PURANA KATHEGALU
Celebrate festivals by understanding and experiencing their true significance. Right from this moment, embark on a new life giving up bad thoughts and bad qualities. Purify your heart and your life will become blissful. There is no point in reading sacred texts or visiting noble souls unless you purify your heart. Let your thoughts, words and deeds be sacred. This is the true significance of celebrating New Year. When you undertake any task with a sacred heart, you will certainly meet with success. You all believe you are devoted to Sai, then you must adhere to My teachings strictly. Fill your lives with love. Stop criticizing others. Respect even those who hate you. Hatred is a bad quality. It will ruin you. Hence, get rid of this evil. Love everyone. When you follow My teachings, you will certainly achieve sacred results and earn a good name. Give up selfishness and dedicate your life for others well-being. (Divine Discourse, Apr 13, 2002)
***********************************************************************************************************************************************************************************
*ವಯಸ್ಸಾದ ಅಜ್ಜಿಯನ್ನು ರಂಗೋಲಿ ಹಾಕುವುದು ಏಕೆ? ಎಂದಾಗ ಒಂದು ಕತೆಯನ್ನೇ ಹೇಳುತ್ತಾರೆ. ಆ ಕತೆ ಏನು ಗೊತ್ತೆ.*
ಆಯುಷ್ಯ
ಮುಗಿದೊಡನೆ ಜೀವಾತ್ಮವನ್ನು ಕರೆದೊಯ್ಯಲು ಭೂಮಿಗೆ ಬರುವ ಯಮಧರ್ಮರಾಜ, ಒಮ್ಮೆ
ಪತಿವ್ರತೆಯೊಬ್ಬಳ ಪತಿಯ ಪ್ರಾಣವನ್ನು ಕೊಂಡೊಯ್ಯಲು ಸೂರ್ಯ ಹುಟ್ಟುವ ವೇಳೆಗೇ
ಪ್ರತ್ಯಕ್ಷನಾದನಂತೆ. ಅಷ್ಟೊತ್ತಿಗಾಗಲೇ, ಸ್ನಾನ ಮಾಡಿ, ಮನೆಯ ಮುಂದೆ ಕಸ ಗುಡಿಸಿ,
ಸಾರಿಸಿ ಸುಂದರವಾಗಿ ರಂಗೋಲಿ ಇಟ್ಟಿದ್ದ ಸಾಧ್ವಿಯ ಕಂಡು ಕಠೋರ ಹೃದಯದ ಯಮನ ಹೃದಯವೂ
ಕರಗಿತಂತೆ. ಆಕೆ ಮನೆಯ ಮುಂದೆ ಹಾಕಿದ್ದ ಆ ರಂಗೋಲಿ ಯಮನನ್ನೂ ಆಕರ್ಷಿಸಿತ್ತಂತೆ.
ರಂಗೋಲಿಯ
ಕಂಡು ಪ್ರಸನ್ನನಾದ ಯಮದೇವ “ವತ್ಸೆ ನಾನು ನಿನ್ನ ಪತಿಯ ಪ್ರಾಣ ಕೊಂಡೊಯ್ಯಲೆಂದೇ
ಬಂದಿದ್ದೆ. ನಿನ್ನ ಈ ಸುಂದರ ರಂಗೋಲಿ ನನ್ನನ್ನು ಆಕರ್ಷಿಸಿದೆ.“ ಸೂರ್ಯೋದಯಕ್ಕೆ ಮೊದಲೇ
ಎದ್ದು ಮನೆಯ ಮುಂದೆ ರಂಗೋಲಿ ಹಾಕುವ ಮನೆಯನ್ನು ನಾನು ಪ್ರವೇಶಿಸುವುದಿಲ್ಲ ಎಂದು ಆಕೆಗೆ
ವರ ಇತ್ತನಂತೆ. ಅದಕ್ಕೇ ಅಂದಿನಿಂದ ಇಂದಿನ ವರೆಗೆ ಭಾರತ ನಾರಿಯರು ಸೂರ್ಯೋದಯಕ್ಕೆ ಮೊದಲೇ
ಎದ್ದು, ಮನೆಯ ಮುಂದೆ ರಂಗೋಲಿ ಹಾಕುತ್ತಾರಂತೆ.
********************************************************************************************************************
IMPORTANCE OF GAYATRI MANTRA:
ವಿಶ್ವಾಮಿತ್ರ ಋಷಿಗಳು ಹೇಳುವಂತೆ 'ಗಾಯತ್ರಿ ಮಂತ್ರಕ್ಕೆ ಸಮನಾದ ಮಂತ್ರ ವೇದದಲ್ಲಿಯೇ ಮತ್ತೊಂದಿಲ್ಲ'. ಭಗವಾನ್ ಮನು ಹೇಳುತ್ತಾನೆ, 'ಬ್ರಹ್ಮದೇವರು ಮೂರು ವೇದದ ಸಾರವನ್ನು ಗಾಯತ್ರಿ ಮಂತ್ರದ ಮೂರು ಚರಣಗಳಲ್ಲಿ ತುಂಬಿಸಿಕೊಟ್ಟಿರುವವರು' ಗಾಯತ್ರಿಯಿಂದ ಸರ್ವ ರೀತಿಯ ಸಿದ್ಧಿಪ್ರಾಪ್ತಿಯಾಗುತ್ತದೆ...
