ್ಷಾಯ ನಮತಾಂ ಕಾಮಧೇನುವೇ ||
ಭಾವಾರ್ಥ:- ನಾನು ಸತ್ಯ ಮತ್ತು ಧರ್ಮದ ರಕ್ಷಕನಾಗಿರುವ ಗೌರವಾನ್ವಿತ
ರಾಘವೇಂದ್ರನನ್ನು ಪೂಜಿಸುತ್ತೇನೆ.
ಎಲ್ಲಾ
ಸಮಸ್ಯೆಗಳಿಗೆ ಕಲ್ಪವೃಕ್ಷದಂತೆ ಪರಿಹರಿಸುವ ರಾಘವೇಂದ್ರರಿಗೆ ವಂದಿಸುತ್ತೇನೆ.
ಬೇಡಿದ್ದನ್ನೆಲ್ಲಾ ಕಾಮಧೇನುವಿನಂತೆ ಶ್ರೀ ರಾಘವೇಂದ್ರರಿಗೆ ನಾನು ನಮಿಸುತ್ತೇನೆ.
ಶ್ರೀ ರಾಘವೇಂದ್ರರು ಎಲ್ಲಾ ಭಕ್ತರ ಆಸೆಗಳನ್ನು ಪೂರೈಸುತ್ತಾರೆ. ರಾಯರು ಯಾವುದೇ ಜಾತಿ, ಬಣ್ಣ ಅಥವಾ ಧರ್ಮಕ್ಕೆ ಯಾವುದೇ ಪಕ್ಷಪಾತವನ್ನು ಹೊಂದಿಲ್ಲ.
ನಿಖರವಾಗಿ ಕಲ್ಪವೃಕ್ಷ ಮತ್ತು ಕಾಮಧೇನುವಿನಂತೆ.
ಹಾಲು
ಯಾವ ಹಸುವಿನದು ಎಂದು ಯಾರು ಕೇಳುವುದಿಲ್ಲವೊ ಹಾಗೆ, ಮಗುವಿನಿಂದ-ಶತ ವರ್ಷ
ವಯಸ್ಸಿನ ಪ್ರತಿಯೊಬ್ಬರೂ ಹಾಲು ಸೇವಿಸುತ್ತಾರೆ. ಹಸು ಹಿಂದೂ ಸೇವಿಸಿದರೆ ಅಥವಾ ಮಾಧ್ವ
ಅಥವಾ ಅಯ್ಯಂಗಾರ್ ಅಥವಾ ಬೇರೆ ಯಾರಾದರೂ ಬಳಸುತ್ತಿದ್ದರೂ ಸಹ ಹಸುವು ಹಾಲು ಕೊಡುತ್ತದೆ.
ಅದೇ ರೀತಿ ರಾಯರು ತನ್ನ ಭಕ್ತರ ಇಚ್ಛೆಯನ್ನು ಪೂರೈಸುತ್ತಾರೆ.
ಪ್ರಾರ್ಥನೆ
ಮಾಡುವವರ ಧರ್ಮ, ಜಾತಿ, ಬಣ್ಣವನ್ನು ನೋಡದೆ ಯಾರಾದರೂ ಗುರು ರಾಘವೇಂದ್ರರನ್ನು
ನೆನಸಿದರೆ ಅವರ ಇಚ್ಛೆಯನ್ನು ಪೂರ್ಣಗೊಳಿಸುತ್ತಾರೆ. ಅವರು ಮಾಡಿದ ಹಲವಾರು ಅದ್ಭುತಗಳಿಂದ
ಇದನ್ನು ನೋಡಿದ್ದೇವೆ.
ಇದರಿಂದಾಗಿ ರಾಯರು ಕಲ್ಪವೃಕ್ಷ ಮತ್ತು ಕಾಮಧೇನು ಎಂದು ಉಲ್ಲೇಖಿಸಲ್ಪಟ್ಟಿದ್ದಾರೆ.
ಆದ್ದರಿಂದ, ಎಲ್ಲರೂ ಒಳ್ಳೆಯ ಆರೋಗ್ಯಕ್ಕಾಗಿ, ಇಡೀ ವಿಶ್ವದಲ್ಲಿ ಭಕ್ತಿ ಮತ್ತು ಶಾಂತಿಗಾಗಿ ಹಲವಾರು ಬಾರಿ ಈ ಎರಡು ಸಾಲುಗಳನ್ನು ಪ್ರಾರ್ಥಿಸುತ್ತಾರೆ.
ಪೂಜ್ಯಯ ರಾಘವೇಂದ್ರಾಯ ಸತ್ಯ ಧರ್ಮ ರಥಾಯಚಾ |
ಭಜತಾಂ ಕಲ್ಪವೃಕ್ಷಾಯ ನಮಾತಾಂ ಕಾಮಧೇನವೇ ||
ಕಾಲಕೂಟಂತು ದೈತ್ಯಾನಾಮ್|
ಪೀಯೂಷಂತು ದಿವೌಕಸಾಮ್||
ತದಾದ್ಯಕ್ಷರ ಸಂಯೋಗಾತ್|
ಕಾಪೀ ಭೂಲೋಕ ವಾಸಿನಾಮ್||
ಅರ್ಥ
: ಪಾತಾಳದ ರಾಕ್ಷಸರಿಗೆ "ಕಾರ್ಕೋಟಕ" ವಿಷ ಸಿಕ್ಕರೆ ಆಕಾಶದ ದೇವತೆಗಳಿಗೆ
"ಪೀಯೂಷ"(ಅಮೃತ) ದೊರೆಯಿತು.. ಅದೆರಡರ ಮೊದಲಕ್ಷರವನ್ನು ಸೇರಿಸಿ ಭೂಲೋಕದ ಜನರಿಗೆ
ಪ್ರಾಪ್ತವಾದ ಪೇಯವೇ "ಕಾಪೀ"!
_----------------+-------------+-------------+-----------------
#ಜಗತ್ತಿನ #ಏಕೈಕ #ಲಕ್ಷ್ಮಿ #ಕುಬೇರ #ದೇವಾಲಯ
ಹೌದು,
ನೀವು ಕೇಳುತ್ತಿರುವುದು ನಿಜ. ಬಹುಶಃ ಭಾರತದ ಯಾವ ಸ್ಥಳದಲ್ಲಿಯೂ ನೀವು ಈ ರೀತಿಯ
ವಿಶೇಷವಾದ ದೇವಾಲಯ ನೋಡಿರಲಿಕ್ಕಿಲ್ಲ. ಐಶ್ವರ್ಯ, ಸಂಪತ್ತುಗಳಿಗೆ ಅಧಿ ದೇವಿಯಾದ
ಲಕ್ಷ್ಮಿ ಹಾಗೂ ಅತ್ಯಂತ ಶ್ರೀಮಂತ ದೇವನೆಂಬ ಹೆಗ್ಗಳಿಕೆ ಹೊತ್ತ ಕುಬೇರನಿಗೆ ಮುಡಿಪಾದ
ದೇವಾಲಯ ಇದಾಗಿದೆ.
ಈ ದೇವಾಲಯಕ್ಕೆ ಭೇಟಿ ನೀಡಿ ಲಕ್ಷ್ಮಿ
ಹಾಗೂ ಕುಬೇರರನ್ನು ಭಕ್ತಿಯಿಂದ ಪೂಜಿಸಿದರೆ ಕಳೆದುಕೊಂಡಿರುವ ಅಥವಾ ಕೈಬಿಟ್ಟಿರುವ
ಸಂಪತ್ತು ಮತ್ತೆ ಮರಳಿ ಲಭಿಸುತ್ತದೆಂದು ನಂಬಲಾಗಿದೆ. ಅಲ್ಲದೆ ತಿರುಪತಿ-ತಿರುಮಲ
ಯಾತ್ರೆಗೆ ತೆರಳುವ ಸಂದರ್ಭದಲ್ಲಿ ಮೊದಲು ಈ ದೇವಾಲಯಕ್ಕೆ ಭೇಟಿ ನೀಡಿ ನಂತರ ತೆರಳಿದರೆ
ನಿಮಗಾಗುವ ಲಾಭ ದುಪ್ಪಟ್ಟು ಎಂದು ಹೇಳಲಾಗಿದೆ.
#ಕುಬೇರ,
ಮೊದ
ಮೊದಲು ವೇದಗಳ ಕಾಲದಲ್ಲಿ ಕುಬೇರನನ್ನು ದುಷ್ಟ ಶಕ್ತಿಗಳ ರಾಜನೆಂದು, ಮೂರು
ಕಾಲುಗಳುಳ್ಳ, ದಪ್ಪ ಹೊಟ್ಟೆಯ ಕುಬ್ಜನೆಂದು ವಿವರಿಸಲಾಗಿದ್ದರೂ ನಂತರ ಪುರಾಣಗಳ
ಕಾಲದಲ್ಲಿ ದೇವತೆಗಳ ಸ್ಥಾನಮಾನ ಕುಬೇರನಿಗೆ ಲಭಿಸಿತು ಎಂದು ತಿಳಿದು ಬರುತ್ತದೆ.
ಸಾಕಷ್ಟು ವಜ್ರ-ವೈಢೂರ್ಯಗಳಿರುವ, ಆಭರಣಗಳಿಂದ ಭೂಷಿತನಾದ ಹಣದ ಗಂಟು ಹಿಡಿದಿರುವ,
ಮನುಷ್ಯನನ್ನೆ ವಾಹನವನ್ನಾಗಿ ಮಾಡಿಕೊಂಡು ವಿಹರಿಸುವ #ಶ್ರೀಮಂತ ದೇವತೆ ಎಂದು
ಬಣ್ಣಿಸಲಾಗಿದೆ.
ಹಿಂದೆ ಸಾಕಷ್ಟು ವೈಭವಯುತವಾಗಿದ್ದ,
ಸ್ವರ್ಣದಿಂದ ಶೋಭಿತವಾಗಿದ್ದ, ಅತ್ಯದ್ಭುತ ರಾಜ್ಯವಾಗಿದ್ದ ಲಂಕೆಗೆ ರಾಜನಾಗಿದ್ದ ಕುಬೇರ.
ಆದರೆ ಆತನ ಮಲಸಹೋದರನಾದ ರಾವಣನಿಂದ ಕುಬೇರ ಲಂಕಾದಿಂದ ಹೊರದಬ್ಬಲ್ಪಟ್ಟ. ಮುಂದೆ ಆತ
ಶಿವನನ್ನು ಕುರಿತು ತಪಸ್ಸು ಮಾಡಿ #ಶಿವ-#ಪಾರ್ವತಿಯರ ಸಾಕ್ಷಾತ್ಕಾರ ಪಡೆದ.
ಹೀಗೆ
ಅವನು ಲೋಕದ ಜೀವಿಗಳ ಪರಿಪಾಲಕನಾಗಿ ನೇಮಿಸಲ್ಪಟ್ಟ. ಬಹುತೇಕರಿಗೆ ತಿಳಿದಿರುವಂತೆ
ಕುಬೇರನು ಶ್ರೀಮಂತನೇನೊ ನಿಜ. ಆದರೆ ಸಕಲ ಸಂಪತ್ತುಗಳಿಗೆ ಆತ ಅಧಿ ದೇವನಲ್ಲ. ಬದಲು ಕೇವಲ
ಸಕಲ ಸಂಪತ್ತುಗಳ ಮೇಲ್ವಿಚಾರಕ. ಮೂಲತಃ ಸಕಲ ಸಂಪತ್ತುಗಳ ಅಧಿ ದೇವಿ ಮಹಾಲಕ್ಷ್ಮಿ. ಒಂದು
ರೀತಿಯಲ್ಲಿ ಕುಬೇರನು ಬ್ಯಾಂಕಿನ ಪ್ರಧಾನ ವ್ಯವಸ್ಥಾಪಕನಿದ್ದಂತೆ. ಈ ಒಂದು ರೀತಿಯಲ್ಲೆ ಈ
ದೇವಾಲಯ ಕಂಡುಬರುತ್ತದೆ.
ದೇವಾಲಯದ ವಿಶೇಷತೆ ಎಂದರೆ
#ಲಕ್ಷ್ಮಿ ದೇವಿಯ ಜೊತೆಗೆ ಕುಬೇರನು ಸಹ ಕಳಶ ಹಿಡಿದು ಮುಖ್ಯ ದೇವನಾಗಿ
ಪೂಜಿಸಲ್ಪಡುತ್ತಾನೆ. ಅಲ್ಲದೆ, ಈ ದೇವಾಲಯದಲ್ಲಿ #ಶಿವ, #ಸುಬ್ರಹ್ಮಣ್ಯ, #ಗಣೇಶ ಹಾಗೂ
#ಆಂಜನೇಯ ಮುಂತಾದವರಿಗೆ ಮುಡಿಪಾದ ಸನ್ನಿಧಿಗಳನ್ನೂ ಸಹ ಕಾಣಬಹುದು.
ಇಲ್ಲಿ
ವಿಶೇಷವಾಗಿ ಕುಬೇರನಿಗೆ ಧನ್ಯವಾದ ಹೇಳುವ ತಿರುಮಂಜನಂ ಆಚರಣೆಯನ್ನು ಭಕ್ತಾದಿಗಳು
ಮಾಡುತ್ತಾರೆ ಹಾಗೂ ಕುಬೇರನಿದೆ ವಸ್ತ್ರಗಳನ್ನು ಅರ್ಪಿಸುತ್ತಾರೆ. ಚೆನ್ನೈನ ರತ್ನಮಂಗಲಂನ
ವಂಡಲೂರಿನಲ್ಲಿರುವ ಈ ದೇವಾಲಯ ಬೆಳಿಗ್ಗೆ 5.30 ರಿಂದ ಮಧ್ಯಾಹ್ನ 12 ಘಂಟೆಯವರೆಗೆ ಹಾಗೂ
ಸಂಜೆ 4 ಘಂಟೆಯಿಂದ ರಾತ್ರಿ 8 ಘಂಟೆಯವರೆಗೆ ವಾರದ ಎಲ್ಲ ದಿನಗಳಲ್ಲೂ ತೆರೆದಿರುತ್ತದೆ.
----------------------------------------------------------------------------------------------------------------------------- "ರಾಮಾಯ ರಾಮಭದ್ರಾಯ ರಾಮಚಂದ್ರಾಯ ವೇಧಸೇ ।
ರಘುನಾಥಾಯ ನಾಥಾಯ ಸೀತಾಯ ಪತಯೇ ನಮಃ ॥”
ಇದು ಬಹು ಪ್ರಸಿದ್ಧವಾದ ಶ್ಲೋಕ. ಆದರೆ ಆ ಪದಪ್ರಯೋಗಗಳಿಗೆ ಇರುವ ಗೂಢಾರ್ಥ ಮನಸ್ಸಿಗೆ ಮುದವನ್ನುಂಟು ಮಾಡುವಂತಹುದು.
ಶ್ರೀರಾಮಚಂದ್ರನನ್ನು ದಶರಥ ಚಕ್ರವರ್ತಿ ಮಾತ್ರ ’ರಾಮಾ’ ಎಂದು ಕರೆಯುತ್ತಿದ್ದನಂತೆ. ಆ ರೀತಿಯ ಅಧಿಕಾರ ತಂದೆಯಾದವನಿಗೆ ಮಾತ್ರ.
ಇನ್ನು ತಾಯಿಯಾದ ಕೌಸಲ್ಯೆ ಮಗನನ್ನು ’ರಾಮಭದ್ರ’ ಎನ್ನುತ್ತಿದ್ದಳಂತೆ. ಅದು ವಾತ್ಸಲ್ಯಭರಿತವಾದ ಸಂಬೋಧನೆ.
ಚಿಕ್ಕಮ್ಮ
ಕೈಕೇಯಿ ರಾಮಚಂದ್ರ ಎನ್ನುತ್ತಿದ್ದಳು. ಬಾಲ್ಯದಲ್ಲಿ ಬಾನಿನಲ್ಲಿರುವ ಚಂದ್ರ ಬೇಕೆಂದು
ಅಳುತ್ತಿದ್ದ ಶ್ರೀರಾಮನಿಗೆ ಕೈಕೇಯಿ-ಮಂಥರೆಯರು ಕನ್ನಡಿಯೊಳಗೆ ಚಂದ್ರಬಿಂಬ ತೋರಿಸಿ
ಸಮಾಧಾನಪಡಿಸಿದ್ದರು.! ಆ ಕಾರಣದಿಂದ ರಾಮಚಂದ್ರ ಎಂಬ ಅನ್ವರ್ಥನಾಮ.
ಬ್ರಹ್ಮರ್ಷಿಗಳಾದ ವಶಿಷ್ಠರು ಶ್ರೀರಾಮನನ್ನು ಪರತತ್ತ್ವವೆಂದು ತಿಳಿದು ’ವೇಧಸೇ’ ಎಂದು ಕರೆಯುತ್ತಿದ್ದರು.
ಆದರೆ ಅಯೋಧ್ಯೆಯ ಪುರಜನರೆಲ್ಲಾ ’ನಮ್ಮ ರಘುವಂಶದ ಅರಸು’ ಎಂಬರ್ಥದಲ್ಲಿ ’ರಘುನಾಥ’ ಎಂದು ಕರೆಯುತ್ತಿದ್ದರು.
ಇನ್ನು ’ನಾಥ’ ಎಂದಷ್ಟೆ ಕರೆಯುತ್ತಿದ್ದವಳು ಸೀತಾದೇವಿ ಮಾತ್ರ. ಹಾಗೆ ಕರೆಯುವುದು ಅವಳೊಬ್ಬಳ ಹಕ್ಕು.!
ಆದರೆ ಮಿಥಿಲೆಯ ಜನರೆಲ್ಲರೂ ’ನಮ್ಮ ಸೀತೆಯ ಗಂಡ’ ಎಂಬ ಅಭಿಮಾನದಿಂದ ’ಸೀತಾಯ ಪತಯೇ’ ಎನ್ನುತ್ತಿದ್ದರು.
ಅಂತಹ ರಾಮನಿಗೆ ನಮಸ್ಕಾರ..!
************************************************************************************************************
ಶಿವರಾತ್ರಿ ಪೂಜೆಗೂ ಮೊದಲು ಈ ವಿಷಯ ತಿಳಿದುಕೊಳ್ಳಿ
ಎಲ್ಲ
ಹಬ್ಬಗಳಲ್ಲಿ ಶ್ರೇಷ್ಠವಾದ ಶಿವರಾತ್ರಿ ಉತ್ಸವ ಫೆಬ್ರವರಿ 24 ರಂದು ಬಂದಿದೆ.
ದೇಶದಾದ್ಯಂತ ಶಿವನ ಆರಾಧನೆಯಲ್ಲಿ ಭಕ್ತರು ನಿರತರಾಗಲಿದ್ದಾರೆ. ವೃತ ಮಾಡಿ, ಉಪವಾಸ ಮಾಡಿ
ಶಿವನ ಧ್ಯಾನದಲ್ಲಿ ಜಾಗರಣೆ ಮಾಡಲಿದ್ದಾರೆ.
ವೃತ, ಶಿವನ ಪೂಜೆಗೂ ಮೊದಲು
ಕೆಲವೊಂದು ವಿಷಯಗಳ ಬಗ್ಗೆ ಭಕ್ತರು ತಿಳಿದುಕೊಳ್ಳಬೇಕಾಗುತ್ತದೆ. ಓಂ ನಮಃ ಶಿವಾಯ
ಮಂತ್ರವನ್ನು ಜಪಿಸುತ್ತ ಶಿವಲಿಂಗಕ್ಕೆ ಜಲವನ್ನು ಅರ್ಪಣೆ ಮಾಡಿ. ಇದ್ರಿಂದ ಸ್ವಭಾವದಲ್ಲಿ
ಕಂಡು ಬರುವ ವಿಕಾರ ಶಾಂತವಾಗಲಿದೆ.
ಕೇಸರಿಯನ್ನು ಶಂಕರನಿಗೆ ಅರ್ಪಣೆ ಮಾಡುವುದರಿಂದ ಸಭ್ಯತೆ ಹಾಗೂ ಶಿಷ್ಟತೆ ಪ್ರಾಪ್ತವಾಗಲಿದೆ.
ಸಕ್ಕರೆ ಅರ್ಪಣೆ ಮಾಡುವುದರಿಂದ ಆರ್ಥಿಕ ಸಮಸ್ಯೆಗೆ ಮುಕ್ತಿ ಸಿಗಲಿದೆ.
ಹಾಲನ್ನು ಶಿವನಿಗೆ ನೀಡುವುದರಿಂದ ಶರೀರ, ಆರೋಗ್ಯದಿಂದ ಕೂಡಿರುತ್ತದೆ.
ಮೊಸರು ಅರ್ಪಣೆ ಮಾಡುವುದರಿಂದ ಸಮಸ್ಯೆಗಳು ದೂರವಾಗುತ್ತವೆ.
ತುಪ್ಪ ಅರ್ಪಿಸುವುದರಿಂದ ಶಕ್ತಿ ಹೆಚ್ಚಾಗುತ್ತದೆ.
ಸಮಾಜದಲ್ಲಿ ಘನತೆ ಹಾಗೂ ಗೌರವ ಗಳಿಸಲು ಚಂದನವನ್ನು ಶಿವನಿಗೆ ಅರ್ಪಿಸಬೇಕು.
ಜೇನುತುಪ್ಪ ಅರ್ಪಣೆ ಮಾಡುವುದರಿಂದ ಮಾತು ಸಿಹಿಯಾಗುತ್ತದೆ.
ಹಾಗೆ ಕೆಲವೊಂದು ವಸ್ತುಗಳನ್ನು ಮರೆತೂ ಶಿವನಿಗೆ ಅರ್ಪಣೆ ಮಾಡಬಾರದು.
ಶಾಸ್ತ್ರಗಳ ಅನುಸಾರ ಶಿವಲಿಂಗ ಪುರುಷತ್ವದ ಸೂಚನೆ. ಹಾಗಾಗಿ ಅರಿಶಿನ ಅರ್ಪಣೆ ನಿಷಿದ್ಧ.
ಶಿವಲಿಂಗಕ್ಕೆ ಕೆಂಪು ಬಣ್ಣದ ಬಟ್ಟೆ ಹಾಗೂ ಕೇತಕಿಯನ್ನು ಅರ್ಪಣೆ ಮಾಡಬಾರದು.
ಶಿವಲಿಂಗಕ್ಕೆ ಕುಂಕುಮ ನಿಷಿದ್ಧ.
ಶಿವನ ಪೂಜೆ ವೇಳೆ ಶಂಖವನ್ನು ಊದಬಾರದು.
ಶಿವಲಿಂಗಕ್ಕೆ ಅಥವಾ ಶಿವಪೂಜೆ ವೇಳೆ ತುಳಸಿಯನ್ನು ಬಳಸಬಾರದು.
ಮಹಾಶಿವರಾತ್ರಿ*ಆ ನಿಮಿತ್ತ.....
*ಶಿವನಿಗೆ ಬಿಲ್ವಪತ್ರೆ ಅರ್ಪಿಸುವ ಪದ್ಧತಿ*
*ಬಿಲ್ವಪತ್ರೆ*
*ತ್ರಿದಲಂ ತ್ರಿಗುಣಾಕಾರಂ ತ್ರಿನೇತ್ರಂ ಚ ತ್ರಯಾಯುಧಮ್|*
*ತ್ರಿಜನ್ಮಪಾಪಸಂಹಾರಂ ಏಕಬಿಲ್ವಂ ಶಿವಾರ್ಪಣಮ್||*
– ಬಿಲ್ವಾಷ್ಟಕ, ಶ್ಲೋಕ ೧
ಅರ್ಥ:
ಮೂರು ಎಲೆಗಳಿರುವ, ತ್ರಿಗುಣಗಳಂತಿರುವ, ಮೂರು ಕಣ್ಣುಗಳಂತಿರುವ, ಮೂರು ಆಯುಧಗಳಂತಿರುವ
ಮತ್ತು ಮೂರು ಜನ್ಮಗಳ ಪಾಪಗಳನ್ನು ನಾಶ ಮಾಡುವ ಈ ಬಿಲ್ವಪತ್ರೆ ಯನ್ನು ನಾನು ಶಿವನಿಗೆ
ಅರ್ಪಿಸುತ್ತೇನೆ.
*ಶಿವನಿಗೆ ತ್ರಿದಳ ಬಿಲ್ವವನ್ನು ಅರ್ಪಿಸುವುದರ ಹಿಂದಿನ ಮನಃಶಾಸ್ತ್ರದ ಕಾರಣಗಳು*
೧.
ಸತ್ತ್ವ, ರಜ ಮತ್ತು ತಮಗಳಿಂದ ಉತ್ಪತ್ತಿ, ಸ್ಥಿತಿ ಮತ್ತು ಲಯಗಳು ಉತ್ಪನ್ನವಾಗುತ್ತವೆ.
ಕುಮಾರಾವಸ್ಥೆ, ಯೌವನಾವಸ್ಥೆ ಮತ್ತು ವೃದ್ಧಾಪ್ಯ ಅವಸ್ಥೆ ಇವುಗಳ ಪ್ರತೀಕವೆಂದು
ಶಂಕರನಿಗೆ ಬಿಲ್ವಪತ್ರೆಯನ್ನು ಅರ್ಪಿಸಬೇಕು, ಅಂದರೆ ಶಂಕರನಿಗೆ ಈ ಮೂರೂ ಅವಸ್ಥೆಗಳ
ಆಚೆಗೆ ಹೋಗುವ ಇಚ್ಛೆಯನ್ನು ಪ್ರಕಟಿಸಬೇಕು; ಏಕೆಂದರೆ ತ್ರಿಗುಣಾತೀತವಾಗುವುದರಿಂದ
ಈಶ್ವರನ ಭೇಟಿಯಾಗುತ್ತದೆ.
*ಶಿವನಿಗೆ ಬಿಲ್ವಪತ್ರೆಯನ್ನು ಅರ್ಪಿಸುವ ಪದ್ಧತಿಯ ಹಿಂದಿನ ಅಧ್ಯಾತ್ಮಶಾಸ್ತ್ರ*
೧. ತಾರಕ ಅಥವಾ ಮಾರಕ ಉಪಾಸನೆಯ ಪದ್ಧತಿಗನುಸಾರ ಬಿಲ್ವವನ್ನು ಹೇಗೆ ಅರ್ಪಿಸಬೇಕು?
ಬಿಲ್ವದ ಎಲೆಗಳು ಶಿವತತ್ತ್ವದಲ್ಲಿನ ತಾರಕಶಕ್ತಿಯ ವಾಹಕ ಮತ್ತು ಬಿಲ್ವದ ಎಲೆಗಳ ತೊಟ್ಟು ಶಿವತತ್ತ್ವದಲ್ಲಿನ ಮಾರಕ ಶಕ್ತಿಯ ವಾಹಕವಾಗಿದೆ.
ಅ೧. ಶಿವನ *ತಾರಕ ರೂಪದ ಉಪಾಸನೆಯನ್ನು ಮಾಡುವವರು*
ಸಾಮಾನ್ಯ
ಉಪಾಸಕರ ಪ್ರಕೃತಿಯು ತಾರಕವಾಗಿರುವುದರಿಂದ ಶಿವನ ತಾರಕ ಉಪಾಸನೆಯು ಅವರ ಪ್ರಕೃತಿಗೆ
ಹೊಂದು ವಂತಹ ಮತ್ತು ಅವರ ಆಧ್ಯಾತ್ಮಿಕ ಉನ್ನತಿಗೆ ಪೂರಕವಾಗಿರುತ್ತದೆ. ಇಂತಹವರು ಶಿವನ
ತಾರಕ ತತ್ತ್ವದ ಲಾಭವನ್ನು ಪಡೆದುಕೊಳ್ಳಲು ತೊಟ್ಟನ್ನು ಲಿಂಗದ ಕಡೆಗೆ ಮತ್ತು ಎಲೆಗಳ
ತುದಿಗಳನ್ನು ನಮ್ಮೆಡೆಗೆ ಮಾಡಿ ಬಿಲ್ವಪತ್ರೆಯನ್ನು ಅರ್ಪಿಸಬೇಕು. (ಬಿಲ್ವಂ ತು
ನ್ಯುಬ್ಜಂ ಸ್ವಾಭಿಮುಖಾಗ್ರಂ ಚ|)
ಅ೨. ಶಿವನ *ಮಾರಕ ರೂಪದ ಉಪಾಸನೆಯನ್ನು ಮಾಡುವವರು*
ಶಾಕ್ತಪಂಥೀಯರು ಶಿವನ ಮಾರಕ ರೂಪದ ಉಪಾಸನೆಯನ್ನು ಮಾಡುತ್ತಾರೆ.
ಅ.
ಇಂತಹವರು ಶಿವನ ಮಾರಕ ತತ್ತ್ವದ ಲಾಭವನ್ನು ಪಡೆದುಕೊಳ್ಳಲು ತೊಟ್ಟನ್ನು ನಮ್ಮ ಕಡೆಗೆ
ಮತ್ತು ಎಲೆಗಳ ತುದಿಗಳನ್ನು ಶಿವನೆಡೆಗೆ ಮಾಡಿ ಬಿಲ್ವಪತ್ರೆಯನ್ನು ಅರ್ಪಿಸಬೇಕು.
ಆ.
ಲಿಂಗದಲ್ಲಿ ಆಹತ (ಲಿಂಗದ ಮೇಲೆ ಬೀಳುವ ನೀರಿನ ಆಘಾತದಿಂದ ನಿರ್ಮಾಣವಾಗುವ) ನಾದದಲ್ಲಿನ
ಪವಿತ್ರಕಗಳು ಮತ್ತು ಅನಾಹತ (ಸೂಕ್ಷ್ಮ) ನಾದದಲ್ಲಿನ ಪವಿತ್ರಕಗಳು ಹೀಗೆ ಎರಡು ವಿಧದ
ಪವಿತ್ರಕಗಳಿರುತ್ತವೆ.
ಈ ಎರಡು ರೀತಿಯ ಪವಿತ್ರಕಗಳನ್ನು ಮತ್ತು ಲಿಂಗದ
ಮೇಲೆ ಅರ್ಪಿಸಿರುವ ಬಿಲ್ವಪತ್ರೆಯಲ್ಲಿನ ಪವಿತ್ರಕಗಳನ್ನು, ಹೀಗೆ ಮೂರು ರೀತಿಯ
ಪವಿತ್ರಕಗಳನ್ನು ಸೆಳೆದುಕೊಳ್ಳಲು ಮೂರು ಎಲೆಗಳಿರುವ ಬಿಲ್ವಪತ್ರೆಯನ್ನು ಶಿವನಿಗೆ
ಅರ್ಪಿಸುತ್ತಾರೆ.
ಎಳೆ ಬಿಲ್ವಪತ್ರೆಯು ಆಹತ (ನಾದ ಭಾಷೆ)
ಮತ್ತು ಅನಾಹತ (ಪ್ರಕಾಶಭಾಷೆ) ಧ್ವನಿಗಳನ್ನು ಒಟ್ಟುಗೂಡಿಸಬಲ್ಲದು. ಬಿಲ್ವಪತ್ರೆಯನ್ನು
ಲಿಂಗದ ಮೇಲೆ ಅರ್ಪಿಸುವಾಗ ಅದನ್ನು ಕೆಳಮುಖ ವಾಗಿ, ತೊಟ್ಟು ನಮ್ಮ ಕಡೆಗೆ ಬರುವಂತೆ
ಇಡುತ್ತಾರೆ. ಹೀಗೆ ಮಾಡುವುದರಿಂದ ಮೂರೂ ಎಲೆಗಳಿಂದ ಒಟ್ಟಿಗೆ ಬರುವ ಶಕ್ತಿಯು ನಮ್ಮ
ಕಡೆಗೆ ಬರುತ್ತದೆ.
ಈ ಮೂರು ಪವಿತ್ರಕಗಳ ಶಕ್ತಿಯಿಂದ ತ್ರಿಗುಣಗಳು ಕಡಿಮೆಯಾಗಲು ಸಹಾಯವಾಗುತ್ತದೆ.
೨. ಬಿಲ್ವವನ್ನು ಅರ್ಪಿಸುವ ಪದ್ಧತಿಗನುಸಾರ ವ್ಯಷ್ಟಿ ಮತ್ತು ಸಮಷ್ಟಿ ಸ್ತರದಲ್ಲಿ ಶಿವತತ್ತ್ವದಿಂದಾಗುವ ಲಾಭ
ಯಾವಾಗ
ನಾವು ಬಿಲ್ವದ ಎಲೆಗಳ ತೊಟ್ಟನ್ನು ಶಿವಲಿಂಗದ ಕಡೆಗೆ ಮತ್ತು ಎಲೆಗಳ ತುದಿಗಳನ್ನು ನಮ್ಮ
ಕಡೆಗೆ ಮಾಡಿ ಬಿಲ್ವವನ್ನು ಅರ್ಪಿಸುತ್ತೇವೆಯೋ, ಆಗ ಎಲೆಗಳ ತುದಿಗಳಿಂದ ಶಿವತತ್ತ್ವವು
ವಾತಾವರಣದಲ್ಲಿ ಹರಡುವ ಪ್ರಮಾಣವು ಹೆಚ್ಚಿಗೆ ಇರುತ್ತದೆ.
ಈ ಪದ್ಧತಿಯಿಂದ
ಸಮಷ್ಟಿಗೆ ಹೆಚ್ಚು ಲಾಭವಾಗುತ್ತದೆ. ಇದಕ್ಕೆ ವಿರುದ್ಧವಾಗಿ ಯಾವಾಗ ನಾವು ಬಿಲ್ವದ ಎಲೆಗಳ
ತೊಟ್ಟನ್ನು ನಮ್ಮ ಕಡೆಗೆ ಮತ್ತು ಎಲೆಗಳ ತುದಿಗಳನ್ನು ಲಿಂಗದ ಕಡೆಗೆ ಮಾಡಿ ಬಿಲ್ವವನ್ನು
ಅರ್ಪಿಸುತ್ತೇವೆಯೋ, ಆಗ ತೊಟ್ಟಿನಿಂದ ಕೇವಲ ಬಿಲ್ವವನ್ನು ಅರ್ಪಿಸುವವನಿಗೆ ಮಾತ್ರ
ಶಿವತತ್ತ್ವವು ಸಿಗುತ್ತದೆ.
ಈ ಪದ್ಧತಿಯಿಂದ ವ್ಯಷ್ಟಿ ಸ್ತರದಲ್ಲಿ ಹೆಚ್ಚಿಗೆ ಲಾಭವಾಗುತ್ತದೆ.
*ಬಿಲ್ವಪತ್ರೆಯನ್ನು ಕೆಳಮುಖವಾಗಿ ಏಕೆ ಅರ್ಪಿಸಬೇಕು?*
ಬಿಲ್ವಪತ್ರೆಯನ್ನು
ಶಿವಲಿಂಗದ ಮೇಲೆ ಕೆಳಮುಖವಾಗಿ ಅರ್ಪಿಸಿದರೆ ಅದರಿಂದ *ನಿರ್ಗುಣ ಸ್ತರದಲ್ಲಿನ*
ಸ್ಪಂದನಗಳು ಹೆಚ್ಚಿನ ಪ್ರಮಾಣದಲ್ಲಿ ಪ್ರಕ್ಷೇಪಿತವಾಗಿ ಭಕ್ತರಿಗೆ ಹೆಚ್ಚು
ಲಾಭವಾಗುತ್ತದೆ.
ಶಿವನಿಗೆ *ತಾಜಾ ಬಿಲ್ವಪತ್ರೆ*
ಸಿಗದಿದ್ದರೆ ಹಿಂದಿನ ದಿನ ತೆಗೆದಿಟ್ಟ ಬಿಲ್ವಪತ್ರೆಯು ನಡೆಯುತ್ತದೆ, ಆದರೆ *ಸೋಮವಾರದ
ಬಿಲ್ವಪತ್ರೆ* ಮರುದಿನ ನಡೆಯುವುದಿಲ್ಲ.
*ಬಿಲ್ವಾರ್ಚನೆ*
*‘ಓಂ
ನಮಃ ಶಿವಾಯ’* ಈ ಮಂತ್ರವನ್ನು ಜಪಿಸುತ್ತಾ ಅಥವಾ ಭಗವಾನ್ ಶಂಕರನ ಒಂದು ಹೆಸರನ್ನು
ಉಚ್ಚರಿಸುತ್ತಾ ಒಂದೊಂದೆ ಬಿಲ್ವಪತ್ರೆಯನ್ನು ಶಿವಲಿಂಗಕ್ಕೆ ಅರ್ಪಿಸುವುದನ್ನು
ಬಿಲ್ವಾರ್ಚನೆ ಎನ್ನುತ್ತಾರೆ.
ಬಿಲ್ವಪತ್ರೆಗಳನ್ನು ಇಡೀ
*ಶಿವಲಿಂಗವು ಪೂರ್ತಿಯಾಗಿ ಮುಚ್ಚುವಂತೆ ಅರ್ಪಿಸಬೇಕು*. ಬಿಲ್ವಪತ್ರೆಗಳನ್ನು ಮೂರ್ತಿಯ
ಚರಣಗಳಿಂದ (ಲಿಂಗದ ಕೆಳಭಾಗದಿಂದ) ಅರ್ಪಿಸಲು ಪ್ರಾರಂಭಿಸಿ ಮೇಲ್ಬದಿಗೆ ಹೋಗಬೇಕು.
ಇದರಿಂದ ಬಿಲ್ವಾರ್ಚನೆಯನ್ನು ಚರಣಗಳಿಂದ ಪ್ರಾರಂಭಿಸಿದ ಲಾಭವಾಗುತ್ತದೆ. ಅಲ್ಲದೇ
ಬಿಲ್ವಪತ್ರೆಗಳನ್ನು ಸರಿಯಾಗಿ ಅರ್ಪಿಸಿ ಇಡೀ ಮೂರ್ತಿಯನ್ನು ಮುಚ್ಚಲು ಸಾಧ್ಯವಾಗುತ್ತದೆ.
*ಆರೋಗ್ಯದ ದೃಷ್ಟಿಯಿಂದ ಬಿಲ್ವಪತ್ರೆಯ ಲಾಭಗಳು*:
೧. ಆಯುರ್ವೇದದಲ್ಲಿನ ಕಾಯಾಕಲ್ಪದಲ್ಲಿ ತ್ರಿದಲರಸಸೇವನೆಗೆ ಬಹಳ ಮಹತ್ವವನ್ನು ಕೊಡಲಾಗಿದೆ.
೨.
ಬಿಲ್ವದ ಫಲಕ್ಕೆ ಆಯುರ್ವೇದದಲ್ಲಿ *ಅಮೃತಫಲ* ಎನ್ನುತ್ತಾರೆ. ಬಿಲ್ವದಿಂದ ವಾಸಿಯಾಗದ
ಯಾವ ರೋಗವೂ ಇಲ್ಲ. ಯಾವುದಾದರೊಂದು ರೋಗಕ್ಕೆ ಯಾವ ಔಷಧಿಯೂ ಸಿಗದಿದ್ದರೆ ಬಿಲ್ವವನ್ನು
ಉಪಯೋಗಿಸಬೇಕು.
*ಗರ್ಭವತಿ ಸ್ತ್ರೀಯರಿಗೆ* ಮಾತ್ರ ಬಿಲ್ವವನ್ನು ಕೊಡಬಾರದು, ಏಕೆಂದರೆ ಅದನ್ನು ಸೇವಿಸಿದರೆ ಭ್ರೂಣವು ಮರಣ ಹೊಂದುವ ಸಾಧ್ಯತೆಯಿರುತ್ತದೆ.
************************************************************************************************************************************
ಎಲ್ಲ
ಹಬ್ಬಗಳಲ್ಲಿ ಶ್ರೇಷ್ಠವಾದ ಶಿವರಾತ್ರಿ ಉತ್ಸವ ಫೆಬ್ರವರಿ 24 ರಂದು ಬಂದಿದೆ.
ದೇಶದಾದ್ಯಂತ ಶಿವನ ಆರಾಧನೆಯಲ್ಲಿ ಭಕ್ತರು ನಿರತರಾಗಲಿದ್ದಾರೆ. ವೃತ ಮಾಡಿ, ಉಪವಾಸ ಮಾಡಿ
ಶಿವನ ಧ್ಯಾನದಲ್ಲಿ ಜಾಗರಣೆ ಮಾಡಲಿದ್ದಾರೆ.
ವೃತ, ಶಿವನ
ಪೂಜೆಗೂ ಮೊದಲು ಕೆಲವೊಂದು ವಿಷಯಗಳ ಬಗ್ಗೆ ಭಕ್ತರು ತಿಳಿದುಕೊಳ್ಳಬೇಕಾಗುತ್ತದೆ. ಓಂ ನಮಃ
ಶಿವಾಯ ಮಂತ್ರವನ್ನು ಜಪಿಸುತ್ತ ಶಿವಲಿಂಗಕ್ಕೆ ಜಲವನ್ನು ಅರ್ಪಣೆ ಮಾಡಿ. ಇದ್ರಿಂದ
ಸ್ವಭಾವದಲ್ಲಿ ಕಂಡು ಬರುವ ವಿಕಾರ ಶಾಂತವಾಗಲಿದೆ.