ಉಪನಯನವೆಂಬ
ಸಂಸ್ಕಾರದ ಮೂಲಕ ಏಳು ವರ್ಷ ಪೂರ್ತಿಯಾಗಿ ಎಂಟನೇ ವರ್ಷಕ್ಕೆ ಕಾಲಿಡುವಾಗ ದ್ವಿಜ ಅಥವಾ
ಬ್ರಾಹ್ಮಣನೆನಿಸಿ ಬ್ರಹ್ಮಜ್ಞಾನವನ್ನು ಪಡೆಯುವ ಅರ್ಹತೆಯನ್ನು ಒಬ್ಬ ಹುಡುಗ
ಪಡೆಯುತ್ತಾನೆ. ಈ ಮೂಲಕ ಗಾಯತ್ರಿ ಮಂತ್ರದ ಉಪದೇಶ ಪಡೆಯುತ್ತಾನೆ.
ಸೂರ್ಯ ದೇವರಿಗೆ ಸಂಬಂಧಿಸಿದ ಈ ಮಂತ್ರ ನಮ್ಮ ಋಷಿಮುನಿಗಳು ನಮಗೆ ಬಿಟ್ಟು ಹೋಗಿರುವ ನಮ್ಮ ಜನ್ಮವನ್ನು ನಾವೇ ಉದ್ಧಾರ ಮಾಡಿಕೊಳ್ಳಬಹುದಾದ ದಿವ್ಯಮಂತ್ರವಾಗಿದೆ.
ಉಪನಯನ
ಸಂಸ್ಕಾರದ ನಂತರದ ಕ್ಷಣವೇ ಬ್ರಾಹ್ಮಣನೆನಿಸಿಕೊಂಡ ಯಾವನೇ ವ್ಯಕ್ತಿ ಬ್ರಹ್ಮಜ್ಞಾನವನ್ನು
ಕ್ರಮೇಣ ಪಡೆಯುತ್ತಾ, ಸಾತ್ವಿಕ ಬುದ್ಧಿ ಹೊಂದಿ ಸದಾ ಇನ್ನೊಬ್ಬರ ಒಳ್ಳೆಯದನ್ನೇ
ಹಾರೈಸುತ್ತಾನೆ. ಎಲ್ಲರಿಗೂ ಸನ್ಮಾರ್ಗದಲ್ಲಿ ಹೋಗುವ ದಾರಿ ತೋರಿಸುತ್ತಾನೆ. ಅವನೇ
ನಿಜವಾದ ಬ್ರಾಹ್ಮಣ.
ಪದ್ಮಪುರಾಣದಲ್ಲಿ ಬ್ರಹ್ಮನೇ ನಾರದರಿಗೆ ನಿಜವಾದ ಬ್ರಾಹ್ಮಣ ಎಂದರೆ ಯಾರು? ಎಂಬ ವಿವರಣೆಯನ್ನು ವಿವರಿಸಿದ್ದಾರೆ.
'ಜನ್ಮನಾ
ಚಾಯತೇ ಜಂತುಃ ಸಂಸ್ಕಾರಾತ್ ದ್ವಿಜ ಉಚ್ಯತೆ'- ಅಂದರೆ ಹುಟ್ಟಿನಿಂದ ಎಲ್ಲರೂ
ಶ್ರೀಸಾಮಾನ್ಯರೇ, ಸಂಸ್ಕಾರ ಬಲದಿಂದ ದ್ವಿಜನಾಗಿ ಬ್ರಹ್ಮಜ್ಞಾನ ಪಡೆಯಲು
ಅರ್ಹನಾಗುತ್ತಾನೆ.
ಸಂಧ್ಯಾವಂದನೆ ಮಾಡುವುದು
ಬ್ರಾಹ್ಮಣನೆನಿಸಿಕೊಂಡವನ ಆದ್ಯ ಕರ್ತವ್ಯ. ಏಕೆಂದರೆ ಈ ಮೂಲಕ ಪ್ರತಿಯೊಬ್ಬರಿಗೂ ತನ್ನ
ಪ್ರವರ ಮತ್ತು ಗೋತ್ರದ ತಿಳಿವಳಿಕೆ ಬರುತ್ತದೆ. ಇದರಿಂದ ಮುಂದಕ್ಕೆ ವಿವಾಹದ
ಸಂದರ್ಭದಲ್ಲಿ ಸಗೋತ್ರ ವಿವಾಹದಿಂದ ತಪ್ಪಿಸಿಕೊಳ್ಳಬಹುದು. ಸಗೋತ್ರ ವಿವಾಹ ಮತ್ತು
ಹತ್ತಿರದ ಸಂಬಂಧಿಗಳ ವಿವಾಹ ಆರೋಗ್ಯಕರವಲ್ಲ. ಒಂದೇ ರಕ್ತಗುಂಪು ಇರುವ ಗಂಡು ಹೆಣ್ಣು
ವಿವಾಹವಾದರೆ ಯಾವ ಸಮಸ್ಯೆಗಳು ಬರುತ್ತವೆ ಎಂಬುದನ್ನು ನಮ್ಮ ಮಹರ್ಷಿಗಳು ಸಾವಿರಾರು
ವರ್ಷಗಳ ಹಿಂದೆಯೇ ಹೇಳಿದ್ದಾರೆ.
ಒಬ್ಬ ವ್ಯಕ್ತಿ ಎಷ್ಟೇ
ಶ್ರೀಮಂತನಾಗಿರಲಿ, ಎಷ್ಟೇ ಉನ್ನತ ಹುದ್ದೆಯಲ್ಲಿರಲಿ ಗಾಯತ್ರಿ ಮಂತ್ರದ ಉಪದೇಶವನ್ನು
ಪಡೆದ ನಂತರ ನಿರಂತರ ಪ್ರತಿದಿನ ತಪ್ಪದೇ ತನ್ನ ಜೀವನದುದ್ದಕ್ಕೂ ಉಚ್ಚರಿಸತಕ್ಕದ್ದು.