ಕೇಸರಿಯನ್ನು ಶಂಕರನಿಗೆ ಅರ್ಪಣೆ ಮಾಡುವುದರಿಂದ ಸಭ್ಯತೆ ಹಾಗೂ ಶಿಷ್ಟತೆ ಪ್ರಾಪ್ತವಾಗಲಿದೆ.
ಸಕ್ಕರೆ ಅರ್ಪಣೆ ಮಾಡುವುದರಿಂದ ಆರ್ಥಿಕ ಸಮಸ್ಯೆಗೆ ಮುಕ್ತಿ ಸಿಗಲಿದೆ.
ಹಾಲನ್ನು ಶಿವನಿಗೆ ನೀಡುವುದರಿಂದ ಶರೀರ, ಆರೋಗ್ಯದಿಂದ ಕೂಡಿರುತ್ತದೆ.
ಮೊಸರು ಅರ್ಪಣೆ ಮಾಡುವುದರಿಂದ ಸಮಸ್ಯೆಗಳು ದೂರವಾಗುತ್ತವೆ.
ತುಪ್ಪ ಅರ್ಪಿಸುವುದರಿಂದ ಶಕ್ತಿ ಹೆಚ್ಚಾಗುತ್ತದೆ.
ಸಮಾಜದಲ್ಲಿ ಘನತೆ ಹಾಗೂ ಗೌರವ ಗಳಿಸಲು ಚಂದನವನ್ನು ಶಿವನಿಗೆ ಅರ್ಪಿಸಬೇಕು.
ಜೇನುತುಪ್ಪ ಅರ್ಪಣೆ ಮಾಡುವುದರಿಂದ ಮಾತು ಸಿಹಿಯಾಗುತ್ತದೆ.
ಹಾಗೆ ಕೆಲವೊಂದು ವಸ್ತುಗಳನ್ನು ಮರೆತೂ ಶಿವನಿಗೆ ಅರ್ಪಣೆ ಮಾಡಬಾರದು.
ಶಾಸ್ತ್ರಗಳ ಅನುಸಾರ ಶಿವಲಿಂಗ ಪುರುಷತ್ವದ ಸೂಚನೆ. ಹಾಗಾಗಿ ಅರಿಶಿನ ಅರ್ಪಣೆ ನಿಷಿದ್ಧ.
ಶಿವಲಿಂಗಕ್ಕೆ ಕೆಂಪು ಬಣ್ಣದ ಬಟ್ಟೆ ಹಾಗೂ ಕೇತಕಿಯನ್ನು ಅರ್ಪಣೆ ಮಾಡಬಾರದು.
ಶಿವಲಿಂಗಕ್ಕೆ ಕುಂಕುಮ ನಿಷಿದ್ಧ.
ಶಿವನ ಪೂಜೆ ವೇಳೆ ಶಂಖವನ್ನು ಊದಬಾರದು.
ಶಿವಲಿಂಗಕ್ಕೆ ಅಥವಾ ಶಿವಪೂಜೆ ವೇಳೆ ತುಳಸಿಯನ್ನು ಬಳಸಬಾರದು.
*******************************************************************************************************************************
ಪೂಜೆ
ಎಂದರೆ ಹಲವಾರು ವಿಧಿ-ವಿಧಾನಗಳು, ಮಂತ್ರಗಳು ,ಇವುಗಳ ತಲೆ-ಬುಡ ಗೊತ್ತಿಲ್ಲ ಅಂತ
ಪೇಚಾಡುತ್ತ ಇದ್ದೀರಾ. ಈ ಗೊಂದಲದಲ್ಲಿ ಸಿಕ್ಕಿ ಹಾಕಿಕೊಳ್ಳ ಬೇಕಿಲ್ಲ. ಪೂಜಾ
ವಿಧಾನವನ್ನು ಸರಳವಾಗಿ ವಿವರಿಸಬಹುದು. ದೇವರ ಪೂಜೆಯನ್ನು ಅತಿಥಿ ಸತ್ಕಾರಕ್ಕೆ
ಹೋಲಿಸಿಕೊಳ್ಳಿ . ದೇವರು ನಿಮ್ಮ ಮನೆಗೆ ಬಂದಿರುವ ಅತಿಥಿ. ಅತಿಥಿಗಳಿಗೆ ಹೇಗೆ ಉಪಚಾರ
ಮಾಡುತ್ತಿರೋ , ಹಾಗೆಯೆ ದೇವರಿಗೆ ಪೂಜೆ ರೂಪದಲ್ಲಿ ಉಪಚಾರ ಮಾಡಬೇಕು ಅಷ್ಟೆ.
ಮೊದಲು ಸಂಕಲ್ಪ ಮಾಡಿ, ನಂತರ ಧ್ಯಾನ ಮಾಡಿ ದೇವರನ್ನು ಆಹ್ವಾನ ಮಾಡುವುದು.
ಸಂಕಲ್ಪ
- ಅಂದರೆ ನಿರ್ಧಾರ, ನಿರ್ಣಯ, ಚಿತ್ತ. ಈ ದಿನ ಈ ಪೂಜೆ ಮಾಡುತ್ತ ಇದ್ದೀನಿ ಅಂತ
ನಿರ್ಧಾರ ಮಾಡುವುದೇ ಸಂಕಲ್ಪ. ಸಂಕಲ್ಪ ಮಾಡುವಾಗ ಆ ದಿನದ ಸಂವತ್ಸರ, ಋತು , ಮಾಸ, ಪಕ್ಷ,
ವಾರ, ತಿಥಿ, ನಕ್ಷತ್ರವನ್ನು ಹೆಸರಿಸಬೇಕು. ಸಂಕಲ್ಪ ಮಂತ್ರ ಇಲ್ಲಿದೆ
ಧ್ಯಾನ - ನೀವು ಪೂಜೆ ಮಾಡುತ್ತಿರುವ ದೇವರನ್ನು ಭಕ್ತಿಯಿಂದ ಧ್ಯಾನ ಮಾಡಿ ಆವಾಹನೆ ಮಾಡುವುದು.
ಸಾಮಾನ್ಯವಾಗಿ
ಷೋಡಶೋಪಚಾರದಿಂದ ಪೂಜೆ ಮಾಡಿ ಅಂತ ನೀವು ಕೇಳಿರಬಹುದು. ಷೋಡಶ ಅಂದರೆ 16. ಹದಿನಾರು
ಬಗೆಯಿಂದ ದೇವರಿಗೆ ಉಪಚಾರ ಮಾಡಿ ಎಂದರ್ಥ. ಇವುಗಳ ವಿವರ ಕೆಳಗಿದೆ:
1.ಆವಾಹನೆ - ಅಂದರೆ ಆಹ್ವಾನ . ದೇವರನ್ನು ನಿಮ್ಮ ಮನೆಗೆ ಅಥವಾ ಪೂಜೆ ಮಾಡುತ್ತಿರುವ ಜಾಗಕ್ಕೆ ಆಹ್ವಾನ ಮಾಡುವುದು.
2.ಆಸನ - ಅಂದರೆ ಕುಳಿತುಕೊಳ್ಳುವ ಜಾಗ . ದೇವರ ಪ್ರತಿಮೆಯನ್ನು ಇಡುವ ವೇದಿಕೆ/ ಮಣೆ ಮೇಲೆ ಆಸೀನ ಮಾಡಿಸುವುದು.
3.ಪಾದ್ಯ - ಕಾಲು ತೊಳೆದುಕೊಳ್ಳುವುದಕ್ಕೆ ನೀರು ಕೊಡುವುದು.
4.ಅರ್ಘ್ಯ - ಕೈ ತೊಳೆದುಕೊಳ್ಳುವುದಕ್ಕೆ ನೀರು ಕೊಡುವುದು.
5.ಆಚಮನ - ಕುಡಿಯುವುದಕ್ಕೆ ನೀರು ಕೊಡುವುದು.
6.ಸ್ನಾನ - ಶುದ್ಧೋದಕ (ನೀರು) ಮತ್ತು ಪಂಚಾಮೃತದಿಂದ ಸ್ನಾನ ಮಾಡಿಸುವುದು.
7.ವಸ್ತ್ರ
- ಧರಿಸಲು ಉಡುಪು ಕೊಡುವುದು . ಗೆಜ್ಜೆವಸ್ತ್ರಗಳನ್ನೂ ದೇವರಿಗೆ ಇಡುವುದು.ಜೊತೆಗೆ
ಉಪವೀತ(ಜನಿವಾರ),ಆಭರಣವನ್ನ(ಬಳೆ-ಬಿಚ್ಚೋಲೆ
)ಸಮರ್ಪಿಸುವುದು.
8.ಹರಿದ್ರ, ಕುಂಕುಮ, ಗಂಧ, ಅಕ್ಷತ - ಅರಿಶಿನ , ಕುಂಕುಮ, ಶ್ರೀಗಂಧ , ಮಂತ್ರಾಕ್ಷತೆಯನ್ನು ದೇವರಿಗೆ ಅರ್ಪಿಸುವುದು.
9.ಪುಷ್ಪ ಮಾಲ - ಹೂವು, ಪತ್ರೆಗಳಿಂದ ದೇವರಿಗೆ ಅಲಂಕಾರ ಮಾಡುವುದು.
10. ಅರ್ಚನೆ/ಅಷ್ಟೋತ್ತರ - ನೂರೆಂಟು ನಾಮಗಳಿಂದ ದೇವರನ್ನು ಸ್ಮರಣೆ ಮಾಡುವುದು.
11.ಧೂಪ - ಪರಿಮಳಯುಕ್ತವಾದ ಧೂಪವನ್ನು ಅರ್ಪಿಸುವುದು.
12.ದೀಪ - ದೀಪ ಸಮರ್ಪಣೆ ಮಾಡುವುದು.
13.ನೈವೇದ್ಯ, ತಾಂಬೂಲ - ದೇವರಿಗೆ ವಿಧ ವಿಧ ಭಕ್ಷ್ಯಗಳ ಭೋಜನ ಅರ್ಪಿಸುವುದು . ಊಟದ ನಂತರ ವೀಳೆಯ, ಅಡಿಕೆ, ತೆಂಗಿನಕಾಯಿ ತಾಂಬೂಲ ಕೊಡುವುದು.
14. ನೀರಾOಜನ - ಕರ್ಪುರದಿಂದ ಮಂಗಳಾರತಿ ಮಾಡುವುದು.
15. ನಮಸ್ಕಾರ - ಪ್ರದಕ್ಷಿಣೆ ಮಾಡಿ ದೇವರಿಗೆ ಸಾಷ್ಟಾಂಗ ನಮಸ್ಕಾರ ಮಾಡುವುದು.
16.
ಪ್ರಾರ್ಥನೆ - ನಿಮ್ಮ ಇಷ್ಟಗಳನ್ನು ನಡೆಸಿ ಕೊಡು ಎಂದು ದೇವರಲ್ಲಿ ಅರಿಕೆ / ಪ್ರಾರ್ಥನೆ
ಮಾಡುವುದು. ಪೂಜೆಯ ನಂತರದೇವರು ಅನುಗ್ರಹಿಸಿರುವ ಅರಿಶಿನ, ಕುಂಕುಮ, ನೈವೇದ್ಯವನ್ನು
ಪ್ರಸಾದ ರೂಪವಾಗಿ ಸ್ವೀಕಾರ ಮಾಡುವುದು.
ಹೀಗೆ ಕ್ರಮವಾಗಿ ಪೂಜೆ ಮಾಡಿ ದೇವರನ್ನು ಸಂತೃಪ್ತಿ ಪಡಿಸಿದರೆ, ಭಗವಂತನು ತನ್ನ ಕೃಪೆಯನ್ನು ನಮ್ಮ ಮೇಲೆ ಅಪಾರವಾಗಿ ಅನುಗ್ರಹಿಸುತ್ತಾನೆ :)
***********************************************************************************************************"ದೇವರ ಮನೆ ಮತ್ತು ಪೂಜೆ" ಯ ವಿಷಯಗಳು..
೧. ದೇವರ ಮನೆ, ದೀಪಗಳು , ದೇವರ ಪೂಜಾ ಸಾಮಗ್ರಿಗಳು ಎಷ್ಟು ಶುದ್ಧವಾಗಿರುತ್ತದೋ ಅಷ್ಟೂ ಶುಭಫಲವಿರುತ್ತದೆ..
೨. ದೇವರ ಮನೆಯಲ್ಲಿ ಒಡೆದಿರುವ, ಭಿನ್ನವಾಗಿರುವ, ವಿಗ್ರಹಗಳು, ಫೋಟೋಗಳು, ಯಂತ್ರಗಳು ಇಡಬೇಡಿ..
೩. ದೇವರ ಮನೆಯಲ್ಲಿ ಗುಡಿಸೋ ಕಸವನ್ನು ಒಂದು ಬಟ್ಟೆಯಿಂದ ಗುಡಿಸಿದರೆ ತುಂಬಾ ಒಳ್ಳೆಯದು.
೪. ದೇವರ ಮನೆಯನ್ನು ಅರಿಸಿನ ಹಾಕಿದ ನೀರಿನಿಂದ ಶುದ್ಧ ಮಾಡಿ, ಆ ಮನೆಯಲ್ಲಿ ದೈವಕಳೆ ವೃದ್ಧಿಸಿ, ಹಣದ ಸಮಸ್ಯೆ ನಿವಾರಣೆಯಾಗುತ್ತದೆ,
ನೆಲ ಒಣಗುವವರೆಗೂ ತುಳಿಯುವ ಹಾಗಿಲ್ಲ..
೫. ದೇವರ ಮನೆಯಲ್ಲಿ ತುಂಬಾ ವಿಗ್ರಹಗಳು ಬೇಡ, ವಿಗ್ರಹಗಳು ಜಾಸ್ತಿಯಾದರೆ "ನೈವೇದ್ಯ "ದ ಪ್ರಮಾಣವೂ ಜಾಸ್ತಿ ಮಾಡಬೇಕಾಗುವುದು..
೬. ತುಂಬಾ ಎತ್ತರದ ವಿಗ್ರಹಗಳು ಬೇಡ, ಅಕಸ್ಮಾತ್ತಾಗಿ ಇದ್ದರೆ ಪ್ರತಿದಿನ ಒಂದು ಸೇರು ಅಕ್ಕಿಯ ಅನ್ನವನ್ನಾದರೂ ನೈವೇದ್ಯ ಮಾಡಬೇಕಾಗುವುದು..
೭. ದೇವರ ವಿಗ್ರಹಗಳನ್ನು ಮಂಗಳವಾರ, ಶನಿವಾರ , ಶುಕ್ರವಾರದಂದು ಶುದ್ಧಿ ಮಾಡುವುದು ಬೇಡ..
(ಅನಿವಾರ್ಯ ಪರಿಸ್ಥತಿಗಳಲ್ಲಿ, ಗ್ರಹಣ ಕಾಲದಲ್ಲಿ, ಇತ್ಯಾದಿ ಸಮಯದಲ್ಲಿ ಮಾಡಬಹುದು)
೮. ಪ್ರತೀ ಅಮಾವಾಸ್ಯೆ ಮತ್ತು ಪೌರ್ಣಾಮಿಯ ಮರುದಿನ ದೇವರ ವಿಗ್ರಹಗಲಕನ್ನು "ಅರಿಸಿನದ ನೀರಿನಿಂದ ಶುದ್ಧ ಮಾಡಿ..
೯. ದೇವರ ಪೂಜೆಗೆ "ಆಂಜನೇಯ" ಸ್ವಾಮಿ ಇರೋ ಘಂಟೆಯನ್ನೇ ಉಪಯೋಗಿಸಿ, ಆಂಜನೇಯ ದೇವರ ಪಾದವನ್ನು ಹಿಡಿದು ಘಂಟೆಬಾರಿಸಬೇಕು..
೧೦.
ದೇವರುಗಳು ಯಾವಾಗಲೂ ಆಹಾರ ಕೇಳುತ್ತಿರುತ್ತವೆ , ದೇವರ ಹತ್ತಿರ ಮಧುಪರ್ಕ ಇರಿಸಿರಿ,
ರಾತ್ರಿ ಮಲಗೋಕೆ ಮುಂಚೆ ಅದನ್ನು ಮನೆಯವರೆಲ್ಲಾ ಅಥವಾ ಹಿರಿಯರಾಗಲೀ ಭಕ್ತಿಯಿಂದ
ಸೇವಿಸಿ..
೧೧. ದೇವರ ಪೂಜೆ ಮಾಡೋವಾಗ ಆಕಳಿಕೆ ,ಕೋಪ, ಇವೆಲ್ಲದರಿಂದ ದೂರ ಇರಿ, ಅನಗತ್ಯ ಚಟುವಟಿಕೆಗಳು ಬೇಡ..
೧೨. ಸಂಧ್ಯಾವಂದನೆ ಮತ್ತು ಸ್ತ್ರೀಯರ ತುಳಸೀ ಪೂಜೆ ಇಲ್ಲದಿದ್ದರೆ ಯಾವ ಪೂಜೆಯೂ ಫಲ ಕೊಡುವುದಿಲ್ಲ..
೧೩. ದೇವರ ಪೂಜೆಯ ಸಮಯದಲ್ಲಿ ಪುರುಷರು ಮೇಲುಹೊದಿಕೆ ಅಂದರೆ ಶಲ್ಯವನ್ನು ಧರಿಸಿರಲೇಬೇಕು..
ಇಲ್ಲದಿದ್ದರೆ ಪೂಜಾ ಫಲ ರಾಕ್ಷಸರ ಪಾಲಾಗುವುದು..
ಬರೀ ಮೈಯಲ್ಲಿ ಕುಳಿತು ಪೂಜೆ ಮಾಡುವುದು, ಊಟ ಮಾಡುವುದು ಒಳಿತಲ್ಲ..
೧೪. ಹಣೆಯಲ್ಲಿ ಕುಂಕುಮ, ಗಂಧ, ಅಥವಾ ಭಸ್ಮ .ಇತ್ಯಾದಿ ಯಾವುದದಾರೂ ಧರಿಸದೇ ಪೂಜೆ ಮಾಡಬಾರದು..
ಧರಿಸಿಯೇ ಪೂಜೆ ಮಾಡಬೇಕು, ಇಲ್ಲದಿದ್ದರೆ ಪೂಜಾಫಲ ನಶಿಸುವುದು..
೧೫. ದೇವರ ಪೂಜೆಗೆ "ಹಸಿಯಾದ ಹಾಲನ್ನು ಮಾತ್ರ ಬಳಸಿ..
೧೬. ದೇವರ ನೈವೇದ್ಯ ಮಾಡೋವಾಗ ವೀಳ್ಯದೆಲೆ, ಅಡಿಕೆ ತಾಂಬೂಲ ಇಲ್ಲದ ನೈವೇದ್ಯ ಫಲ ಕೊಡುವುದಿಲ್ಲ..
ನೈವೇದ್ಯ ಮಾಡೋವಾಗ "ತುಳಸೀಪತ್ರೆಯನ್ನು" ಬಳಸಬೇಕು..
೧೭. ದೇವರ ಪೂಜೆಗಳು ಸಂಕಲ್ಪ ಇಲ್ಲದೇ ಮಾಡಬೇಡಿ, ಸಂಕಲ್ಪ ಇದ್ದರೆ ನಿಮ್ಮ ಪ್ರಾರ್ಥನೆಗಳು ಬೇಗ ಈಡೇರುತ್ತವೆ..
೧೮. ದೇವರ ಮನೆಯಲ್ಲಿ ಚಿಕ್ಕದೀಪಗಳನ್ನು ಜೋಡಿಸಿ ಇಡಿ, ದೊಡ್ಡ ದೀಪಗಳಾಗಿದ್ದರೆ ಎಡಗಡೆ ಬಲಗಡೆ ಇಡಿ..
೧೯. ಗಣಪತಿ ಪೂಜೆ, ಮನೆದೇವರ ಪೂಜೆ, ದೇವಿ ಪೂಜೆಯಿಂದ ಮಾತ್ರ ಪೂರ್ಣ ಪೂಜಾಫಲ ದೊರೆಯವುದು..
ದೇವಿಯು ಎಲ್ಲಾ ದೇವರುಗಳ ತಾಯಿಯಾದ್ದರಿಂದ ಅಮ್ಮನವರನ್ನು ಪೂಜಿಸಿದರೇ ಮನೆಗೆ ನಮಗೆ ರಕ್ಷಣೆ..
ಮನೆದೇವರ
ಪೂಜೆ ಇಲ್ಲದಿದ್ದರೆ ಯಾವ ದೇವರಗಳೂ ನಿಮ್ಮ ಮನೆಯನ್ನು ರಕ್ಷಿಸುವುದಿಲ್ಲ, ಎಂಥಾ
ಕಷ್ಟಬಂದರೂ ನಮ್ಮ ಮನೆಯನ್ನು ನಮ್ಮನ್ನು ರಕ್ಷಿಸುವುದು "ಮನೆದೇವರೇ.."!
೨೦. ಮನೆಯ ಹೊಸ್ತಿಲನ್ನು ಪೊರಕೆಯಿಂದ ಗುಡಿಸಬೇಡಿ, ಹೊಸ್ತಿಲಲ್ಲಿ "ಮಹಾಲಕ್ಷ್ಮೀ" ಸಾನಿಧ್ಯ ಇರುತ್ತದೆ..
೨೧.
"ಶ್ರೀ ಚಕ್ರ" , ಬಲಮುರಿ ಶಂಖ, ಬಲಮುರಿ ಗಣೇಶ, ಸಾಲಿಗ್ರಾಮಗಳು, ಎರಡೂ ಪಾದ ಕಾಣಿಸೋ
ಮಹಾಲಕ್ಷ್ಮೀ .. ಇತ್ಯಾದಿ ಈ ದೇವರುಗಳೆಲ್ಲಾ "ಅಷ್ಟೈಶ್ವರ್ಯಗಳನ್ನು ಪ್ರಧಾನಿಸೋ
ದೇವರುಗಳು, ಈ ದೇವರುಗಳ ಪೂಜೆ ತುಂಬಾ ವಿಶೇಷವಾಗಿರುತ್ತದೆ..
************************************************************************************************************ 2.
ದೇವರಿಗೆ ಮಾಡಿದ ಮಂಗಳಾರತಿಯನ್ನು ತೆಗೆದುಕೊಳ್ಳುವಾಗ ಎರಡೂ ಕೈಗಳಿಂದ ತೆಗೆದುಕೊಳ್ಳಬಾರದು ಒಂದೇ ಕೈಯಿಂದ ತೆಗೆದುಕೊಳ್ಳಬೇಕು ಎಂದು ಹೇಳುತ್ತಾರೆ .ಏಕೆ? ಇದಕ್ಕೆ ಯಾವುದಾದರೂ ಪ್ರಮಾಣ ಉಂಟಾ?
ಜಿಜ್ಞಾಸೆ :
ಉತ್ತರ ||
ನೀರಾOಜನ ಕಾಲದಲ್ಲಿ ದೇವರ ಮುಖದರ್ಶನ ಕೋಟಿ ಬ್ರಹ್ಮ ಹತ್ಯೆಗಳನ್ನು ಕೋಟಿ ಅಗಮ್ಯಾಗಮನ ದೋಷಗಳನ್ನು ನಾಶಮಾಡುತ್ತದೆ.
ಆರ್ತಿಕ್ಯಗ್ರಹಣೇ ಕಾಲೇ ಏಕಹಸ್ತೇನ ಯೋಜಯೇತ್ |
ಯದಿ ಹಸ್ತ ದ್ವಯೇನೈವ ಮಮ ದ್ರೋಹೀ ನ ಸಂಶಯ: ||
ಮಂಗಳಾರತಿಯನ್ನು
ಎರಡು ಕೈಗಳಿಂದ ಸ್ವೀಕಾರ ಮಾಡಬಾರದು. ಆರತಿಯನ್ನು ಬಲ ಕೈಯಿಂದ ಮಾತ್ರ ತೆಗೆದು
ಕೊಳ್ಳಬೇಕು. ಈ ವಿಷಯವನ್ನು ವರಾಹದೇವರು ತನ್ನ ಪತ್ನಿಗೆ ತಿಳಿಸುತ್ತಾನೆ.
ಆರತಿಯನ್ನು ಮೊದಲು ತಲೆಗೆ ತೆಗೆದುಕೊಂಡು, ಆಮೇಲೆ ಹೃದಯ, ಆಮೇಲೆ ನಾಭಿಯ ಎಡಭಾಗದಲ್ಲಿ ತೆಗೆದುಕೊಳ್ಳಬೇಕು.
ಶಿರದಲ್ಲಿ ಇರುವ ಅಮೃತವನ್ನು ಹೃದಯಕ್ಕೆ ತಂದು, ಹೃದಯದಲ್ಲಿ ಇರುವ ಅಗ್ನಿಯನ್ನು ನಾಭಿಯ ಎಡಭಾಗದಲ್ಲಿ ಇರುವ ಪಾಪಪುರುಷನಲ್ಲಿ ಸುಡಬೇಕು.
ಅಲ್ಲಿಗೆ ನಮ್ಮ ದೇಹ ಶುದ್ಧ.
ಈ ಅನುಸಂಧಾನ ಮುಖ್ಯ.
|| ಕೃಷ್ಣಾರ್ಪಣಮಸ್ತು ||
**********************************************************************************************************
3.ಹಿಂದೂ ಧರ್ಮದವರೆಂದಮೇಲೆ ನಿಮಗಿದು ತಿಳಿದಿರಲೇ ಬೇಕು.....
3.ಹಿಂದೂ ಧರ್ಮದವರೆಂದಮೇಲೆ ನಿಮಗಿದು ತಿಳಿದಿರಲೇ ಬೇಕು.....
*ವೇದಗಳು (೪)*
ಋಗ್ವೇದ,
ಯಜುರ್ವೇದ,
ಸಾಮವೇದ,
ಅಥರ್ವವೇದ.
*********************
*ರಾಶೀಗಳು (೧೨)*
ಮೇಷ,
ವೃಷಭ,
ಮಿಥುನ,
ಕರ್ಕ,
ಸಿಂಹ,
ಕನ್ಯಾ,
ತುಲಾ,
ವೃಶ್ಚಿಕ,
ಧನು,
ಮಕರ,
ಕುಂಭ,
ಮೀನ.
*********************
*ಋತುಗಳು (೬) ಮತ್ತು ಮಾಸ (೧೨) *
ವಸಂತ (ಚೈತ್ರ-ವೈಶಾಖ),
ಗ್ರೀಷ್ಮ (ಜೇಷ್ಠ-ಆಷಾಢ) ,
ವರ್ಷಾ (ಶ್ರಾವಣ-ಭಾದ್ರಪದ),
ಶರದ (ಅಶ್ವಿನ-ಕಾರ್ತಿಕ),
ಹೇಮಂತ (ಮಾರ್ಗಶಿರ-ಪೌಷ),
ಶಿಶಿರ (ಮಾಘ-ಫಾಲ್ಗುಣ).
*******************
*ದಿಕ್ಕುಗಳು* (೧೦)
ಪೂರ್ವ,
ಪಶ್ಚಿಮ,
ಉತ್ತರ,
ದಕ್ಷಿಣ,
ಈಶಾನ್ಯ,
ಆಗ್ನೇಯ,
ವಾಯವ್ಯ,
ನೈಋತ್ಯ,
ಆಕಾಶ,
ಪಾತಾಳ.
******************
*ಸಂಸ್ಕಾರಗಳು* (೧೬)
ಗರ್ಭಧಾನ,
ಪುಂಸವನ,
ಸೀಮನ್ತೋತ್ರಯನ,
ಜಾತಕರ್ಮ,
ನಾಮಕರಣ,
ನಿಷಕ್ರಮಣ,
ಅನ್ನಪ್ರಾಶನ,
ಚೂಡಾಕರ್ಮ,
ಕರ್ಣಭೇದ,
ಯಜ್ಞೋಪವೀತ,
ವೇದಾರಂಭ,
ಕೇಶಾಂತ,
ಸಮಾವರ್ತನ,
ವಿವಾಹ,
ಆವಸಥ್ಯಧಾನ,
ಶ್ರೌತಧಾನ.
******************
*ಸಪ್ತ ಋಷಿಗಳು* (೭)
ವಿಶ್ವಾಮಿತ್ರ,
ಜಮದಗ್ನಿ,
ಭಾರದ್ವಾಜ,
ಗೌತಮ,
ಅತ್ರಿ,
ವಸಿಷ್ಠ,
ಕಶ್ಯಪ.
******************
*ಸಪ್ತಪರ್ವತಗಳು*
ಹಿಮಾಲಯ (ಉತ್ತರ ಭಾರತ)
ಮಲಯ (ಕರ್ನಾಟಕ ಮತ್ತು ತಮಿಳನಾಡು) ,
ಸಹ್ಯಾದ್ರೀ (ಮಹಾರಾಷ್ಟ್ರ) ,
ಮಹೇಂದ್ರ (ಉಡಿಸಾ),
ವಿಂಧ್ಯಾಚಲ (ಮಧ್ಯಪ್ರದೇಶ),
ಅರವಲೀ (ರಾಜಸ್ಥಾನ),
ರೈವತಕ (ಗಿರನಾರ-ಗುಜರಾತ)
******************
*ಜ್ಯೋತಿರ್ಲಿಂಗಗಳು* (೧೨)
ಸೋಮನಾಥ ನಾಗೇಶ (ಗುಜರಾಥ),
ಮಲ್ಲಿಕಾರ್ಜುನ (ಆಂಧ್ರಪ್ರದೇಶ),
ರಾಮೇಶ್ವರ (ತಮಿಳನಾಡು),
ಮಹಾಕಾಲೇಶ್ವರ (ಉಜ್ಜೈನ),
ಓಂಕಾರೇಶ್ವರ (ಮಧ್ಯಪ್ರದೇಶ)
ಕೇದಾರನಾಥ (ಉತ್ತರಾಂಚಲ),
ವಿಶ್ವನಾಥ (ಉತ್ತರ ಪ್ರದೇಶ),
ಪರಳೀ ವೈಜನಾಥ,
ತ್ರ್ಯಂಬಕೇಶ್ವರ ,
ಘೃಷ್ಣೇಶ್ವರ ,
ಭೀಮಾಶಂಕರ (ಎಲ್ಲ ಮಹಾರಾಷ್ಟ್ರ).
*****************
*ಪೀಠಗಳು* (೪)
ಶಾರದಾಪೀಠ (ದ್ವಾರಕಾ-ಗುಜರಾತ),
ಜ್ಯೋತಿಷ್ಪೀಠ (ಜೋಶೀಮಠ- ಉತ್ತರಾಂಚಲ),
ಗೋವರ್ಧನಪೀಠ(ಜಗನ್ನಾಥಪುರೀ- ಉಡೀಸಾ),
ಶೃಂಗೇರಿ ಪೀಠ (ಶೃಂಗೇರಿ- ಕರ್ನಾಟಕ)
***************************************************************************************************
*ಚಾರಧಾಮಗಳು*
ಬದ್ರಿನಾಥ (ಉತ್ತರಾಂಚಲ),
ರಾಮೇಶ್ವರಮ (ತಮಿಳನಾಡು),
ದ್ವಾರಿಕಾ (ಗುಜರಾತ),
ಜಗನ್ನಾಥಪುರೀ (ಉಡೀಸಾ).
**************
*ಸಪ್ತಪುರಿಗಳು*
ಅಯೋಧ್ಯಾ,
ಮಥುರಾ,
ಕಾಶೀ (ಎಲ್ಲ ಉತ್ತರ ಪ್ರದೇಶ),
ಹರಿದ್ವಾರ (ಉತ್ತರಾಂಚಲ),
ಕಾಂಚೀಪುರಂ (ತಮಿಳನಾಡು) ,
ಅವಂತಿಕಾ (ಉಜ್ಜೈನ - ಮ.ಪ್ರ.),
ದ್ವಾರಿಕಾ (ಗುಜರಾಥ).
********************
*ಚಾರಕುಂಭಗಳು*
ಹರಿದ್ವಾರ (ಉತ್ತರಖಂಡ),
ಪ್ರಯಾಗ (ಉತ್ತ ಪ್ರದೇಶ),
ಉಜ್ಜೈನ (ಮಧ್ಯ ಪ್ರದೇಶ) ,
ನಾಶಿಕ(ಮಹಾರಾಷ್ಟ್ರ)
***********************
*ಪವಿತ್ರ-ಸ್ಮರಣೀಯ ನದಿಗಳು*
ಗಂಗಾ ,
ಕಾವೇರಿ,
ಯಮುನಾ,
ಸರಸ್ವತೀ,
ನರ್ಮದಾ,
ಮಹಾನದೀ,
ಗೋದಾವರೀ,
ಕೃಷ್ಣಾ ,
ಬ್ರಹ್ಮಪುತ್ರಾ.
********************
*ಅಷ್ಟಲಕ್ಷ್ಮೀಯರು* (೮)
ಆದಿಲಕ್ಷ್ಮೀ ,
ವಿದ್ಯಾಲಕ್ಷ್ಮೀ ,
ಸೌಭಾಗ್ಯಲಕ್ಷ್ಮೀ,
ಅಮೃತಲಕ್ಷ್ಮೀ,
ಕಾಮಲಕ್ಷ್ಮೀ,
ಸತ್ಯಲಕ್ಷ್ಮೀ,
ಭೋಗಲಕ್ಷ್ಮೀ,
ಯೋಗಲಕ್ಷ್ಮೀ.
*********************
*ಯುಗಗಳು*(೪)
ಸತ್ಯಯುಗ,
ತ್ರೇತಾಯುಗ,
ದ್ವಾಪರಯುಗ,
ಕಲಿಯುಗ.
********************
*ಪುರುಷಾರ್ಥ* (೪)
ಧರ್ಮ ,
ಅರ್ಥ ,
ಕಾಮ ,
ಮೋಕ್ಷ.
***********************
*ಪ್ರಕೃತಿಯ ಗುಣಗಳು* (೩)
ಸತ್ವ ,
ರಜ ,
ತಮ.
*******************
*ನಕ್ಷತ್ರಗಳು* (೨೮)
ಅಶ್ವನೀ,
ಭರಣೀ,
ಕೃತಿಕಾ,
ರೋಹಿಣೀ,
ಮೃಗ,
ಆರ್ದ್ರಾ,
ಪುನರ್ವಸು,
ಪುಷ್ಯ,
ಆಶ್ಲೇಷಾ,
ಮೇಘಾ,
ಪೂರ್ವಾಫಾಲ್ಗುನೀ,
ಉತ್ತರಾ ಫಾಲ್ಗುನೀ,
ಹಸ್ತ,
ಚಿತ್ರಾ,
ಸ್ವಾತೀ,
ವಿಶಾಖಾ,
ಅನುರಾಧಾ,
ಜ್ಯೇಷ್ಠ, ಮೂಲ,
ಪೂರ್ವಾಷಾಢಾ,
ಉತ್ತರಾಷಾಢಾ,
ಶ್ರಾವಣ,
ಘನಿಷ್ಠಾ,
ಶತತಾರಕಾ,
ಪೂರ್ವಾಭಾದ್ರಪದಾ,
ಉತ್ತರಾಭಾದ್ರಪದಾ,
ರೇವತೀ,
ಅಭಿಜಿತ.
******************
*ದಶಾವತಾರ* (೧೦)
ಮತ್ಸ್ಯ,
ಕೂರ್ಮ,
ವರಾಹ,
ನರಸಿಂಹ,
ವಾಮನ,
ಪರಶುರಾಮ,
ರಾಮ,
ಕೃಷ್ಣ,
ಬುದ್ಧ,
ಕಲ್ಕಿ.
********************************************************************
********************************************************************
NAMES OF SAMVATSARAS:
*******************************************************************
4.ಮರದ ಬಾಗಿಣದಲ್ಲಿ ಹಾಕುವ ಪದಾರ್ಥಗಳು ಮತ್ತು ದೇವತೆಗಳು..
********************************************************************
*ಪಂಚಮಗಳು*
1 *ಪಂಚಗವ್ಯ:
1 *ಪಂಚಗವ್ಯ:
ಹಾಲು,
ಮೊಸರು,
ತುಪ್ಪ,
ಗೋಮೂತ್ರ,
ಗೋಮಯ.
2 *ಪಂಚಾಮೃತ :
ಹಾಲು,
ಮೊಸರು,
ತುಪ್ಪ,
ಜೇನುತುಪ್ಪ,
ಸಕ್ಕರೆ.
3 *ಪಂಚಭೂತ :
ಭೂಮಿ,
ನೀರು,
ಬೆಂಕಿ,
ವಾಯು,
ಆಕಾಶ.
4 *ಪಂಚಗುಣ :
ಗಂಧ.
ರಸ,
ರೂಪ,
ಸ್ಪರ್ಶ,
ಶಬ್ದ.
5 *ಪಂಚೇದ್ರಿಯ :
ಕಣ್ಣು,
ಕಿವಿ,
ಮೂಗು,
ಮೂಗು,
ನಾಲಗೆ,
ಚರ್ಮ.
6 *ಪಂಚಪ್ರಾಣ :
ಪ್ರಾಣ,
ಅಪಾನ,
ವ್ಯಾನ,
ಉದಾನ,
ಉದಾನ,
ಸಮಾನ.
7 *ಪಂಚಪಲ್ಲವ :
ನೆಲ್ಲಿ,
ಅಶ್ವತ್ಥ,
ನೇರಳೆ,
ಮಾವು,
ಬಸರಿ.
8 *ಪಂಚಾಂಗ :
ತಿಥಿ,
ನಕ್ಷತ್ರ,
ವಾರ,
ಯೋಗ,
ಯೋಗ,
ಕರಣ.
9 *ಪಂಚರತ್ನ :
ಚಿನ್ನ,
ಬೆಳ್ಳಿ,
ಮುತ್ತು,
ಮಾಣಿಕ್ಯ,
ಹವಳ.
10 *ಪಂಚಾಕ್ಷರಿ :
ನ,
ಮಃ,
ಶಿ,
ವಾ,
ಯ.
ಯ.
11 *ಪಂಚಶೀಲ :
ಅಹಿಂಸೆ,
ಸತ್ಯ,
ಆಸ್ತೇಯ,
ಅಪರಿಗ್ರಹ,
ಬಹ್ಮಚರ್ಯ.
12 *ಪಂಚಕಜ್ಜಾಯ :
ಕಡಲೆಕಾಯಿ,
ಸಕ್ಕರೆ,
ಎಳ್ಳು,
ಹುರಿಕಡಲೆ,
ಕೊಬ್ಬರಿ.
13 *ಪಂಚಕನ್ಯೆಯರು :
ಅಹಲ್ಯೆ,
ದ್ರೌಪದಿ,
ಸೀತೆ,
ತಾರಾ,
ಮಂಡೋದರಿ.
14 *ಪಂಚಪಾಂಡವರು :
ಧರ್ಮರಾಯ,
ಭೀಮ,
ಅರ್ಜುನ,
ನಕುಲ,
ಸಹದೇವ.
NAMES OF SAMVATSARAS:
ನಾವೆಲ್ಲರೂ
ನಮ್ಮ ಹುಟ್ಟಿದ ವರ್ಷವನ್ನು ಥಟ್ಟನೆ ಹೇಳುತ್ತೇವೆ. ಆದರೆ ಭಾರತೀಯ ಪಂಚಾಂಗ ರೀತ್ಯಾ
ಹುಟ್ಟಿದ ಸಂವತ್ಸರದ ಹೆಸರು ಹೇಳಲು ಮಾತ್ರ ತಡಕಾಡುತ್ತೇವೆ . ಇಗೋ ಇಲ್ಲಿದೆ ನೋಡಿ ನಿಮ್ಮ
ಹುಟ್ಟಿದ ವರ್ಷ ಯಾವ ಸಂವತ್ಸರದಲ್ಲಿದೆಯೆಂಬ ವಿವರ.ಯಾರೋ ಪುಣ್ಯಾತ್ಮರು ತಯಾರಿಸಿ
ಕೊಟ್ಟಿರುವ ಈ ಮಾಹಿತಿ ರಕ್ಷಿಸಿಡಿ.