ಏಕಂದರೆ ಎಲ್ಲಾ ಮಂತ್ರ, ಪೂಜೆ, ಪುರಸ್ಕಾರಗಳಿಗೂ ಅತೀ ಎತ್ತರದಲ್ಲಿ ರಾರಾಜಿಸುವುದು
ಗಾಯತ್ರಿ ಮಹಾಮಂತ್ರ. ಗಾಯತ್ರಿ ಕಾಮಧೇನು ಅಥರ್ವವೇದದಲ್ಲಿ ಗಾಯತ್ರಿ ಮಂತ್ರ-ಶಕ್ತಿ, ಧನ
ಸಂಪತ್ತು ಮತ್ತು ಬ್ರಹ್ಮತೇಜಸ್ಸನ್ನು ನೀಡುವ ಮಹಾಮಾತೆ ಎಂದಿದ್ದಾರೆ.
ವಿಶ್ವಾಮಿತ್ರ
ಋಷಿಗಳು ಹೇಳುವಂತೆ 'ಗಾಯತ್ರಿ ಮಂತ್ರಕ್ಕೆ ಸಮನಾದ ಮಂತ್ರ ವೇದದಲ್ಲಿಯೇ ಮತ್ತೊಂದಿಲ್ಲ'.
ಭಗವಾನ್ ಮನು ಹೇಳುತ್ತಾನೆ, 'ಬ್ರಹ್ಮದೇವರು ಮೂರು ವೇದದ ಸಾರವನ್ನು ಗಾಯತ್ರಿ ಮಂತ್ರದ
ಮೂರು ಚರಣಗಳಲ್ಲಿ ತುಂಬಿಸಿಕೊಟ್ಟಿರುವವರು' ಗಾಯತ್ರಿಯಿಂದ ಸರ್ವ ರೀತಿಯ
ಸಿದ್ಧಿಪ್ರಾಪ್ತಿಯಾಗುತ್ತದೆ.
ಮಹರ್ಷಿ ವ್ಯಾಸರು
ಹೇಳುವಂತೆ ಗಾಯತ್ರಿಯನ್ನು ಅಲ್ಲಗಳೆದು ಅನ್ಯ ಉಪಾಸನೆ ಮಾಡುವಂಥ ವ್ಯಕ್ತಿ
ಪಕ್ವಾನ್ನವನ್ನು ತೊರೆದು ಭಿಕ್ಷಾನ್ನವನ್ನು ಸ್ವೀಕರಿಸುವ ಮೂರ್ಖರಿಗೆ ಸಮ. ಮಂದ ಬುದ್ಧಿಯ
ಸ್ಮರಣ ಶಕ್ತಿ ಕಡಿಮೆ ಇರುವ ವಿದ್ಯಾರ್ಥಿಗಳು 108 (ನೂರ ಎಂಟು) ಬಾರಿ ಜಪಿಸಬೇಕು.
ಗಾಯತ್ರಿ ತ್ರಿಗುಣಾತ್ಮಕ ಗಾಯತ್ರಿ ಮಂತ್ರ ಪಠಿಸುತ್ತಿರುವಾಗ ತುಟಿ ಅಲುಗಾಡಬೇಕಲ್ಲದೆ
ಇತರರಿಗೆ ಕೇಳಬಾರದು.
ಐಶ್ವರ್ಯ ಹಾಗೂ ಶೋಭೆಯಿಂದ ಕೂಡಿದ
ಗಾಯತ್ರಿಯು ಲೋಕಕ್ಕೆ ತಾಯಿ. ಪರಬ್ರಹ್ಮನ ಸ್ವರೂಪವುಳ್ಳವಳು, ಶ್ರೇಷ್ಠ ಸಂಪತ್ತನ್ನು
ಕೊಡುವವಳು, ಜಪಿಸಲು ಯೋಗ್ಯಳು, ಬ್ರಹ್ಮತೇಜಸ್ಸನ್ನು ಹೆಚ್ಚಿಸುವವಳು ಆಗಿದ್ದಾಳೆ.
ತತ್ಸವಿತುರ್ವರೇಣ್ಯಂ ಭರ್ಗೋ ದೇವಸ್ಯ ಧೀಮಹೀ
ಧಿಯೋ ಯೋನಃ ಪ್ರಚೋದಯಾತ್॥
ಈ ಮಂತ್ರ ಗಾಯತ್ರಿ ಛಂದಸ್ಸಿನಲ್ಲಿದೆ. ಆದುದರಿಂದ ಇದು ಗಾಯತ್ರಿ, ಇದು ಸಾವಿತ್ರಿಯೂ ಹೌದು.
ಸರ್ವೇಷಾಂ ಜಪ ಸೂಕ್ತಾನಾಂ ಗಾಯತ್ರೀ ಪರಮೋ ಜಪ॥
ದುರ್ಲಭಾ ಸರ್ವ ಮಂತ್ರೇಷು, ಗಾಯತ್ರೀ ಪ್ರಣವಾನ್ವಿತಾ॥ (ಬೃಹತ್ ಪರಾಶರ ಸಂಧ್ಯಾ ಭಾಷ್ಯ)
ಎಲ್ಲ
ಜಪಸೂಕ್ತಗಳ ಪೈಕಿ ಗಾಯತ್ರಿಯೇ ಶ್ರೇಷ್ಠ. ಗಾಯತ್ರಿ ಮಂಜರಿಯಲ್ಲಿ ಶಿವನು ಪಾರ್ವತಿಗೆ
ಹೇಳುತ್ತಾನೆ - ಗಾಯತ್ರಿಯು ವೇದಗಳ ಮಾತೆ ಅವಳೇ ಭೂಮಿಯ ಮೇಲಿನ ಮೊತ್ತ ಮೊದಲ ಶಕ್ತಿ,
ಎಲ್ಲಾ ಬ್ರಾಹ್ಮಣರು ಆದಿ ಶಕ್ತಿ ಹಾಗೂ ವೇದಮಾತೆಯಾದ ಗಾಯತ್ರಿಯನ್ನು ಉಪಾಸಿಸುತ್ತಾರೆ.
ಆದ್ದರಿಂದ ಅವರೆಲ್ಲರೂ ಶಾಕ್ತರೇ ಹೊರತು ಶೈವರೂ ಅಲ್ಲ ವೈಷ್ಣವರೂ ಅಲ್ಲ.
ಗಾಯತ್ರಿ ಮಂತ್ರದ ಅರ್ಥ:
ಅನಂತ
ಸ್ವರೂಪನಾದ ಭೂಮಿ, ಅಂತರಿಕ್ಷ ಹಾಗೂ ಸ್ವರ್ಗ ಲೋಕಗಳಲ್ಲಿ ಮೂರು ವೇದಗಳಲ್ಲಿ ಹಾಗೂ ಮೂರು
ಕಾಲಗಳಲ್ಲಿ ವ್ಯಾಪಿಸಿರುವ ಯಾವ ಪರಮಾತ್ಮನನ್ನು ಬುದ್ಧಿ, ಮಾತು ಹಾಗೂ ಕರ್ಮಗಳನ್ನು
ಪ್ರೇರೇಪಿಸುತ್ತಾನೋ ಅಂಥ ಪ್ರಕಾಶ ಮಾನವಾದ ಜಗತ್ತಿನ ಸೃಷ್ಟಿಗೆ ಕಾರಣನಾದ ಸವಿತೃ ದೇವನ
ಶ್ರೇಷ್ಠವಾದ ತೇಜಸ್ಸನ್ನು ಧ್ಯಾನಿಸುತ್ತೇವೆ.
- ಕೆ. ಸುಬ್ರಹ್ಮಣ್ಯ ಆಚಾರ್ಯ
**********************************************************************************************************************************************
Science behind Gotra : (Genetics)
What is Gotra system ?
Why do we have this ? Why do we consider this to decide marriages ?
Why should sons carry the gotra of father, why not daughter ?
How does gotra of a daughter changes after she gets married ?
What is the logic ?
Infact this is an amazing genetic science we follow.
Let's see the science of genetics behind gotra systems.
The word GOTRA formed from two sanskrit words GAU (means cow) and Trahi (means shed).
Gotra means cowshed.
Gotra
is like cowshed protecting a particular male lineage. We identify our
male lineage / gotra by considering to be descendants of the 8 great
rishi (sapta rishi + bharadwaj rishi). All the other gotra evolved from
these only.
Let's see why human body has 23 pairs of
chromosomes (one from father and one from mother) on these 23 pairs,
there is one pair called sex chromosomes which decides the gender of
person.
During conception if the resultant cell is XX chromosomes then the child will be girl, if it is XY then it is boy.
In XY - X is from mother and Y is from father.
In
this Y is unique and it doesn't mix. So in XY, Y will supress the X and
son will get Y chromosomes. Y is the only chromosome which gets passed
down only between male lineage. (Father to Son and to Grandson).
Women
never gets Y. Hence Y plays a crucial role in genetics in identifying
the genealogy. Since women never get Y the gotra of a women is said to
be of her husband.
They are 8 diff Y chromosomes from 8 rishis. If we are from Same gotra then it means we are from same root ancestor.
Marriages
between same gotra will increase the risk of causing genetic disorders
as same gotra Y chromosomes cannot have crossover and it will activate
the defective cells.
If this continues, it will reduce the size and strength of Y chromosome which is crucial for the creation of male.
If no Y chromosome is present in this world, then it will cause males to become extinct.
So Gotra system is a method to avoid genetic disorders and attempt to protect Y chromosome.
Amazing bio-science by our Maharishis. Our Heritage is unarguably THE GREATEST.
***************************************************************************************************************************************************************************************************************
The Story of ugadi*
There
was a demon called *Somakasura,* who stole the *Vedas* from Lord Brahma
and hid them in Sea. Lord Brahma asks help from Lord Vishnu for
bringing back Vedas from Somakasura. Lord Vishnu takes *“Machcha*
*Avathara”,* which is one of the 10 incarnations of Vishnu and kills the
demon (Somakasura). Later, lord Vishnu returns Vedas to Brahma and he
starts creating the world on *ugadi.*
ugadi
means Yuga + Adi, which means beginning of year/ age. The significance
of Yugadi stems from mythological times when Lord Brahma, the creator of
the universe, began a series of wonderful creations, including that of
the earth and all the life forms that live in it. According to a belief,
on the day of ugadi, Brahma also writes the *fate* of humans. One year
is equal to one day of Brahma. Every year Lord Brahma starts his day and
writes fate of people. Current ugadi is called as *“VILAMBI”.*
According
to the Indian History, the ugadi is celebrated from the times of
Mahabharata, on the *“Chaitra* *Shuddha* *Padyami”.* People from ages
celebrate this day with great devotion. Many regions celebrate Yugadi
with many names. Gudi Padawa in Maharashtra, Yugadi in Karnataka, Cheti
Chand amongst the Sindhis.