*( 1867, 1927,1987,)*: ಪ್ರಭವ
*(1868,1928,1988)*: ವಿಭವ
*(1869,1929,1989)*: ಶುಕ್ಲ
*(1870,1930,1990)*: ಪ್ರಮೋದೂತ
*(1871,1931, 1991)*: ಪ್ರಜೋತ್ಪತ್ತಿ
*(1872,1932,1992)*: ಅಂಗೀರಸ
*(1873,1933,1993)*: ಶ್ರೀಮುಖ
*(1874,1934,1994)*: ಭಾವ
*(1875,1935,1995)*:ಯುವ
*(1876,1936,1996)*: ధాత
*(1877,1937,1997)*: ಈಶ್ವರ
*(1878,1938,1998)*: ಬಹುಧಾನ್ಯ
*(1879,1939,1999)*: ಪ್ರಮಾದಿ
*(1880,1940,2000)*: ವಿಕ್ರಮ
*(1881,1941,2001)*: ವೃಷ
*(1882,1942,2002)*: ಚಿತ್ರಭಾನು
*(1883,1943,2003)*: ಸ್ವಭಾನು
*(1884,1944,2004)*: ತಾರಣ
*(1885,1945,2005)*: ಪಾರ್ಥಿವ
*(1886,1946,2006)*: ವ್ಯಯ
*(1887,1947,2007)*: ಸರ್ವಜಿತ್
*(1888,1948,2008)*:
ಸರ್ವಧಾರಿ
*(1889,1949,2009)*: ವಿರೋಧಿ
*(1890,1950,2010)*: ವಿಕೃತಿ
*(1891,1951,2011)*: ಖರ
*(1892,1952,2012)*: ನಂದನ
*(1893,1953,2013)*: ವಿಜಯ
*(1894,1954,2014)*: ಜಯ
*(1895,1955,2015)*: ಮನ್ಮಥ
*(1896,1956,2016)*: ದುರ್ಮುಖಿ
*(1897,1957,2017)*: ಹೇವಿಳಂಬಿ
*(1898,1958,2018)*: ವಿಳಂಬಿ
*(1899,1959,2019)*: ವಿಕಾರಿ
*(1900,1960,2020)*: ಶಾರ್ವರಿ
*(1901,1961,2021)*: ಪ್ಲವ
*(1902,1962,2022)*: ಶುಭಕೃತ
*(1903,1963,2023)*: ಶೋಭಕೃತ
*(1904,1964,2024)*: ಕ್ರೋಧಿ
*(1905,1965,2025)*: ವಿಶ್ವಾವಸು
*(1906,1966,2026)*: ಪರಾಭವ
*(1907,1967,2027)*: ಪ್ಲವಂಗ
*(1908,1968,2028)*: ಕೀಲಕ
*(1909,1969,2029)*: ಸೌಮ್ಯ
*(1910,1970,2030)*: ಸಾಧಾರಣ
*(1911,1971,2031)*: ವಿರೋಧಿಕೃತ
*(1912,1972,2032)*: ಪರಿಧಾವಿ
*(1913,1973,2033)*: ಪ್ರಮಾದ
*(1914,1974,2034)*: ಆನಂದ
*(1915,1975,2035)*: ರಾಕ್ಷಸ
*(1916,1976,2036)*: ನಳ
*(1917,1977,2037)*: ಪಿಂಗಳ
*(1918,1978,2038)*: ಕಾಳಯುಕ್ತಿ
*(1919,1979,2039)*: ಸಿದ್ಧಾರ್ಥಿ
*(1920,1980,2040)*: ರೌದ್ರಿ
*(1921,1981,2041)*: ದುರ್ಮತಿ
*(1922,1982,2042)*: ದುಂದುಭಿ
*(1923,1983,2043)*: ರುಧಿರೋದ್ಗಾರಿ
*(1924,1984,2044)*: ರಕ್ತಾಕ್ಷಿ
*(1925,1985,2045)*: ಕ್ರೋಧನ
*(1926,1986,2046)*: ಅಕ್ಷಯ
*******************************************************************
4.ಮರದ ಬಾಗಿಣದಲ್ಲಿ ಹಾಕುವ ಪದಾರ್ಥಗಳು ಮತ್ತು ದೇವತೆಗಳು..
೧. *ಅರಿಸಿನ:* _ಗೌರಿದೇವೀ._
೨. *ಕುಂಕುಮ:*_ಮಹಾಲಕ್ಷ್ಮೀ_
೩. *ಸಿಂಧೂರ:* _ಸರಸ್ವತೀ_
೪. *ಕನ್ನಡಿ:* _ರೂಪಲಕ್ಷ್ಮೀ._
೫. *ಬಾಚಣಿಗೆ:*_ಶೃಂಗಾರಲಕ್ಷ್ಮೀ._
೬. *ಕಾಡಿಗೆ:*_ಲಜ್ಜಾಲಕ್ಷ್ಮೀ._
೭. *ಅಕ್ಕಿ:*_ಶ್ರೀ ಲಕ್ಷ್ಮೀ._
೮. *ತೊಗರಿಬೇಳೆ :*_ವರಲಕ್ಷ್ಮೀ_
೯. *ಉದ್ದಿನಬೇಳೆ:*_ಸಿದ್ದಲಕ್ಷ್ಮೀ_
೧೦ *ತೆಂಗಿನಕಾಯಿ:*_ಸಂತಾನಲಕ್ಷ್ಮೀ_
೧೧. *ವೀಳ್ಯದ ಎಲೆ:*_ಧನಲಕ್ಷ್ಮೀ_
೧೨. *ಅಡಿಕೆ:*_ಇಷ್ಟಲಕ್ಷ್ಮೀ_
೧೩. *ಫಲ(ಹಣ್ಣು):* _ಜ್ಞಾನಲಕ್ಷ್ಮೀ_
೧೪. *ಬೆಲ್ಲ:*_ರಸಲಕ್ಷ್ಮೀ_
೧೫. *ವಸ್ತ್ರ:*_ವಸ್ತ್ರಲಕ್ಷ್ಮೀ_
೧೬. *ಹೆಸರುಬೇಳೆ:* _ವಿದ್ಯಾಲಕ್ಷ್ಮೀ_
**************************************************************************************************************
**************************************************************************************************************
ಮುತೈದೆ ದೇವತೆಯರು *೧೬* ಜನರು.
ಇವರನ್ನು ಷೋಡಶಲಕ್ಷ್ಮೀಯರು ಎಂದು ಕರೆಯುತ್ತಾರೆ..
*ಗೌರಿ, ಪದ್ಮ, ಶುಚಿ, ಮೇಧಾ, ಸಾವಿತ್ರಿ, ವಿಜಯಾ, ಜಯಾ, ದೇವಸೇನಾ, ಸಾಹಾ, ಮಾತರಲೋಕಾ, ಮಾತಾರಾ, ಶಾಂತೀ, ಪೃಥ್ವಿ, ಧೃತೀ, ತುಷ್ಟೀ, ಸ್ವಧಾದೇವಿ..*
_ಸೀರೆ ಸೆರಗಿನಲ್ಲಿ_ಮಹಾಲಕ್ಷ್ಮೀಯು ಸೌಭಾಗ್ಯ ರೂಪದಲ್ಲಿರುವುದರಿಂದ ಸೆರಗು ಹಿಡಿದು ಮರದ ಬಾಗಿಣ ಕೊಡುತ್ತಾರೆ..
ಮರದ ಬಾಗಿಣಕ್ಕೆ ಸಂಸ್ಕೃತದಲ್ಲಿ *ವೇಣುಪಾತ್ರ* ಎಂದು ಹೇಳುತ್ತಾರೆ..
ಮರದಬಾಗಿಣದಲ್ಲಿ ನಾರಾಯಣನ ಅಂಶ ಇರುತ್ತದೆ..
ಮರವೆಂಬ ನಾರಾಯಣ ಮತ್ತು ಒಳಗಿರುವ ಲಕ್ಷ್ಮಿಯರು ತರಹ ಜೊತೆಯಲ್ಲಿ,
ದಂಪತಿಗಳು
ಲಕ್ಷ್ಮೀ-ನಾರಾಯಣರ ತರಹ ಇರಲಿ ಅನ್ನೋ ಕಾರಣಕ್ಕೆ ಮತ್ತು ಸುಮಂಗಲಿ ತನ ಯಾವಾಗಲೂ ಇರಲಿ
ಅನ್ನೋ ಕಾರಣಕ್ಕೆ *೧೬* ಸುಮಂಗಲೀ ದೇವತೆಗಳ ಸಾಕ್ಷಿಯಾಗಿ, ಬಾಗಿಣ ಕೊಡುತ್ತಾರೆ..
ಈ *೧೬* ದೇವತೆಗಳು ನಿತ್ಯಸುಮಂಗಲಿಯರು..
ಈ *೧೬* ದೇವತೆಗಳು ಸಂಸಾರದಲ್ಲಿ ಯಾವುದೇ ತರಹದ ಕಷ್ಟ,ನೋವು,ದುಃಖ ಬಂದರೂ ನಮ್ಮನ್ನು ರಕ್ಷಿಸಲಿ ಎಂದು ನೆನೆದು ಬಾಗಿಣ ಕೊಡಬೇಕು..
ಈ ೧೬ ದೇವತೆಗಳನ್ನು ಸ್ಮರಿಸುತ್ತಾ ಸ್ವರ್ಣಗೌರೀ ಹಬ್ಬದಲ್ಲಿ ಮಾಡುವ ಹೋರಾಪೂಜೆ, ಎಂದರೆ ದಾರಕ್ಕೆ ಮಾಡುವ ಪೂಜೆ..
೧೬ ಅರಿಸಿನ ದಾರ,
೧೬ ಗಂಟುಗಳು,
೧೬ ಬಾಗಿನ,
೧೬ ಎಳೆ ಗೆಜ್ಜೆವಸ್ತ್ರ, ಪೂಜಿಸಬೇಕೆಂದು ಗ್ರಂಥಗಳಲ್ಲಿ ಹೇಳಿದ್ದಾರೆ..
# *ದಾನಗಳು ಮತ್ತು ಫಲಗಳು*
*೧. ಅರಿಸಿನ ದಾನ :*
ಅರಿಸಿನ ದಾನ ಮಾಡಿದಷ್ಟು ರೋಗ ನಿವಾರಣೆ ಆಗುತ್ತದೆ..
ಸುಮಂಗಲಿಯರಿಗೆ ಸೌಭಾಗ್ಯತನ ವೃದ್ಧಿಸುತ್ತದೆ..
ಸುಮಂಗಲಿಯರಿಗೆ ಸುಮಂಗಲಿತನ ಯಾವಾಗಲೂ ಇರಲಿ ಎಂಬ ಉದ್ದೇಶಕ್ಕೆ ಮೊದಲು ಅರಿಸಿನ ಕೊಡುತ್ತಾರೆ..
*೨. ಕುಂಕುಮ ದಾನ :*
ಕುಂಕುಮವನ್ನು ಯಾರು ಧರಿಸುತ್ತಾರೋ ಅವರು ಬಹಳ ತೇಜಸ್ಸು ಮತ್ತ ನಂಬಿಕೆ ಜಾಸ್ತಿ ಆಗುತ್ತೆ..
ಕುಂಕುಮ ಧಾರಣೆಯಿಂದ ದೈವಶಕ್ತಿ ಜಾಸ್ತಿಯಾಗುತ್ತದೆ..
ದೃಷ್ಟಿದೋಷ ನಿವಾರಣೆ ಆಗುತ್ತದೆ..
ಕೋಪ, ಹಠ,ಕಮ್ಮಿ ಆಗುತ್ತದೆ..
*೩. ಸಿಂಧೂರ ದಾನ:*
ಸತಿ ಪತಿ ಕಲಹ ನಿವಾರಣೆ.., ರೋಗಭಾಧೆ,ಋಣಭಾದೆ, ನಿವಾರಣೆ..
ಮನೆಯಲ್ಲಿ ಸಂದೇಹ, ಒಳಜಗಳ, ಮಾಂತ್ರಿಕ ದೋಷಗಳು ನಿವಾರಣೆಯಾಗುತ್ತದೆ ..
*೪. ಕನ್ನಡೀ(ರೂಪಲಕ್ಷ್ಮೀ) :*
ಕನ್ನಡಿಯನ್ನು ದಾನ ಮಾಡಿದರೆ ಸಮಸ್ತ ವಾಸ್ತು ದೋಷ, ದೃಷ್ಟಿದೋಷ ನಿವಾರಣೆಯಾಗುತ್ತದೆ..
*೫. ಬಾಚಣಿಗೆ :*
ಬಾಚಣಿಗೆ ದಾನ ಮಾಡಿದರೆ, ತಲೆಗೆ ಸಂಭಂದಿಸಿದ ಖಾಯಿಲೆಗಳು , ಯೋಚನೆಗಳು ಕಡಿಮೆಯಾಗುತ್ತವೆ, ಮತ್ತು ರೂಪವತಿಯಾಗುತ್ತಾರೆ..
*೬. ಕಾಡಿಗೆ :*
ದೃಷ್ಟಿ ಆಗೋದು, ಕಣ್ಣಿನ ಕೆಳಗೆ ಕಪ್ಪಾಗೋದು ಕಮ್ಮಿಯಾಗುತ್ತದೆ..
ಪೂರ್ಣ ಸ್ತ್ರೀ ತತ್ವ ಹೆಚ್ಚಾಗುತ್ತದೆ..
*೭. ಅಕ್ಕಿ :*
ಯಾರು ಅಕ್ಕಿಯನ್ನು ದಾನ ಮಾಡುತ್ತಾರೋ ಅವರಿಗೆ ಮನಸ್ಸಿಗೆ ಸಂಭಂದಪಟ್ಟಂತಹ ಸರ್ವ ರೋಗಗಳು, ಯೋಚನೆಗಳು ನಿವಾರಣೆಯಾಗುತ್ತವೆ.
ಆರೋಗ್ಯಭಾಗ್ಯವಾಗುತ್ತದೆ..
ಮನೆಯಲ್ಲಿ ಕಲಹಗಳು ನಿವಾರಣೆಯಾಗುತ್ತದೆ..
*೮. ತೊಗರಿಬೇಳೆ :*
ತೊಗರೀಬೇಳೆ ದಾನದಿಂದ ಕುಜದೋಷ ನಿವಾರಣೆಯಾಗುತ್ತದೆ..
ವಂಶಪಾರಂಪರ್ಯವಾಗಿ ಬಂದಿರುವ ಕುಜದೋಷಗಳು , ಸರ್ಪದೋಷಗಳು ನಿವಾರಣೆಯಾಗುತ್ತದೆ..
ರಜಸ್ವಲಾ ದೋಷಗಳು ನಿವಾರಣೆಯಾಗುತ್ತದೆ..
ರಕ್ತದೊತ್ತಡ (B.P) normal ಆಗಿ ಆರೋಗ್ಯವಂತರಾಗುತ್ತಾರೆ..
ಮನೆಯಲ್ಲಿ ಇರುವ ವಿವಾಹ ದೋಷಗಳು ನಿವಾರಣೆಯಾಗುತ್ತವೆ..
*೯. ಉದ್ದಿನ ಬೇಳೆ :*
ಪಿತೃಶಾಪ ನಿವಾರಣೆಯಾಗುತ್ತದೆ..
ನೀವು ಶ್ರಾಧ್ಧಗಳಲ್ಲಿ ಮಾಡಿರುವ ತಪ್ಪುಗಳ ಫಲ ಕಡಿಮೆಯಾಗುತ್ತದೆ..
ಅಪಮೃತ್ಯುಗಳು ನಿವಾರಣೆಯಾಗುತ್ತದೆ..
ಅಗೋಚರ ರೋಗಗಳು ನಿವಾರಣೆಯಾಗುತ್ತದೆ..
ಪತಿಯಲ್ಲಿರುವ ಸರ್ವ ದೋಷಗಳು ನಿವಾರಣೆಯಾಗುತ್ತವೆ..
*೧೦. ತೆಂಗಿನಕಾಯಿ :*
ಇಷ್ಟಾರ್ಥಸಿದ್ಧಿಯಾಗುತ್ತದೆ.. ,
ತೆಂಗಿನಕಾಯಿ ಗೆ "ಇಷ್ಟಾರ್ಥ ಪ್ರದಾಯಿನಿ" ಅಂತನೂ ಹೆಸರಿದೆ..
ಮಕ್ಕಳು ಸನ್ಮಾರ್ಗದಲ್ಲಿ ನಡೆಯುತ್ತಾರೆ..
ಕಾರ್ಯಗಳು ಪೂರ್ಣಫಲ ಕೊಡಬೆರಕಾದರೆ " ತೆಂಗಿನಕಾಯಿ " ಮಾಡಲೇಬೇಕು..
ಸರ್ವಕಾರ್ಯ ವಿಜಯವಾಗುತ್ತದೆ..
ಆರೋಗ್ಯಭಾಗ್ಯ, ನೆಮ್ಮದಿ, ಸಂತೋಷ ದೊರೆಯುತ್ತದೆ..
ಸರ್ವ ಸಂತಾನ ಸಮಸ್ಯೆಗಳು ನಿವಾರಣೆಯಾಗುತ್ತದೆ..
ಉದರ ಸಂಭಂದಿ ರೋಗಗಳು ನಿವಾರಣೆಯಾಗುತ್ತದೆ..
*೧೧. ವೀಳ್ಯದೆಲೆ :*
ವೀಳ್ಯದೆಲೆಗೆ ದೇವತೆ "ಧನಲಕ್ಷ್ಮೀ".!
ತಾಂಬೂಲ ದಾನವನ್ನು ಮಾಡುವದರಿಂದ ಧನಲಕ್ಷ್ಮೀ ಅನುಗ್ರಹವಾಗಿ, ಧನಪ್ರಾಪ್ತಿಯಾಗುತ್ತದೆ..
ಮಹಾಲಕ್ಷ್ಮೀ ಪ್ರಸನ್ನಳಾಗುತ್ತಾರೆ..
ಹಣದ ಸಮಸ್ಯೆ ನಿವಾರಣೆಯಾಗುತ್ತದೆ.
*೧೨. ಅಡಿಕೆ :*
ಅಡಿಕೆಗೆ ಸಂಸ್ಕೃತದಲ್ಲಿ " ಪೂಗೀಫಲ" ಎಂದು ಹೆಸರು..
ಅಡಿಕೆಗೆ ಅಭಿಮಾನ ದೇವತೆ "ಇಷ್ಟಲಕ್ಷ್ಮೀ".!
ಯಾರು ವೀಳ್ಯದೆಲೆ-ಅಡಿಕೆ ತಾಂಬೂಲವನ್ನು ಪ್ರತಿದಿನ ಹಾಕಿಕೊಳ್ಳುತ್ತಾರೋ ಅವರ ಇಷ್ಟಾರ್ಥ ಹಾಗೂ ಬಯಕೆಗಳು ಬೇಗನೇ ನೆರವೇರುತ್ತದೆ..
ಬರೀ ಅಡಿಕೆಯನ್ನು ತಿಂದರೆ " ಬ್ರಹ್ಮಹತ್ಯಾ" ದೋಷ ಬರುವುದು.
ಆದ್ದರಿಂದ ಬರೀ ಅಡಿಕೆ ತಿನ್ನಬಾರದು..
*೧೩. ಫಲದಾನ :*
ಫಲದಾನಕ್ಕೆ ಜ್ಞನಲಕ್ಷ್ಮೀ ಅಧಿಪತಿ..
ಫಲದಾನ ಮಾಡಿದರೆ ನಿಮ್ಮ ಮನೆಯಲ್ಲಿ ಸಕಲ ಕಾರ್ಯಗಳೂ ಸುಗಮವಾಗಿ, ಸುಲಲಿತವಾಗಿ ಯಾವುದೇ ತೊಂದರೆಯಿಲ್ಲದೆ, ಯಶಸ್ವಿಯಾಗಿ, ಲಾಭವಾಗಿ ನಡೆಯುತ್ತದೆ..
ದೇವಿ ದೇವಾಲಯಗಳಲ್ಲಿ ಹಣ್ಣು ನೈವೇದ್ಯ ಮಾಡಿಸಿ ಸುಮಂಗಲಿಯರಿಗೆ ದಾನ ಮಾಡಿದರೆ , ಸ್ತ್ರೀ ಶಾಪಗಳು ನಿವಾರಣೆಯಾಗುತ್ತದೆ..
*೧೪. ಬೆಲ್ಲ (ರಸಲಕ್ಷ್ಮೀ) :*
ಬೆಲ್ಲದ ಅಭಿಮಾನ ದೇವತೆ "ರಸಲಕ್ಷ್ಮೀ"..
ಬೆಲ್ಲದಲ್ಲಿ " ಬ್ರಹ್ಮದೇವರು" , ಶ್ರೀ ಮಹಾಲಕ್ಷ್ಮೀ, ಶ್ರೀ ಮಹಾಗಣಪತಿ ದೇವರ ಸಾನಿಧ್ಯ ಇರುತ್ತದೆ..