Yugadi
symbolizes that life is a beautiful combination of happy and sad
events; that one has to experience every phase of life with equality and
be a mixture of all the feelings. That’s the reason a mix-paste of all
these are shared on the day of Yugadi ⤵
Happiness* – Jaggery for its sweetness.
Sadness* – Neem Bud/Flowers for its bitterness.
Anger* – Green Chilli/Pepper for its hot taste.
Fear* – Salt for saltiness
Surprise* – Unripe Mango for its tang.
Disgust* – Tamarind Juice for its sourness.
***********************************************************************************************************
ಯುಗಾದಿ ಹಬ್ಬವನ್ನು ಆಚರಿಸುವುದರ ಮಹತ್ವ ಮತ್ತು ಕಾರಣಗಳು:
ಎಲ್ಲ
ವರ್ಷಾರಂಭಗಳಲ್ಲಿ ಅತ್ಯಂತ ಯೋಗ್ಯ ವರ್ಷಾರಂಭದ ದಿನವೆಂದರೆ ‘ಚೈತ್ರ ಶುಕ್ಲ ಪ್ರತಿಪದೆ.
’ಜನವರಿ ೧ ರಂದು ವರ್ಷಾರಂಭವನ್ನು ಏಕೆ ಮಾಡಬೇಕು ಎನ್ನುವುದಕ್ಕೆ ಯಾವುದೇ ಕಾರಣ ಇಲ್ಲ.
ಯಾರೋ ಒಬ್ಬರು ನಿರ್ಧರಿಸಿದರು ಮತ್ತು ಅದು ಪ್ರಾರಂಭವಾಯಿತು. ತದ್ವಿರುದ್ಧ ಚೈತ್ರ ಶುಕ್ಲ
ಪ್ರತಿಪದೆಯಂದು ವರ್ಷಾರಂಭವನ್ನು ಮಾಡಲು ನೈಸರ್ಗಿಕ, ಐತಿಹಾಸಿಕ ಮತ್ತು ಆಧ್ಯಾತ್ಮಿಕ
ಕಾರಣಗಳಿವೆ.
ನೈಸಗಿಕ
ಕಾರಣಗಳು: ಸರಿಸುಮಾರು ಪ್ರತಿಪದೆಯ ಸಮಯದಲ್ಲಿ ಸೂರ್ಯನು ವಸಂತ – ಸಂಪಾತದ ಮೇಲೆ
ಬರುತ್ತಾನೆ (ಸಂಪಾತ ಬಿಂದು ಎಂದರೆ (ಮಕರ) ಕ್ರಾಂತಿವೃತ್ತ ಮತ್ತು ವಿಷುವವೃತ್ತ
(ಕರ್ಕಾಟಕ) ಈ ಎರಡು ವೃತ್ತಗಳು ಯಾವ ಬಿಂದುವಿನಲ್ಲಿ ಪರಸ್ಪರ ಭೇದಿಸುತ್ತವೆಯೋ ಆ ಬಿಂದು)
ಮತ್ತು ವಸಂತ ಋತುವು ಪ್ರಾರಂಭವಾಗುತ್ತದೆ. ಎಲ್ಲ ಋತುಗಳಲ್ಲಿ ‘ಕುಸುಮಾಕರಿ ವಸಂತ ಋತುವು
ನನ್ನ ವಿಭೂತಿಯಾಗಿದೆ’ ಎಂದು ಭಗವಂತನು ಶ್ರೀಮದ್ಭಗವದ್ಗೀತೆಯಲ್ಲಿ (೧೦:೩೫)
ಹೇಳಿದ್ದಾನೆ. ಈ ಸಮಯದಲ್ಲಿ ಸಮಶೀತೋಷ್ಣ, ಉತ್ಸಾಹವರ್ಧಕ ಮತ್ತು ಆಹ್ಲಾದಕರ
ವಾತಾವರಣವಿರುತ್ತದೆ. ಶಿಶಿರ ಋತುವಿನಲ್ಲಿ ಗಿಡಮರಗಳ ಎಲೆಗಳು ಉದುರಿ ಹೋಗಿರುತ್ತವೆ
ಮತ್ತು ಪ್ರತಿಪದೆಯ ಸಮಯದಲ್ಲಿ ಅವುಗಳಿಗೆ ಹೊಸ ಚಿಗುರು ಬರುತ್ತಿರುತ್ತವೆ. ಗಿಡಮರಗಳು
ಚೆನ್ನಾಗಿ ಕಾಣುತ್ತವೆ. ಯುಗಾದಿ ಪಾಡ್ಯದಂದು ಪ್ರಾರಂಭವಾಗುವ ಹೊಸವರ್ಷದ ಕಾಲಚಕ್ರವು
ವಿಶ್ವದ ಉತ್ಪತ್ತಿಯ ಕಾಲಚಕ್ರಕ್ಕೆ ಸಂಬಂಧಿಸಿದೆ. ಆದುದರಿಂದ ಸೃಷ್ಟಿಯು ನವಚೇತನದಿಂದ
ತುಂಬಿರುತ್ತದೆ. ತದ್ವಿರುದ್ಧವಾಗಿ ಡಿಸೆಂಬರ್ ೩೧ ರಂದು ರಾತ್ರಿ ೧೨ ಗಂಟೆಗೆ
ಪ್ರಾರಂಭವಾಗುವ ಹೊಸವರ್ಷದ ಕಾಲಚಕ್ರವು ವಿಶ್ವದ ಲಯಕಾಲಕ್ಕೆ ಸಂಬಂಧಿಸಿದೆ. ಯುಗಾದಿ
ಪಾಡ್ಯದಂದು ಪ್ರಾರಂಭವಾಗುವ ಹೊಸವರ್ಷದ ತುಲನೆಯನ್ನು ಸೂರ್ಯೋದಯಕ್ಕೆ ಉದಯವಾಗುವ ತೇಜೋಮಯ
ದಿನದೊಂದಿಗೆ ಮಾಡಬಹುದು.