ಬೆಲ್ಲದಾನ ಮಾಡಿದರೆ ಬಹಳಷ್ಟು ಯೋಚನೆಗಳು ನಿವಾರಣೆಯಾಗುತ್ತದೆ..
ನಿತ್ಯದಾರಿದ್ರ್ಯ ನಿವಾರಣೆಯಾಗುತ್ತದೆ..
ಜೀವನದಲ್ಲಿ ಉತ್ತಮ ಮಟ್ಟಕ್ಕೆ ಅಭಿವೃದ್ಧಿ ಆಗುತ್ತಾರೆ..
*೧೫. "ವಸ್ತ್ರಲಕ್ಷ್ಮೀ" :*
ಸುಮಂಗಲಿಯರು ಪ್ರತ್ಯಕ್ಷ "ಸ್ತ್ರೀದೇವತೆ" ಗಳ ಸ್ವರೂಪ ಹಾಗೂ ಕುಲದೇವತೆಯ ಸ್ವರೂಪ..
ಆದಿಶಕ್ತಿಯ ಸ್ವರೂಪ ಎಂದು ತಿಳಿದು ಬಾಗಿನ ಕೊಡುವಾಗ ವಸ್ತ್ರದಾನ ಮಾಡಬೇಕು..
ಹೀಗೆ ಮಾಡುವದರಿಂದ "ವಸ್ತ್ರ" ದಾರಿದ್ರ್ಯ ನಿವಾರಣೆಯಾಗುತ್ತದೆ..
ಕುಲದೇವತೆ ತೃಪ್ತಿಯಾಗುತ್ತದೆ..
ಸುಮಂಗಲೀ ದೋಷಗಳು ನಿವಾರಣೆಯಾಗುತ್ತದೆ..
ಮನೆಯಲ್ಲಿನ ಸ್ತ್ರೀ ದೋಷಗಳು ನಿವಾರಣೆಯಾಗುತ್ತದೆ..
*೧೬. "ಹೆಸರುಬೇಳೆ" :* ವಿದ್ಯಾಲಕ್ಷ್ಮೀ -
ವಿದ್ಯಾಲಕ್ಷ್ಮೀ ಹೆಸರು ಕೇಳುತ್ತಿದ್ದಂತೆ ಎಲ್ಲರಿಗೂ ಸಂತೋಷವಾಗುತ್ತದೆ..
ವಿದ್ಯೆ ಎಂದರೆ "ಸರಸ್ವತೀ", ಲಕ್ಷ್ಮೀ ಎಂದರೆ " ಶ್ರೀ ಮಹಾಲಕ್ಷ್ಮೀ" ಎಂದು ಅರ್ಥ..
ಹೆಸರುಬೇಳೆಯನ್ನು ದಾನ ಮಾಡಿದವರಿಗೂ, ತೆಗೆದುಕೊಂಡವರಿಗೂ ಸರಸ್ವತೀ ದೇವಿ ಹಾಗೂ ಶ್ರೀ ಮಹಾಲಕ್ಷ್ಮೀ ದೇವಿಯ ಶಾಶ್ವತ ಅನುಗ್ರಹವಾಗುತ್ತದೆ..
ಹೆಸರುಬೇಳೆ ದಾನದಿಂದ ಸುಖ, ಶಾಂತಿ, ನೆಮ್ಮದಿಯ ವಾತಾವರಣ ಇರುತ್ತದೆ..
ಮನೆಯಲ್ಲಿ ಒಳಜಗಳಗಳು ನಿವಾರಣೆಯಾಗುತ್ತದೆ..
ದೇವಿಗೆ "ಹೆಸರುಬೇಳೆ" ತುಂಬಾ ಇಷ್ಟ, ಇದರಿಂದ ದೇವಿ ಸುಪ್ರಸನ್ನಳಾಗುತ್ತಾಳೆ..
ಮನೆಯಲ್ಲಿ ಎಲ್ಲರೂ ತುಂಬಾ ವಿದ್ಯಾವಂತರಾಗುತ್ತಾರೆ.
Gastric, ಗರ್ಭಕೋಶದ ತೊಂದರೆಗಳು ಕಡಿಮೆಯಾಗುತ್ತವೆ..
ಈ ವಿಚಾರಗಳು ತುಂಬಾ ಇದೆ, ಎಲ್ಲರೂ ವಿಚಾರಗಳನ್ನು ತಿಳಿದುಕೊಂಡು ಆಚರಿಸಲಿ ಎಂಬ ಕಾರಣಕ್ಕೆ ತಿಳಿಸೋ ಒಂದು ಪ್ರಯತ್ನ ಅಷ್ಟೇ..
*******************************************************************
5. *ನಂಬಿಕೆಯೇ ದೇವರು:
ದೇವರು ಮತ್ತು ಒಬ್ಬ ಮನುಷ್ಯನ ನಡುವೆ ನಡೆದ ಸ್ವಾರಸ್ಯಕರ ಹಾಗೂ ಅರ್ಥಪೂರ್ಣ ಸಂಭಾಷಣೆ.
*ಮ.* ನಿನಗೊಂದು ಪ್ರಶ್ನೆ ಕೇಳಲೇ?
*ದೇ.* ಕೇಳು
*ಮ.* ಇಂದು ನಾನಂದುಕೊಂಡ ಯಾವ ಕೆಲಸಗಳು ನಡೆಯಲಿಲ್ಲ ಏಕೆ?
*ದೇ.* ನಿನ್ನ ಪ್ರಶ್ನೆಗಳನ್ನು ನಿಖರವಾಗಿ ಕೇಳು?
*ಮ.*
ಬೆಳಗ್ಗೆ ಬೇಗ ಎಚ್ಚರವಾಗಲಿಲ್ಲ. ಕಾರುಸ್ಟಾರ್ಟ್ ಆಗಲು ಬಹಳ ತಡವಾಯಿತು. ಮಧ್ಯಾಹ್ನದ
ಊಟದ ಡಬ್ಬಿ ಬದಲಾಗಿ, ತೊಂದರೆಯಾಯಿತು. ಸಂಜೆ ಮೊಬೈಲ್ ಕಾಲ್ ರಿಸೀವ್ ಮಾಡುತ್ತಿದ್ದಂತೆ
ಹ್ಯಾಂಗ್ ಆಗಿ, ಡೆಡ್ ಆಯಿತು. ಮನೆಗೆ ಬಂದು ಕಾಲು ನೋವು ಪರಿಹರಿಸಿಕೊಳ್ಳಲು ಫುಟ್
ಮಸಾಜರ್ ನಲ್ಲಿ ಕಾಲಿಡುತ್ತಿದ್ದಂತೆ ಅದು ಕೆಟ್ಟು ನಿಂತಿತು. ಇಂದಿನ ಎಲ್ಲ ಕೆಲಸಗಳಲ್ಲೂ
ವಿಘ್ನ ಹಾಗೂ ಆತಂಕಗಳು ಕಾಡಿದವು ಏಕೆ?
*ದೇ.*
ಬೆಳಗ್ಗೆ ನಿನ್ನ ಜೀವಹರಣ ಮಾಡಲು ಮೃತ್ಯದೂತನೊಬ್ಬ ನಿನ್ನ ಹಾಸಿಗೆ
ಬದಿಯಲ್ಲಿಕಾಯುತ್ತಿದ್ದ. ಅವನೊಂದಿಗೆ ಹೋರಾಡಿ ನಿಮ್ಮಜೀವ ಕಾಪಾಡಲು ದೇವದೂತನೊಬ್ಬನನ್ನು
ಕಳುಹಿಸಿದ್ದೆ. ಇದು ನಿನಗೆ ಗೊತ್ತಾಗದಂತೆ ಹೆಚ್ಚು ಹೊತ್ತು ನಿದ್ದೆ ಮಾಡುವಂತೆ ಮಾಡಿದೆ.
ನೀನು ಸಂಚರಿಸುವ ದಾರಿಯಲ್ಲಿ ಕುಡಿದಮತ್ತಿನಲ್ಲಿ ಚಾಲಕನೊಬ್ಬ ಡ್ರೈವಿಂಗ್ ಮಾಡಿಕೊಂಡು
ಬರುತ್ತಿದ್ದ, ಅವನಿಂದ ನಿನಗೆ ಅಪಘಾತವಾಗದಿರಲಿ ಎಂದು ನಿನ್ನ ಕಾರು ತಡವಾಗಿ ಸ್ಟಾರ್ಟ್
ಆಗುವಂತೆ ಮಾಡಿದೆ.
ನಿನಗೆ ಅಡುಗೆ ಮಾಡಿಕೊಡುತ್ತಿದ್ದ, ಬಾಣಸಿಗ ರೋಗಪೀಡಿತನಾಗಿದ್ದ. ಆತನ ರೋಗ ನಿನಗೆ ಹರಡದಂತೆ ಮಾಡಲು ನಿನ್ನ ಊಟದ ಡಬ್ಬ ಬದಲಿಸಿದೆ.
ಸಂಜೆ ನಿನ್ನ ಸ್ನೇಹಿತ ನಿನಗೆ ಕರೆ ಮಾಡಿ, ಸುಳ್ಳು ಸಾಕ್ಷಿ ಹೇಳಲು ಒಪ್ಪಿಸಲು ಬಯಸಿದ್ದ, ಅದಕ್ಕಾಗಿ ನಿನ್ನ ಮೊಬೈಲ್ ಹ್ಯಾಂಗ್ ಆಗುವಂತೆ ಮಾಡಿದೆ.
ನಿನ್ನ ಮನೆಯಲ್ಲಿದ್ದ ಫುಟ್ ಮಸಾಜರ್ನಲ್ಲಿ ನೀರು ಸೇರಿಕೊಂಡು ಶಾರ್ಟ್ ಆಗಿತ್ತು. ಅದು
ಕಾರ್ಯ ನಿರ್ವಹಿಸಿದ್ದರೆ, ನಿನಗೆ ವಿದ್ಯುತ್ ಶಾಕ್ ತಗಲುವ ಸಾಧ್ಯತೆ ಇತ್ತು. ಅದಕ್ಕಾಗಿ
ನಾನು, ಫುಟ್ ಮಸಾಜರ್ ಕಾರ್ಯನಿರ್ವಹಿಸದಂತೆ ನಿಷ್ಕ್ರಿಯೆಗೊಳಿಸಿದೆ.
*ಮ.*
ಕ್ಷಮಿಸಿ, ನಿಮ್ಮನ್ನು ತಪ್ಪಾಗಿ ಅರ್ಥೈಯಿಸಿಕೊಂಡಿದ್ದೆ.
*ದೇ.*
ನೀನು ಮಾಡುವ ಯೋಜನೆಗಳಿಗಿಂತ ನಾನು ಮಾಡುವ ಯೋಜನೆಗಳು ನಿನ್ನ ಬದುಕಿಗೆ ಉತ್ತಮ
ಫಲಿತಾಂಶಗಳನ್ನುನೀಡುತ್ತವೆ. ನೀನು ಮಾಡಿದ ಯೋಜನೆಗಳು ವಿಫಲವಾಯಿತೆಂದು ಬೇಸರವಾಗಬೇಡ.
*ಮ.*
ಧನ್ಯವಾದಗಳು ಪ್ರಭುವೆ?
*ದೇ.*
ಎಲ್ಲ ಜೀವಿಗಳು ನನ್ನ ಮಕ್ಕಳು. ಅವರ ಒಳಿತಿನ ಬಗ್ಗೆ ಮಾತ್ರ ನಾನು ಚಿಂತಿಸುತ್ತೇನೆ.
ನಾನು ಮಾಡಿದ ಯೋಜನೆಗಳಿಂದ ಎಂದಿಗೂ ಕೆಡಕಾಗುವುದಿಲ್ಲ. ಮನುಷ್ಯರಿಗಾಗಿ ನಾನು ಕೆಲವು
ಪ್ರಶ್ನೆಗಳನ್ನು ಕೇಳುತ್ತೇನೆ, ನಿಧಾನವಾಗಿ ಯೋಚಿಸಿ ನನಗೆ ಉತ್ತರಿಸಿ.
*ನಿಮಗೆ,
ಮೂರು ಗಂಟೆಯ ಸಿನಿಮಾ ಅಥವಾ ಮನರಂಜನೆ ಕಾರ್ಯಕ್ರಮ ನೋಡುವಾಗ ಏಕಾಗ್ರತೆ ಇರುತ್ತದೆ.
ಆದರೆ, 10 ನಿಮಿಷದ ಪ್ರಾರ್ಥನೆಗೆ ಏಕಾಗ್ರತೆ ಇರಲಿ ಸಮಯವೂ ಇರುವುದಿಲ್ಲ ಏಕೆ?*
*ಮನರಂಜನೆ ಹಾಗೂ ಹೋಟೆಲ್, ಪಾರ್ಲರ್, ಮೊಬೈಲ್ & ಬಾರ್ ಗಳಲ್ಲಿ ಕಳೆಯುವ ಸಮಯಕ್ಕಿಂತ ಪ್ರಾರ್ಥನೆಗಾಗಿ ನೀಡುವ ಸಮಯ ಕಿರಿದಾಗಿರುತ್ತದೆ ಏಕೆ?*
*ಸಾವಿರಾರು
ಪುಟಗಳಿರುವ ಕಥೆ ಕಾದಂಬರಿಗಳನ್ನು ಏಕಕಾಲದಲ್ಲಿ ಓದಿ ಮುಗಿಸುವ ಸಾಮರ್ಥ್ಯ
ನಿಮ್ಮದಾಗಿದ್ದರೂ, ಧಾರ್ಮಿಕ ಗ್ರಂಥಗಳನ್ನು ಓದುವ ತಾಳ್ಮೆ ಇರುವುದಿಲ್ಲ ಏಕೆ?*
*ದೇವರೊಂದಿಗೆ ಎಂದರೆ, ನಿಮ್ಮ ಮನಸಾಕ್ಷಿಯೊಂದಿಗೆ ಮಾತನಾಡುವ ವ್ಯವಧಾನ ಕ್ಷೀಣಿಸುತ್ತಿದೆ ಏಕೆ?*
ಈ
ಪ್ರಶ್ನೆಗಳಿಗೆ ಉತ್ತರ ದೊರೆತರೆ, ನೀವು ನಿಮ್ಮ ಮನಸಾಕ್ಷಿಯೊಂದಿಗೆ ಉತ್ತಮವಾದ
ಸಂವಾದಿಸುವ ಶಕ್ತಿ ಹೊಂದಿದ್ದೀರಿ ಹಾಗೂ ದೇವರು ನಿಮ್ಮೊಂದಿಗೆ ಸದಾ ಇರುತ್ತಾನೆ ಎಂದರ್ಥ.
(ಇಂಗ್ಲೀಷ್ ಭಾಷೆಯಿಂದ ಅನುವಾದಿಸಿದ್ದು.ಉತ್ತಮವೆನಿಸಿದರೆ, ಆತ್ಮೀಯರಿಗೆ ವರ್ಗಾಯಿಸಿ)
*ಧರ್ಮೋ ರಕ್ಷತೀಃ ರಕ್ಷಿತಃ*
******************************************************************
******************************************************************
ಗೋಪಿಚಂದನ ಮಹಾತ್ಮೆ-1:
*ಯಸ್ಮಿ ನ್ ಗೃಹೇ ತಿಷ್ಠತಿ ಗೋಪಿಚಂದನo*
*ಭಕ್ತ್ಯಾ ಲಲಾಟೇ ಮನುಜೋ ಬಿಭರ್ತಿಚೇತ್*
*ತಸ್ಮಿನ ಗೃಹೇsಹಂ ನಿವಸಾಮಿ ಸರ್ವದಾ*
*ಶ್ರೀಯಾನ್ವಿತಃ ಕಂಸಾನಿಹ ಚತುರ್ಮುಖ*
ಯಾರ ಮನೆಯಲ್ಲಿ ಗೋಪಿಚಂದನ ಇರುವುದೋ ,ಯಾರು ತಮ್ಮ ಹಣೆಯಲ್ಲಿ ಭಕ್ತಿಯಿoದ ಗೋಪಿಚoದನವನ್ನು ಧರಿಸುವರೋ ,ಅಂತಹವರ ಮನೆಯಲ್ಲಿ ಕಂಸಸಂಹಾರಕನಾದ ನಾನು
(ಶ್ರೀಕೃಷ್ಣ ಪರಮಾತ್ಮ )ಲಕ್ಷ್ಮೀಸಹಿತನಾಗಿ ನೆಲೆಸುವೆನೆoದು ಚತುರ್ಮುಖನನ್ನು ಕುರಿತು ಪರಮಾತ್ಮನು ಹೇಳಿದ್ದಾನೆ.
*(ಸ್ಕoದಪುರಾಣ ವೈಷ್ಣವ ಖಂಡ)
*ಶ್ರೀಐತರೇಯ.....
ಗೋಪಿಚಂದನ ಮಹಾತ್ಮೆ-2:
*ಯೋ ಧಾರಯೇತ್ ದ್ವಾರವತೀ ಸಮುದ್ಭವಾo*
*ಮೃತ್ಸ್ನಾo ಪವಿತ್ರಾo ಕಲಿಕಲ್ಮಷಾಪಹಮ್*
*ನಿತ್ಯo ಲಲಾಟೇ ಮಮ ಮಂತ್ರಸಂಯುತಾo*
*ಯಮo ನ ಪಶ್ಯೇದಪಿ ಪಾಪ ಸಂಯುತಃ*
ಯಾರು
ತಮ್ಮ ಹಣೆಯಲ್ಲಿ ದ್ವಾರಾವತಿಯಲ್ಲಿ ಉತ್ಪನ್ನವಾದ ,ಪವಿತ್ರವಾದ ಕಲಿ ಕಲ್ಮಷ ಪರಿಹಾರಕವಾದ
ಗೋಪಿಚಂದನವನ್ನು ನಿತ್ಯದಲ್ಲಿ ಮಂತ್ರಪಠನ ಪೂರ್ವಕವಾಗಿ ಧರಿಸುವರೋ ,ಅವರು ಪಾಪದಿoದ
ಕೂಡಿದ್ದರೂ ಯಮನನ್ನು ಕಾಣುವುದಿಲ್ಲ.
*ಸ್ಕoದಪುರಾಣ ವೈಷ್ಣವ ಖಂಡ
*ಶ್ರೀಐತರೇಯ.....
*ನಾಹo ಕರ್ತಾ ಹರಿಃ ಕರ್ತಾ.
ಗೋಪಿಚಂದನ ಮಹಾತ್ಮೆ- 3:
*ಊರ್ಧ್ವಪುoಡ್ರವೀಹೀನಸ್ಯ ಸ್ಮಶಾನಸದೃಶಂ ಮುಖಮ್*
*ಅವಲೋಕ್ಯ ಮುಖo ತಸ್ಯ ಆದಿತ್ಯಮವಲೋಕಯೇತ್*
ಈ
ಗೋಪಿಚಂದನವನ್ನು ಧರಿಸದಿದ್ದರೆ ಏನಾಗುತ್ತದೆ ?ಎಂದರೆ ಜಗದ್ಗುರು ಶ್ರೀಮಧ್ವಾಚಾರ್ಯರು
ಹೇಳುತ್ತಾರೆ -ಯಾರ ಮುಖದಲ್ಲಿ ಗೋಪಿಚoದನದಿoದ ಹಚ್ಚಿಕೊoಡ
ಊರ್ಧ್ವಪುoಡ್ರವಿರುವುದಿಲ್ಲವೂ ಅವನ ಮುಖ ಸ್ಮಶಾನದಂತೆ ಆಪವಿತ್ರವಾದದ್ದು. ಕಾರಣ ಆ
ಮುಖವನ್ನು ನೋಡಿದ ದೋಷಪರಿಹಾರಕ್ಕಾಗಿ ಸೂರ್ಯನನ್ನು ಅವಶ್ಯವಾಗಿ ನೋಡಬೇಕು.
*ಶ್ರೀಕೃಷ್ಣಾಮೃತಮಹಾರ್ಣವ
*ಶ್ರೀಐತರೇಯ....