ನಿಸರ್ಗದ
ನಿಯಮವನ್ನು ಅನುಸರಿಸಿ ಮಾಡಿದ ವಿಷಯಗಳು ಮನುಷ್ಯರಿಗೆ ಪೂರಕವಾಗಿರುತ್ತವೆ ಮತ್ತು
ಅದಕ್ಕೆ ವಿರುದ್ಧವಾಗಿ ಮಾಡಿರುವ ವಿಷಯಗಳು ಮನುಷ್ಯರಿಗೆ ಹಾನಿಕಾರಿಯಾಗಿರುತ್ತವೆ.
ಆದುದರಿಂದ ಪಾಶ್ಚಾತ್ಯ ಸಂಸ್ಕೃತಿಗನುಸಾರ ಜನವರಿ ಒಂದರಂದು ಹೊಸವರ್ಷಾರಂಭವನ್ನು ಮಾಡದೇ,
ಯುಗಾದಿ ಪಾಡ್ಯದಂದೇ ಹೊಸವರ್ಷವನ್ನು ಆಚರಿಸುವುದರಲ್ಲಿ ನಮ್ಮ ನಿಜವಾದ ಹಿತವಿದೆ.
ಐತಿಹಾಸಿಕ
ಕಾರಣಗಳು: ಈ ದಿನದಂದು ರಾಮನು ವಾಲಿಯನ್ನು ವಧಿಸಿದನು. ವಿಜಯದ ಪ್ರತೀಕವು
ಎತ್ತರದಲ್ಲಿರುತ್ತದೆ. ಹಾಗಾಗಿ ಬ್ರಹ್ಮಧ್ವಜ ಎತ್ತರದಲ್ಲಿರುತ್ತದೆ. ಈ ದಿನದಿಂದಲೇ
‘ಶಾಲಿವಾಹನ ಶಕೆ’ ಪ್ರಾರಂಭವಾಯಿತು, ಏಕೆಂದರೆ ಈ ದಿನ ಶಾಲಿವಾಹನನು ಶತ್ರುಗಳ ಮೇಲೆ
ವಿಜಯವನ್ನು ಪಡೆದನು.
ಆಧ್ಯಾತ್ಮಿಕ
ಕಾರಣಗಳು : ಬ್ರಹ್ಮದೇವನು ಇದೇ ದಿನದಿಂದು ಸೃಷ್ಟಿಯನ್ನು ನಿರ್ಮಿಸಿದನು. ಅರ್ಥಾತ್ ಈ
ದಿನ ಸತ್ಯಯುಗವು ಪ್ರಾರಂಭವಾಯಿತು. ಆದುದರಿಂದಲೇ ಈ ದಿನದಂದು ವರ್ಷಾರಂಭವನ್ನು
ಮಾಡುತ್ತಾರೆ. ಯುಗಾದಿಯಂದು ತೇಜ ಮತ್ತು ಪ್ರಜಾಪತಿ ಲಹರಿಗಳು ಹೆಚ್ಚಿನ ಪ್ರಮಾಣದಲ್ಲಿ
ಕಾರ್ಯನಿರತವಾಗಿರುತ್ತವೆ. ಸೂರ್ಯೋದಯದ ಸಮಯದಲ್ಲಿ ಈ ಲಹರಿಗಳಿಂದ ಪ್ರಕ್ಷೇಪಿತವಾಗುವ
ಚೈತನ್ಯವು ಹೆಚ್ಚಿನ ಸಮಯದವರೆಗೆ ಉಳಿಯುತ್ತದೆ. ಅದು ಜೀವದ ಜೀವಕೋಶಗಳಲ್ಲಿ
ಸಂಗ್ರಹವಾಗುತ್ತದೆ ಹಾಗೂ ಅವಶ್ಯಕತೆಗನುಸಾರ ಆ ಜೀವದಿಂದ ಉಪಯೋಗಿಸಲ್ಪಡುತ್ತದೆ.