*ನಾಹo ಕರ್ತಾ ಹರಿಃ ಕರ್ತಾ
ಗೋಪಿಚಂದನ ಮಹಾತ್ಮೆ -4:
*ಯೋ ಮೃತ್ತಿಕಾo ದ್ವಾರವತೀ ಸಮುದ್ಭವಾo*
*ಕರೇ ಸಮಾದಾಯ ಲಲಾಟಪಟ್ಟಕೇ*
*ಕರೋತಿ ನಿತ್ಯo ನರ ಊರ್ಧ್ವಪುoಡ್ರ*
*ಕ್ರಿಯಾಫಲo ಕೋಟಿ ಗುಣo ತರಾ ಭವೇತ್*
ಗೋಪಿಚಂದನದಿoದ ಯಾರು ನಿತ್ಯವೂ ದ್ವಾದಶಊರ್ಧ್ವಪುoಡ್ರಗಳನ್ನು ಧರಿಸುವರೋ ,ಅವರುನಡೆಸುವ ಕರ್ಮಗಳಿಗೆ ಕೋಟಿಪಟ್ಟು ಫಲದೊರೆಯುತ್ತದೆ *ಸ್ಕoದಪುರಾಣ ವೈಷ್ಣವ ಖಂಡ
*ಶ್ರೀಐತರೇಯ.....
*ನಾಹಂಕರ್ತಾ ಹರಿಃಕರ್ತಾ.
ಗೋಪಿಚಂದನ ಮಹಾತ್ಮೆ -5:
*ಗೋಪಿಚಂದನ ಖಂಡoತು ಯೋ ದದಾತಿ ವೈಷ್ಣವೇ*
*ಕುಲಮಷ್ಟೋತ್ತರಂ ತೇನ ತಾರಿತಂ ವೈ ಭವೇಚ್ಛತಮ್*
ಯಾರು ವೈಷ್ಣವನಿಗೆ ಗೋಪಿಚಂದನದ ತುoಡುಗಳನ್ನು ದಾನ ಮಾಡುವನೋ ,ಆದರಿoದಾಗಿ ಅವನ ನೂರೆoಟು ಕುಲಗಳು ಉದ್ಧಾರವಾಗುವುದು.
*ಸ್ಕಂದ ಪುರಾಣ ವೈಷ್ಣವ ಖಂಡ
*ಶ್ರೀಐತರೇಯ.....
ಗೋಪಿಚಂದನ ಮಹಾತ್ಮೆ -6:
*ಊರ್ಧ್ವಪುoಡ್ರo ಸದಾ ಧಾರ್ಯo ಸಂಧ್ಯಾನುಷ್ಠಾನ ಕರ್ಮಸು*
*ಶ್ರಾದ್ಧಕಾಲೇ ವಿಶೇಷೇಣ ಕರ್ತಾ ಭೋಕ್ತಾ ಚ ನ ತ್ಯಜೇತ್*
ಸಂಧ್ಯಾವಂದನೆ
ಮುoತಾದ ಪವಿತ್ರ ಮಂಗಲ ಕಾರ್ಯಗಳಲ್ಲಿ ಯಾವಗಲೂ ಮರೆಯದೇ ಗೋಪಿಚಂದನದಿoದ ದ್ವಾದಶ
ಊರ್ಧ್ವಪುoಡ್ರಗಳನ್ನು ಪ್ರತಿಯೊಬ್ಬರು ಧರಿಸಬೇಕು.ಶ್ರಾದ್ಧಕಾಲದಲ್ಲಿ ವಿಶೇಷವಾಗಿ
ಗೋಪಿಚಂದನದಿoದ ಊರ್ಧ್ವಪುoಡ್ರಗಳನ್ನು ಧರಿಸಬೇಕು ,ಶ್ರಾದ್ಧಕರ್ಮ ಮಾಡುವವನು,ಶ್ರಾದ್ಧ
ಭೋಜನ ಮಾಡುವವನೂ ,ಗೋಪಿಚoದನದಿoದ ಊರ್ಧ್ವಪುoಡ್ರಗಳನ್ನು ಧರಿಸಲೇಬೇಕು,ಬಿಡಕೂಡದು.
*ಆತ್ರೇಯ ವಚನ
*ಶ್ರೀಐತರೇಯ....
ಗೋಪಿಚಂದನ ಮಹಾತ್ಮೆ - 7:
*ಗ್ರಹಾ ನ ಪೀಡoತಿ ರಕ್ಷಸಾo ಗಣಾಃ*
*ಯಕ್ಷಃ ಪಿಶಾಚೋರಗ ಭೂತನಾಯಕಾಃ*
*ಲಲಾಟ ಪಟ್ಟೇ ಸುತ ! ಗೋಪಿಚಂದನಂ*
*ಸಂತಿಷ್ಠತೇ ಯಸ್ಯ ಮಮ ಪ್ರಭಾವಾತ್*
ಗೋಪಿಚಂದನವು
ಪುಂಡ್ರದ ರೂಪದಲ್ಲಿ ಯಾರ ಹಣೆಯ ಮೇಲೆ ಇರುವುದೂ ,ಅಂತಹವನಿಗೆ ಭಗವಂತನ ಅನುಗ್ರಹ ದಿoದ
ಗ್ರಹಪೀಡೆ ,ರಾಕ್ಷಸಪೀಡೆ ,ಪಿಶಾಚ, ಹಾವು ,ಭೂತ ಇತ್ಯಾದಿಗಳಪೀಡೆ ಸಂಭವಿಸುವುದಿಲ್ಲ.
*ಸ್ಕಂದ ಪುರಾಣ ವೈಷ್ಣವ ಖಂಡ
*ಶ್ರೀಐತರೇಯ.....
ಗೋಪಿಚಂದನ ಮಹಾತ್ಮೆ -8:
*ಗೋಪ್ಯಾoಗರಾಗ ಸಂಭೂತಂ ಗೋಪಿಚಂದನಮುತ್ತಮಮ್
*ಗೋಪಿಚಂದನ ಲಿಪ್ತಾoಗೋ
*ಗಂಗಾಸ್ನಾನ ಫಲo ಲಭೇತ್
ಗೋಪೀಜನರ ಲೇಪನದಿoದ ಉತ್ಪನ್ನವಾದ,ಉತ್ತಮವಾದ ಗೋಪಿಚಂದನವನ್ನು
ಧರಿಸುವವನು ಗಂಗಾಸ್ನಾನದ ಫಲವನ್ನು ಪಡೆಯುತ್ತಾನೆ.
*ಗಾರ್ಗ್ಯಸಂಹಿತೆ 7-16*
******************************************************************
Amazing bio-science by our Maharishis. Our Heritage is unarguably THE GREATEST.
1) ಮಾತೃದೇವೋಭವ, ಪಿತೃದೇವೋಭವ ಎಂದು ಹೇಳಿದ ದೇಶ ಭಾರತ ದೇಶ. ಆದರೆ ಅದನ್ನು ಆಚರಿಸುತ್ತಿರುವ ದೇಶ ಆಸ್ಟ್ರೇಲಿಯಾ.
1) ಮಾತೃದೇವೋಭವ, ಪಿತೃದೇವೋಭವ ಎಂದು ಹೇಳಿದ ದೇಶ ಭಾರತ ದೇಶ. ಆದರೆ ಅದನ್ನು ಆಚರಿಸುತ್ತಿರುವ ದೇಶ ಆಸ್ಟ್ರೇಲಿಯಾ.
(ಮಕ್ಕಳು ತಂದೆತಾಯಿಯನ್ನು ಗೌರವಿಸುವುದರಲ್ಲಿ ಮೊದಲ ಸ್ಥಾನ ಆಸ್ಟ್ರೇಲಿಯಾದು)
2) ಗುರು ದೇವೋಭವ ಎಂದು ಹೇಳಿದ ದೇಶ ಭಾರತ…ಆದರೆ ಅದನ್ನು ಆಚರಿಸುವುದು ಚೀನಾ.
(ಗುರುವನ್ನು ಗೌರವಿಸುವುದರಲ್ಲಿ ಚೀನಾ ಮೊದಲ ಸ್ಥಾನದಲ್ಲಿದೆ)
3) ಯತ್ರ ನಾರ್ಯಂತು ಪೂಜ್ಯತೆ… ಎಂದು ಹೇಳಿದ ದೇಶ ಭಾರತ. ಆದರೆ ಆಚರಿಸುವುದು ನಾರ್ವೆ.
(ಮಹಿಳೆಯರಿಗೆ ಭದ್ರತೆ ಮತ್ತು ಗೌರವ ಕೊಡುವುದರಲ್ಲಿ ನಾರ್ವೆದು ಮೊದಲ ಸ್ಥಾನ)
4) ಹಿರಿಯರನ್ನು, ವೃದ್ಧರನ್ನು ಗೌರವಿಸಿ ಎಂದು ಹೇಳಿದ ದೇಶ ಭಾರತ. ಆದರೆ ಆಚರಿಸುವುದು ಐಸ್ಲ್ಯಾಂಡ್.
(ಮೊದಲ ಸ್ಥಾನ ಐಸ್ಲ್ಯಾಂಡ್ದು)
5) ಸತ್ಯಮೇವ ಜಯತೆ ಎಂದು ಹೇಳಿದ ದೇಶ ಭಾರತ. ಆದರೆ ಅದನ್ನು ಆಚರಿಸುವುದು ಯುಕೆ.
(ಪ್ರಾಮಾಣಿಕವಾಗಿ ಮೊದಲ ಸ್ಥಾನ ಯುನೈಟೆಡ್ ಕಿಂಗ್ಡಂದೇ)
6) ಕಷ್ಟೇಫಲಿ, ಕೃಷಿತೋ ನಾಸ್ತಿ ದುರ್ಭಿಕ್ಷಂ ಎಂದು ಹೇಳಿದ ದೇಶ ಭಾರತ. ಆದರೆ ಆಚರಿಸುತ್ತಿರುವುದು ದಕ್ಷಣ ಕೊರಿಯಾ.
(ಹಾರ್ಡ್ವರ್ಕ್ನಲ್ಲಿ ಮೊದಲ ಸ್ಥಾನ ದಕ್ಷಿಣ ಕೊರಿಯಾದು)
7) ಜಗತ್ತಿಗೆ ಶಾಂತಿ ಸಂದೇಶ ನೀಡಿದ ದೇಶ ಭಾರತ. ಆದರೆ ಆಚರಿಸುತ್ತಿರುವುದು ನಾರ್ವೆ.
(ಪ್ರಶಾಂತತೆಯಲ್ಲಿ ನಾರ್ವೆಯದು ಮೊದಲ ಸ್ಥಾನ)
8) ಭಗವದ್ಗೀತೆಯನ್ನು ಬೋಧಿಸಿದ ದೇಶ ಭಾರತ. ಆದರೆ ಆಚರಿಸುತ್ತಿರುವುದು ಜಪಾನ್.
(ಕರ್ತವ್ಯ ನಿರ್ವಹಣೆಯಲ್ಲಿ ಅಂಕಿತಭಾವದಲ್ಲಿ ಜಪಾನ್ದು ಮೊದಲ ಸ್ಥಾನ)
9) ಎಷ್ಟೋ ನೀತಿ ನಿಯಮಗಳನ್ನು ಜಾರಿಗೊಳಿಸಿದ ದೇಶ ಭಾರತ. ಆದರೆ ಆಚರಿಸುತ್ತಿರುವುದು ಸಿಂಗಪುರ.
(ಶಿಸ್ತಿನಲ್ಲಿ ಮೊದಲ ಸ್ಥಾನದಲ್ಲಿ ಸಿಂಗಪುರ ಇದೆ)
10) ಶಿಕ್ಷಣ, ಜ್ಞಾನವನ್ನು ಪ್ರವಹಿಸಿದ ದೇಶ ಭಾರತ. ಆದರೆ ಅದನ್ನು ಎತ್ತಿಹಿಡಿದ ದೇಶ ಫಿನ್ಲ್ಯಾಂಡ್.
(ಶಿಕ್ಷಣ, ಮೌಲ್ಯಗಳ ವಿಚಾರದಲ್ಲಿ ಫಿನ್ಲ್ಯಾಂಡ್ ಮೊದಲ ಸ್ಥಾನದಲ್ಲಿದೆ)
ಇಲ್ಲಿ ಮೊದಲ ಸ್ಥಾನವನ್ನು ಮಾತ್ರ ತಿಳಿಸಿದ್ದೇವೆ. ಮೇಲಿನ ವಿಷಯಗಳಲ್ಲಿ ಸ್ವಲ್ಪ ವ್ಯತ್ಯಾಸದೊಂದಿಗೆ ಟಾಪ್ ಟ್ವೆಂಟಿಯಲ್ಲಿರುವ ದೇಶಗಳಿವು..(ರ್ಯಾಂಡಂ ಆಗಿ)
ನಾರ್ವೆ,
ಐಸ್ಲ್ಯಾಂಡ್, ಡೆನ್ಮಾರ್ಕ್, ಸ್ವೀಡನ್, ಫಿನ್ಲ್ಯಾಂಡ್, ಜಪಾನ್, ಯುಕೆ, ಚೀನಾ,
ಸ್ವಿಟ್ಜಲ್ಯಾಂಡ್ದ್, ನ್ಯೂಜಿಲ್ಯಾಂಡ್ದ್, ಸಿಂಗಪುರ, ದಕ್ಷಿಣ ಕೊರಿಯಾ, ನೆದರ್ಲ್ಯಾಂಡ್,
ಯುಎಇ, ಆಸ್ಟ್ರೇಲಿಯಾ…
ಹೇಳುವುದಲ್ಲ.
ಮಾಡಿ ತೋರಿಸಿದರೆ ಅದಕ್ಕೆ ಬೆಲೆ ಇರುತ್ತದೆ. ಮೇಲಿನ ವಿಚಾರಗಳಲ್ಲಿ ಭಾರತ ಮಾತ್ರ ಕೊನೆಯ
ಸ್ಥಾನದಲ್ಲಿದೆ. ಮೊದಲ ಸ್ಥಾನಕ್ಕೇರುವ ದಿನಗಳು ಬರಲಿ ಎಂದು ಆಶಿಸೋಣ. ಬರೀ
ಮಾತಿನಲ್ಲಷ್ಟೆ ಅಲ್ಲ ಒಬ್ಬರ ಭುಜಕ್ಕೆ ಇನ್ನೊಬ್ಬರು ಭುಜ ಕೊಟ್ಟು….ಜಗತ್ತಿಗೆ ನಾವು
ಪರಿಚಯಿಸಿದ ಎಲ್ಲಾ ವಿಚಾರಗಳಲ್ಲೂ ಪ್ರಥಮ ಸ್ಥಾನದಲ್ಲಿ ನಿಲ್ಲೋಣ.
*********************************************************************
ವಿಶ್ವಾಮಿತ್ರ ಋಷಿಗಳು ಹೇಳುವಂತೆ 'ಗಾಯತ್ರಿ ಮಂತ್ರಕ್ಕೆ ಸಮನಾದ ಮಂತ್ರ
ವೇದದಲ್ಲಿಯೇ ಮತ್ತೊಂದಿಲ್ಲ'. ಭಗವಾನ್ ಮನು ಹೇಳುತ್ತಾನೆ, 'ಬ್ರಹ್ಮದೇವರು ಮೂರು ವೇದದ
ಸಾರವನ್ನು ಗಾಯತ್ರಿ ಮಂತ್ರದ ಮೂರು ಚರಣಗಳಲ್ಲಿ ತುಂಬಿಸಿಕೊಟ್ಟಿರುವವರು' ಗಾಯತ್ರಿಯಿಂದ
ಸರ್ವ ರೀತಿಯ ಸಿದ್ಧಿಪ್ರಾಪ್ತಿಯಾಗುತ್ತದೆ...
ಉಪನಯನವೆಂಬ
ಸಂಸ್ಕಾರದ ಮೂಲಕ ಏಳು ವರ್ಷ ಪೂರ್ತಿಯಾಗಿ ಎಂಟನೇ ವರ್ಷಕ್ಕೆ ಕಾಲಿಡುವಾಗ ದ್ವಿಜ ಅಥವಾ
ಬ್ರಾಹ್ಮಣನೆನಿಸಿ ಬ್ರಹ್ಮಜ್ಞಾನವನ್ನು ಪಡೆಯುವ ಅರ್ಹತೆಯನ್ನು ಒಬ್ಬ ಹುಡುಗ
ಪಡೆಯುತ್ತಾನೆ. ಈ ಮೂಲಕ ಗಾಯತ್ರಿ ಮಂತ್ರದ ಉಪದೇಶ ಪಡೆಯುತ್ತಾನೆ.
ಸೂರ್ಯ ದೇವರಿಗೆ ಸಂಬಂಧಿಸಿದ ಈ ಮಂತ್ರ ನಮ್ಮ ಋಷಿಮುನಿಗಳು ನಮಗೆ ಬಿಟ್ಟು ಹೋಗಿರುವ ನಮ್ಮ ಜನ್ಮವನ್ನು ನಾವೇ ಉದ್ಧಾರ ಮಾಡಿಕೊಳ್ಳಬಹುದಾದ ದಿವ್ಯಮಂತ್ರವಾಗಿದೆ.
ಉಪನಯನ
ಸಂಸ್ಕಾರದ ನಂತರದ ಕ್ಷಣವೇ ಬ್ರಾಹ್ಮಣನೆನಿಸಿಕೊಂಡ ಯಾವನೇ ವ್ಯಕ್ತಿ ಬ್ರಹ್ಮಜ್ಞಾನವನ್ನು
ಕ್ರಮೇಣ ಪಡೆಯುತ್ತಾ, ಸಾತ್ವಿಕ ಬುದ್ಧಿ ಹೊಂದಿ ಸದಾ ಇನ್ನೊಬ್ಬರ ಒಳ್ಳೆಯದನ್ನೇ
ಹಾರೈಸುತ್ತಾನೆ. ಎಲ್ಲರಿಗೂ ಸನ್ಮಾರ್ಗದಲ್ಲಿ ಹೋಗುವ ದಾರಿ ತೋರಿಸುತ್ತಾನೆ. ಅವನೇ
ನಿಜವಾದ ಬ್ರಾಹ್ಮಣ.
ಪದ್ಮಪುರಾಣದಲ್ಲಿ ಬ್ರಹ್ಮನೇ ನಾರದರಿಗೆ ನಿಜವಾದ ಬ್ರಾಹ್ಮಣ ಎಂದರೆ ಯಾರು? ಎಂಬ ವಿವರಣೆಯನ್ನು ವಿವರಿಸಿದ್ದಾರೆ.
'ಜನ್ಮನಾ
ಚಾಯತೇ ಜಂತುಃ ಸಂಸ್ಕಾರಾತ್ ದ್ವಿಜ ಉಚ್ಯತೆ'- ಅಂದರೆ ಹುಟ್ಟಿನಿಂದ ಎಲ್ಲರೂ
ಶ್ರೀಸಾಮಾನ್ಯರೇ, ಸಂಸ್ಕಾರ ಬಲದಿಂದ ದ್ವಿಜನಾಗಿ ಬ್ರಹ್ಮಜ್ಞಾನ ಪಡೆಯಲು
ಅರ್ಹನಾಗುತ್ತಾನೆ.
ಸಂಧ್ಯಾವಂದನೆ
ಮಾಡುವುದು ಬ್ರಾಹ್ಮಣನೆನಿಸಿಕೊಂಡವನ ಆದ್ಯ ಕರ್ತವ್ಯ. ಏಕೆಂದರೆ ಈ ಮೂಲಕ
ಪ್ರತಿಯೊಬ್ಬರಿಗೂ ತನ್ನ ಪ್ರವರ ಮತ್ತು ಗೋತ್ರದ ತಿಳಿವಳಿಕೆ ಬರುತ್ತದೆ. ಇದರಿಂದ
ಮುಂದಕ್ಕೆ ವಿವಾಹದ ಸಂದರ್ಭದಲ್ಲಿ ಸಗೋತ್ರ ವಿವಾಹದಿಂದ ತಪ್ಪಿಸಿಕೊಳ್ಳಬಹುದು. ಸಗೋತ್ರ
ವಿವಾಹ ಮತ್ತು ಹತ್ತಿರದ ಸಂಬಂಧಿಗಳ ವಿವಾಹ ಆರೋಗ್ಯಕರವಲ್ಲ. ಒಂದೇ ರಕ್ತಗುಂಪು ಇರುವ
ಗಂಡು ಹೆಣ್ಣು ವಿವಾಹವಾದರೆ ಯಾವ ಸಮಸ್ಯೆಗಳು ಬರುತ್ತವೆ ಎಂಬುದನ್ನು ನಮ್ಮ ಮಹರ್ಷಿಗಳು
ಸಾವಿರಾರು ವರ್ಷಗಳ ಹಿಂದೆಯೇ ಹೇಳಿದ್ದಾರೆ.
ಒಬ್ಬ
ವ್ಯಕ್ತಿ ಎಷ್ಟೇ ಶ್ರೀಮಂತನಾಗಿರಲಿ, ಎಷ್ಟೇ ಉನ್ನತ ಹುದ್ದೆಯಲ್ಲಿರಲಿ ಗಾಯತ್ರಿ ಮಂತ್ರದ
ಉಪದೇಶವನ್ನು ಪಡೆದ ನಂತರ ನಿರಂತರ ಪ್ರತಿದಿನ ತಪ್ಪದೇ ತನ್ನ ಜೀವನದುದ್ದಕ್ಕೂ
ಉಚ್ಚರಿಸತಕ್ಕದ್ದು. ಏಕಂದರೆ ಎಲ್ಲಾ ಮಂತ್ರ, ಪೂಜೆ, ಪುರಸ್ಕಾರಗಳಿಗೂ ಅತೀ ಎತ್ತರದಲ್ಲಿ
ರಾರಾಜಿಸುವುದು ಗಾಯತ್ರಿ ಮಹಾಮಂತ್ರ. ಗಾಯತ್ರಿ ಕಾಮಧೇನು ಅಥರ್ವವೇದದಲ್ಲಿ ಗಾಯತ್ರಿ
ಮಂತ್ರ-ಶಕ್ತಿ, ಧನ ಸಂಪತ್ತು ಮತ್ತು ಬ್ರಹ್ಮತೇಜಸ್ಸನ್ನು ನೀಡುವ ಮಹಾಮಾತೆ ಎಂದಿದ್ದಾರೆ.
ವಿಶ್ವಾಮಿತ್ರ
ಋಷಿಗಳು ಹೇಳುವಂತೆ 'ಗಾಯತ್ರಿ ಮಂತ್ರಕ್ಕೆ ಸಮನಾದ ಮಂತ್ರ ವೇದದಲ್ಲಿಯೇ ಮತ್ತೊಂದಿಲ್ಲ'.
ಭಗವಾನ್ ಮನು ಹೇಳುತ್ತಾನೆ, 'ಬ್ರಹ್ಮದೇವರು ಮೂರು ವೇದದ ಸಾರವನ್ನು ಗಾಯತ್ರಿ ಮಂತ್ರದ
ಮೂರು ಚರಣಗಳಲ್ಲಿ ತುಂಬಿಸಿಕೊಟ್ಟಿರುವವರು' ಗಾಯತ್ರಿಯಿಂದ ಸರ್ವ ರೀತಿಯ
ಸಿದ್ಧಿಪ್ರಾಪ್ತಿಯಾಗುತ್ತದೆ.
ಮಹರ್ಷಿ
ವ್ಯಾಸರು ಹೇಳುವಂತೆ ಗಾಯತ್ರಿಯನ್ನು ಅಲ್ಲಗಳೆದು ಅನ್ಯ ಉಪಾಸನೆ ಮಾಡುವಂಥ ವ್ಯಕ್ತಿ
ಪಕ್ವಾನ್ನವನ್ನು ತೊರೆದು ಭಿಕ್ಷಾನ್ನವನ್ನು ಸ್ವೀಕರಿಸುವ ಮೂರ್ಖರಿಗೆ ಸಮ. ಮಂದ ಬುದ್ಧಿಯ
ಸ್ಮರಣ ಶಕ್ತಿ ಕಡಿಮೆ ಇರುವ ವಿದ್ಯಾರ್ಥಿಗಳು 108 (ನೂರ ಎಂಟು) ಬಾರಿ ಜಪಿಸಬೇಕು.
ಗಾಯತ್ರಿ ತ್ರಿಗುಣಾತ್ಮಕ ಗಾಯತ್ರಿ ಮಂತ್ರ ಪಠಿಸುತ್ತಿರುವಾಗ ತುಟಿ ಅಲುಗಾಡಬೇಕಲ್ಲದೆ
ಇತರರಿಗೆ ಕೇಳಬಾರದು.
ಐಶ್ವರ್ಯ
ಹಾಗೂ ಶೋಭೆಯಿಂದ ಕೂಡಿದ ಗಾಯತ್ರಿಯು ಲೋಕಕ್ಕೆ ತಾಯಿ. ಪರಬ್ರಹ್ಮನ ಸ್ವರೂಪವುಳ್ಳವಳು,
ಶ್ರೇಷ್ಠ ಸಂಪತ್ತನ್ನು ಕೊಡುವವಳು, ಜಪಿಸಲು ಯೋಗ್ಯಳು, ಬ್ರಹ್ಮತೇಜಸ್ಸನ್ನು
ಹೆಚ್ಚಿಸುವವಳು ಆಗಿದ್ದಾಳೆ.
ತತ್ಸವಿತುರ್ವರೇಣ್ಯಂ ಭರ್ಗೋ ದೇವಸ್ಯ ಧೀಮಹೀ
ಧಿಯೋ ಯೋನಃ ಪ್ರಚೋದಯಾತ್॥
ಈ ಮಂತ್ರ ಗಾಯತ್ರಿ ಛಂದಸ್ಸಿನಲ್ಲಿದೆ. ಆದುದರಿಂದ ಇದು ಗಾಯತ್ರಿ, ಇದು ಸಾವಿತ್ರಿಯೂ ಹೌದು.
ಸರ್ವೇಷಾಂ ಜಪ ಸೂಕ್ತಾನಾಂ ಗಾಯತ್ರೀ ಪರಮೋ ಜಪ॥
ದುರ್ಲಭಾ ಸರ್ವ ಮಂತ್ರೇಷು, ಗಾಯತ್ರೀ ಪ್ರಣವಾನ್ವಿತಾ॥ (ಬೃಹತ್ ಪರಾಶರ ಸಂಧ್ಯಾ ಭಾಷ್ಯ)
ಎಲ್ಲ
ಜಪಸೂಕ್ತಗಳ ಪೈಕಿ ಗಾಯತ್ರಿಯೇ ಶ್ರೇಷ್ಠ. ಗಾಯತ್ರಿ ಮಂಜರಿಯಲ್ಲಿ ಶಿವನು ಪಾರ್ವತಿಗೆ
ಹೇಳುತ್ತಾನೆ - ಗಾಯತ್ರಿಯು ವೇದಗಳ ಮಾತೆ ಅವಳೇ ಭೂಮಿಯ ಮೇಲಿನ ಮೊತ್ತ ಮೊದಲ ಶಕ್ತಿ,
ಎಲ್ಲಾ ಬ್ರಾಹ್ಮಣರು ಆದಿ ಶಕ್ತಿ ಹಾಗೂ ವೇದಮಾತೆಯಾದ ಗಾಯತ್ರಿಯನ್ನು ಉಪಾಸಿಸುತ್ತಾರೆ.
ಆದ್ದರಿಂದ ಅವರೆಲ್ಲರೂ ಶಾಕ್ತರೇ ಹೊರತು ಶೈವರೂ ಅಲ್ಲ ವೈಷ್ಣವರೂ ಅಲ್ಲ.
ಗಾಯತ್ರಿ ಮಂತ್ರದ ಅರ್ಥ
ಅನಂತ
ಸ್ವರೂಪನಾದ ಭೂಮಿ, ಅಂತರಿಕ್ಷ ಹಾಗೂ ಸ್ವರ್ಗ ಲೋಕಗಳಲ್ಲಿ ಮೂರು ವೇದಗಳಲ್ಲಿ ಹಾಗೂ ಮೂರು
ಕಾಲಗಳಲ್ಲಿ ವ್ಯಾಪಿಸಿರುವ ಯಾವ ಪರಮಾತ್ಮನನ್ನು ಬುದ್ಧಿ, ಮಾತು ಹಾಗೂ ಕರ್ಮಗಳನ್ನು
ಪ್ರೇರೇಪಿಸುತ್ತಾನೋ ಅಂಥ ಪ್ರಕಾಶ ಮಾನವಾದ ಜಗತ್ತಿನ ಸೃಷ್ಟಿಗೆ ಕಾರಣನಾದ ಸವಿತೃ ದೇವನ
ಶ್ರೇಷ್ಠವಾದ ತೇಜಸ್ಸನ್ನು ಧ್ಯಾನಿಸುತ್ತೇವೆ.
- ಕೆ. ಸುಬ್ರಹ್ಮಣ್ಯ ಆಚಾರ್ಯ.
******************************************************************* Science behind Gotra : (Genetics):
What is Gotra system ?
Why do we have this ? Why do we consider this to decide marriages ?
Why should sons carry the gotra of father, why not daughter ?
How does gotra of a daughter changes after she gets married ?
What is the logic ?
Infact this is an amazing genetic science we follow.
Let's see the science of genetics behind gotra systems.
The word GOTRA formed from two sanskrit words GAU (means cow) and Trahi (means shed).
Gotra means cowshed.
Gotra
is like cowshed protecting a particular male lineage. We identify our
male lineage / gotra by considering to be descendants of the 8 great
rishi (sapta rishi + bharadwaj rishi). All the other gotra evolved from
these only.
Let's
see why human body has 23 pairs of chromosomes (one from father and one
from mother) on these 23 pairs, there is one pair called sex
chromosomes which decides the gender of person.
During conception if the resultant cell is XX chromosomes then the child will be girl, if it is XY then it is boy.
In XY - X is from mother and Y is from father.
In
this Y is unique and it doesn't mix. So in XY, Y will supress the X and
son will get Y chromosomes. Y is the only chromosome which gets passed
down only between male lineage. (Father to Son and to Grandson).
Women
never gets Y. Hence Y plays a crucial role in genetics in identifying
the genealogy. Since women never get Y the gotra of a women is said to
be of her husband.
They are 8 diff Y chromosomes from 8 rishis. If we are from Same gotra then it means we are from same root ancestor.
Marriages
between same gotra will increase the risk of causing genetic disorders
as same gotra Y chromosomes cannot have crossover and it will activate
the defective cells.
If this continues, it will reduce the size and strength of Y chromosome which is crucial for the creation of male.
If no Y chromosome is present in this world, then it will cause males to become extinct.
So Gotra system is a method to avoid genetic disorders and attempt to protect Y chromosome.
*******************************************************************
*******************************************************************
ಭೋಜನ ಕಾಲದಲ್ಲಿ ಬಡಿಸಲಾಗುವ ಪದಾರ್ಥಗಳು ಮತ್ತು ಅವುಗಳ ಭಗವದ್ರೂಪಗಳ ಪರಿಚಯ.
ಬಡಿಸುವ ಕ್ರಮಾನುಸಾರವಾಗಿ ಭಗವಂತನ ೨೪ ನಾಮಗಳನ್ನು ಅನುಕ್ರಮವಾಗಿ ನೀಡಲಾಗಿದ್ದು ಇದೇ ಕ್ರಮವನ್ನು ಸಾಮಾನ್ಯವಾಗಿ ಅನುಸರಿಸಲಾಗುತ್ತದೆ.
1 ಉಪ್ಪು (ಸೌಗಂಧಿ ಸಹಿತ ಜನಾರ್ಧನ)
2 ಚಟ್ನಿ, ಕೋಸಂಬರಿ, ಮುಂತಾದುವು (ಸತ್ಯ ಸಹಿತ ಪ್ರದ್ಯುಮ್ನ)
3 ಕೊಬ್ಬರಿ ಬಳಸಿರುವ ಪಲ್ಯ (ಬುದ್ಧಿಸಹಿತ ಪದ್ಮನಾಭ)
4 ಸೊಪ್ಪು ಬಳಸಿರುವ ಪಲ್ಯಗಳು (ಮಂಗಳಾದೇವಿ ಸಹಿತ ಹೃಶೀಕೇಷ)
5 ಹುಳಿರಹಿತ ಪದಾರ್ಥಗಳು (ಹರಿಣಿ ಸಹಿತ ಸಂಕರ್ಷಣ)
6 ಕಟು ಅಥವಾ ಕಹಿ ಪದಾರ್ಥಗಳು (ನಿತ್ಯ ಸಹಿತ ಅನಿರುದ್ಧ)
7 ಹುಳಿ ಪದಾರ್ಥಗಳು (ಇಂದಿರಾ ಸಹಿತ ದಾಮೋದರ)
8 ಭಕ್ಷ್ಯ ಅಥವಾ ಸಿಹಿ ಪದಾರ್ಥಗಳು (ಕಮಲಾ ಸಹಿತ ಯಾಧವ)
9 ಹೋಳಿಗೆ (ಕಮಲಾಲಯ ಮಧುಸೂದನ)
10 ಗೊಜ್ಜು ಮತ್ತು ಕರಿದ ಪದಾರ್ಥಗಳು (ಸದಾಶ್ರಯ ಆಧೊಷಜ)
11 ಜಹಾಂಗೀರು, ವಡೆ ಮುಂತಾದ ಉದ್ದು ಬಳಸಿರುವ ಪದಾರ್ಥಗಳು (ಸಖಾದೇವಿ ಸಹಿತ ಆಚ್ಯುತ)
12 ಕುಂಬಳಕಾಯಿ, ಎಳ್ಳು, ಉದ್ದಿನ ಪದಾರ್ಥಗಳು-ಹಪ್ಪಳ ಸಂಡಿಗೆ ಮುಂತಾದುವು (ಲಕ್ಷ್ಮೀ ಸರಸಿಂಹ)
13 ಹಣ್ಣು ಮತ್ತು ಪಾನಕಗಳು (ಸುಂದರಿ ಸಹಿತ ಉಪೇಂದ್ರ)
14 ತೊವ್ವೆ (ಧಾನ್ಯ ಸಹಿತ ಶ್ರೀಧರ)
15 ಪರಮಾನ್ನ -ಪಾಯಸ (ಲಕ್ಷ್ಮೀ ಸಹಿತ ನಾರಾಯಣ)
16 ಅನ್ನ (ಶ್ರೀಕೇಶವ)
17 ತುಪ್ಪ (ಪದ್ಮಾ ಸಹಿತ ಗೋವಿಂದ)
18 ಬೆಣ್ಣೆ (ರಮಾ ಸಹಿತ ತ್ರಿವಿಕ್ರಮ)
19 ಹಾಲು / ಕ್ಷೀರ (ಪದ್ಮಿನೀ ಸಹಿತ ಗೋವಿಂದ)
20 ಮೊಸರು (ವೃಕ್ಷಾಕಪಿ ಸಹಿತ ವಾಮನ)
21 ಕುಡಿಯುವ ನೀರು (ಶ್ರೀಕೃಷ್ಣ)
22 ಸಕ್ಕರೆ, ಬೇಳೆ (ದಕ್ಷಿಣಾ ಸಹಿತ ವಾಸುದೇವ)
23 ಶ್ಯಾವಿಗೆ, ಇಂಗು, ಏಲಕ್ಕಿ, ಕೇಸರಿ, ಕರ್ಪೂರ, ಜೀರಿಗೆ, ಮುಂತಾದುವು (ಆನಂದ ಸಹಿತ ಪುರುಷೋತ್ತಮ)
24 ವೀಳ್ಯದೆಲೆ (ಶ್ರೀಹರಿ)
25 ಪಾನಕ - ನಿಂಬೆ (ವಿಶ್ವ)
ವಿಷಯಸೂಚಿ :
1. ಕೆಲವು ಸಂಪ್ರದಾಯಗಳಲ್ಲಿ ತುಪ್ಪವನ್ನು ಭೋಜನಾರಂಭಕ್ಕೆ ಮುಂಚಿತವಾಗಿ ಬಡಿಸುವುದು ರೂಢಿಯಲ್ಲಿದೆ. ಈ ಕ್ರಮವನ್ನು ಪಾತ್ರಾಭಿಗಾರ ಎನ್ನುತ್ತಾರೆ.
2. ಬಡಿಸುವವರು ಭೋಜನ ಮಾಡುವವರ ಎದುರಿನಿಂದ ಬಡಿಸಬೇಕು.
ಗ್ರಂಥಋಣ:
1. ಜಗನ್ನಾಥದಾಸರ ಹರಿಕಥಾಮೃತಸಾರ – ಸರ್ವಪ್ರತೀಕ ಸಂಧಿಯಿಂದ ಆಯ್ದು, ಶ್ರೀ ಸಂಜೀವ ಮೂರ್ತಿದಾಸರು ಪ್ರಸ್ತುತ ಪಡಿಸಿದ ಪ್ರವಚನ.
2. ಶ್ರೀಅಪ್ಪಣ್ಣಾಚಾರ್ಯರ ನೇತೃತ್ವದಲ್ಲಿ ಟಿಟಿಡಿ ಪ್ರಕಾಶಿಸಿದ “ಹರಿ ಭಜನೆ ಮಾಡೋ ನಿತಂತರ” ಪುಸ್ತಕ.
3. ಎಂ.ಕೃಷ್ಣರಾಯ “ಶ್ರೀ ಹರಿಕಥಾಮೃತಸಾರ ಸೌರಭ”.
4. ಶ್ರೀ ಮುರುಗೋಡು ದಾಸರ “ಭಜನ ಚಂದ್ರಿಕಾ”.
*******************************************************************22 Reasons To Believe ancient Bharat Is Based On Science:
ಮರಗಳು
People are advised to worship Neem and Banyan tree in the morning. Inhaling the air near these trees, is good for health.
ಯೋಗಾಭ್ಯಾಸ
If
you are trying to look ways for stress management, there can’t be
anything other than Hindu Yoga aasan Pranayama (inhaling and exhaling
air slowly using one of the nostrils).
ಪ್ರತಿಷ್ಟಾಪನೆ
Hindu
temples are built scientifically. The place where an idol is placed in
the temple is called ‘Moolasthanam’. This ‘Moolasthanam’ is where
earth’s magnetic waves are found to be maximum, thus benefitting the
worshipper.
ತುಳಸೀಪೂಜೆ
Every
Hindu household has a Tulsi plant. Tulsi or Basil leaves when consumed,
keeps our immune system strong to help prevent the H1N1 disease.
ಮಂತ್ರಪಠಣೆ
The
rhythm of Vedic mantras, an ancient Hindu practice, when pronounced and
heard are believed to cure so many disorders of the body like blood
pressure.
ಭಸ್ಮ
Hindus keep the holy ash in their forehead after taking a bath, this removes excess water from your head.
ಕುಂಕುಮ
Women keep kumkum bindi on their forehead that protects from being hypnotised.
ಕೈಯಿಂದ ಊಟ
Eating with hands might be looked down upon in the west but it connects the body, mind and soul, when it comes to food.
ಬಾಳೆಯೆಲೆ ಊಟ
Hindu
customs requires one to eat on a leaf plate. This is the most
eco-friendly way as it does not require any chemical soap to clean it
and it can be discarded without harming the environment.banana; palash
leaves
ಕಿವಿ ಚುಚ್ಚಿಸೋ ಶಾಸ್ತ್ರ
Piercing of baby’s ears is actually part of acupuncture treatment. The point where the ear is pierced helps in curing Asthma.
ಅರಿಶಿನ
Sprinkling
turmeric mixed water around the house before prayers and after. Its
known that turmeric has antioxidant, antibacterial and anti-inflammatory
qualities.
ಗೋಮಯ
The old
practice of pasting cow dung on walls and outside their house prevents
various diseases/viruses as this cow dung is anti-biotic and rich in
minerals.
ಗೋಮೂತ್ರ
Hindus
consider drinking cow urine to cure various illnesses. Apparently, it
does balance bile, mucous and airs and a remover of heart diseases and
effect of poison.
ಶಿಕ್ಷೆ
The
age-old punishment of doing sit-ups while holding the ears actually
makes the mind sharper and is helpful for those with Autism, Asperger’s
Syndrome, learning difficulties and behavioural problems.
ದೀಪ
Lighting ‘diyas’ or oil or ghee lamps in temples and house fills the surroundings with positivity and recharges your senses.
ಯಜ್ಞೋಪವೀತ
Janeu,
or the string on a Brahmin’s body, is also a part of Acupressure
‘Janeu' and keeps the wearer safe from several diseases.
ಮಾವಿನ ತೋರಣ
Decorating the main door with ‘Toran’- a string of mangoes leaves;neem leaves;ashoka leaves actually purifies the atmosphere.
ಚರಣಸ್ಪರ್ಶ
Touching your elder’s feet keeps your backbone in good shape.
ಚಿತೆ
Cremation or burning the dead, is one of the cleanest form of disposing off the dead body.
ॐ
Chanting
the mantra ‘Om’ leads to significant reduction in heart rate which
leads to a deep form of relaxation with increased alertness.
ಹನುಮಾನ್ ಚಾಲೀಸಾ ಪಠಣೆ
Hanuman Chalisa, according to NASA, has the exact calculation of the distance between Sun and the Earth.
ಶಂಖನಾದ
The
‘Shankh Dhwani’ creates the sound waves by which many harmful germs,
insects are destroyed. The mosquito breeding is also affected by Shankh
blowing and decreases the spread of malaria.
*******************************************************************
Comments
Post a Comment