ಅಶ್ವತ್ತಾಮಾ ಬಲಿರ್ವ್ಯಾಸ: ಹನೂಮಾಂಶ್ಚ ವಿಭೀಷಣ: | ಕೃಪ: ಪರಶುರಾಮಶ್ಚ ಸಪ್ತೈತೇ ಚಿರಂಜೀವಿನ: |
**********************************************************************************************************************************************************************************************************************************************
ಓಂ"* ಮಂತ್ರ ಪಠಿಸಿ,
ಅಭ್ಯoಜನವನ್ನು ಮಾಡಿದ ನಂತರ ಭಗವಂತನ ವಿಶೇಷ ಪೂಜೆಯನ್ನು ಮಾಡಿ ನಂತರ ಹೊಸಬಟ್ಟೆಯನ್ನು ಧರಿಸಿ ನಿoಬಕ ದಳ ಬಕ್ಷಣ
(ಬೇವು -ಬೆಲ್ಲ)ವನ್ನು ಮಾಡಬೇಕು
*ಬೇವು ಬೆಲ್ಲ ಭಕ್ಷಣೆ ಮಾಡುವಾಗ ಹೇಳಬೇಕಾದ ಮ oತ್ರ*
*शतायुर्वज्रदेहाय सर्वसंपत्कराय च सर्वारिष्टविनाशाय निंबकदळभक्षणम*
*ಶತಾಯುರ್ವಜ್ರದೇಹಾಯ ಸರ್ವಸಂಪತ್ಕರಾಯ ಚ | ಸರ್ವಾರಿಷ್ಟವಿನಾಶಾಯ ನಿಂಬಕದಳಭಕ್ಷಣಮ್ |*
*ನೂರು ವರ್ಷಆಯುಸ್ಸು -ವಜ್ರದಂತೆ ಧೃಢವಾದ ಶರೀರ ಸರ್ವಸಂಪತ್ತು ಸರ್ವರಿಷ್ಟನಾಶ* *ಇವುಗಳಿಗಾಗಿ ಯುಗಾದಿಯoದು ಬೇವು ಬೆಲ್ಲಗಳ ಭಕ್ಷಣೆ ಮಾಡಬೇಕು*
*ನಂತರ ಪಂಚಾoಗ ಶ್ರವಣಮಾಡಬೇಕು*
ಶ್ರೀಐತರೇಯ....*
*****************************************************************************************************************************************************************************************************************************************************************************
**********************************************************************************************************************************************************************************************************************************************
ಓಂ"* ಮಂತ್ರ ಪಠಿಸಿ,
ಸರ್ವ ರೋಗ ನಿವಾರಿಸಿ
ಹಿಂದೂ
ಧರ್ಮದ ಅನುಸಾರ *ಓಂ* ಗೆ ತನ್ನದೇ ಆದ ಮಹತ್ವ ಇದೆ. *ಓಂ* ಉಚ್ಛಾರ ಮಾಡದೇ ಯಾವುದೇ
ಪೂಜೆಗಳು ಸಂಪೂರ್ಣವಾಗುವುದೇ ಇಲ್ಲ. ಮಂತ್ರಗಳಲ್ಲಿ *ಓಂ* ಉಚ್ಛಾರ ಮಾಡದೇ ಮಂತ್ರ ಹೇಗೆ
ಪೂರ್ಣಗೊಳ್ಳುವುದು..? ಆದರೆ *'ಓಂ'*ಗೆ ಕೇವಲ ಧಾರ್ಮಿಕ ಮಹತ್ವ ಅಲ್ಲದೇ ಶಾರೀರಿಕ ಮಹತ್ವ
ಕೂಡಾ ಇದೆ ಎಂಬುದು ನಿಮಗೆ ತಿಳಿದಿದೆಯೇ.?
ಇಂದು ನಾವು ನಿಮಗೆ
*'ಓಂ'* ನಿಂದ ಉಂಟಾಗುವ ರಹಸ್ಯಮಯ ಶಾರೀರಿಕ ಉಪಯೋಗಗಳನ್ನು ಹೇಳುತ್ತೇವೆ. ಇವುಗಳನ್ನು ನಿಮ್ಮದಾಗಿಸಿಕೊಂಡರೆ ಸರ್ವ ರೋಗಗಳು ನಿಯಂತ್ರಣ ಹೊಂದುತ್ತದೆ.
*'ಓಂ'* ಮತ್ತು *ಥೈರಾಯ್ಡ್*:
'ಓಂ' ನ ಉಚ್ಛಾರಣೆ ಮಾಡುವುದರಿಂದ ಗಂಟಲಿನಲ್ಲಿ ಕಂಪನ ಉಂಟಾಗುತ್ತದೆ. ಇದರಿಂದ ಥೈರಾಯ್ಡ್ ಗ್ರಂಥಿಗಳ ಮೇಲೆ ಸಕಾರಾತ್ಮಕ ಪ್ರಭಾವ ಉಂಟಾಗುತ್ತದೆ.
*ಓಂ* ಮತ್ತು *ಭಯ* : ನಿಮಗೆ ಭಯವಾಗುತ್ತಿದ್ದರೆ ಕಣ್ಣನ್ನು ಮುಚ್ಚಿಕೊಂಡು ಐದು ಬಾರಿ ದೀರ್ಘ ಶ್ವಾಸ ತೆಗೆದುಕೊಂಡು 'ಓಂ' ಎಂದು ಉಚ್ಛರಿಸಿ.
*ಓಂ* ಮತ್ತು *ಒತ್ತಡ* :
ಇದು ಶರೀರದ ವಿಷ ಅಂಶಗಳನ್ನು ದೂರ ಮಾಡುತ್ತದೆ.
ಇದನ್ನು ಉಚ್ಛಾರ ಮಾಡುವುದರಿಂದ ಒತ್ತಡ ಕಡಿಮೆಯಾಗುತ್ತದೆ.
*ಓಂ* ಮತ್ತು *ರಕ್ತ ಸಂಚಾರ* : ಹೃದಯವನ್ನು ಆರೋಗ್ಯವಾಗಿಡಲು ಸಹಕಾರಿಯಾಗಿದೆ. 'ಓಂ' ಎಂದು ಹೇಳುವುದರಿಂದ ರಕ್ತ ಸಂಚಾರ ಸುಗಮವಾಗುತ್ತದೆ.
*ಓಂ* ಮತ್ತು *ಪಚನ ಕ್ರಿಯೆ* : ಇದನ್ನು ಉಚ್ಛಾರ ಮಾಡುವುದರಿಂದ ಪಚನ ಕ್ರಿಯೆ ಸರಿಯಾಗುತ್ತದೆ.
*'ಓಂ'* ಮತ್ತು *ಸ್ಫೂರ್ತಿ* : ಇದರಿಂದ ಶರೀರದಲ್ಲಿ ಯುವಾವಸ್ಥೆಯ ಸ್ಫೂರ್ತಿ ಹರಿದಾಡುತ್ತದೆ.
*ಓಂ* ಮತ್ತು *ಸುಸ್ತು* : ಆಯಾಸವನ್ನು ದೂರ ಮಾಡಲು ಸುಲಭ ಉಪಾಯ 'ಓಂ' ಉಚ್ಛಾರ ಮಾಡುವುದು.
*ಓಂ* ಮತ್ತು *ನಿದ್ರೆ* : ಸರಿಯಾಗಿ ನಿದ್ರೆ ಬರದೇ ಇದ್ದ ಸಂದರ್ಭದಲ್ಲಿ ಓಂ ಎಂದು ಪಠಣ ಮಾಡಿ. ಇದರಿಂದ ಮನಸ್ಸು ಶಾಂತವಾಗಿ ನಿದ್ರೆ ಚೆನ್ನಾಗಿ ಬರುತ್ತದೆ.
*ಓಂ* ಮತ್ತು *ಶ್ವಾಸಕೋಶ* : 'ಓಂ' ಉಚ್ಛಾರಣೆ ಶ್ವಾಸಕೋಶದ ತೊಂದರೆ ಕಡಿಮೆಯಾಗುತ್ತದೆ.
*ಓಂ*
ಮತ್ತು *ಬೆನ್ನೆಲುಬು* : 'ಓಂ' ಉಚ್ಛಾರ ಮಾಡುವುದರಿಂದ ಉಂಟಾಗುವ ಕಂಪನದಿಂದ
ಬೆನ್ನೆಲುಬು ಗಟ್ಟಿಯಾಗುತ್ತದೆ ಹಾಗೂ ಮುಂದೆ ಇದರಿಂದ ಯಾವುದೇ ಸಮಸ್ಯೆ
ಕಾಣಿಸುವುದಿಲ್ಲ..
************************************************************************************************************************************************************************************************************************************
*****************************************************************************************************************************************************************************************************
ದಿನಕ್ಕೊಂದು ಸಂಖ್ಯಾವಿಶೇಷ :-
*****************************************************************************************************************************************************************************************************************
*ಮರಣವನ್ನು ಯಾರು ನೋಡಿಲ:
*******************************************************************************************************************************************
ದಿನಕ್ಕೊಂದು ಸಂಖ್ಯಾವಿಶೇಷ :-
*ಭಗವಂತನನ್ನು ಕಾಣಲು ವೇದಾನುಭವಗಳಿಂದ ಪ್ರಾಚೀನ ಋಷಿಗಳು ಕಂಡುಕೊಂಡ ಕೆಲವು ಮೂಲಸೂತ್ರಗಳು* :-
೧. ಶರೀರವನ್ನು ನೀರು ಮತ್ತು ಯೋಗದಿಂದ ಮಡಿಮಾಡಿ
೨. ಉಸಿರನ್ನು ಪ್ರಾಣಾಯಾಮದಿಂದ ಮಡಿಮಾಡಿ
೩. ಮನಸ್ಸನ್ನು ಧ್ಯಾನದಿಂದ ಮಡಿಮಾಡಿ
೪. ಬುದ್ಧಿಯನ್ನು ಆಧ್ಯಾತ್ಮಿಕ ಚಿಂತನೆಗಳಿಂದ ಮಡಿಮಾಡಿ
೫. ನೆನಪುಗಳನ್ನು ಮನನ, ಸಚ್ಚಿಂತನೆಗಳಿಂದ ಮಡಿಮಾಡಿ
೬. ಅಹಂಕಾರವನ್ನು ಸೇವೆಯಿಂದ ಮಡಿಮಾಡಿ
೭. ಆತ್ಮವನ್ನು ಮೌನದಿಂದ ಮಡಿಮಾಡಿ
೮. ಆಹಾರವನ್ನು ತಯಾರಿಸುವಾಗ, ಬಡಿಸುವಾಗ ಮತ್ತು ಭುಂಜಿಸುವಾಗ ಸಕಾರಾತ್ಮಕ ಚಿಂತನೆಗಳಿಂದ ಮಡಿಮಾಡಿ
೯. ಸಂಪತ್ತನ್ನು ದಾನದಿಂದ ಮಡಿಮಾಡಿ
೧೦. ಭಾವನೆಗಳನ್ನು ಭಗವಂತನಲ್ಲಿ ನಿಷ್ಕಾಮ ಪ್ರೇಮ ಹಾಗು ಶರಣಾಗತಿ ಮೂಲಕ ಮಡಿಮಾಡಿ
ಮಡಿ
ಅಂದರೆ ಈ ರೀತಿ ಮಡಿ ಮಾಡಬೇಕು. ಅದು ನಿಜವಾದ ಮಡಿ. ಮನಸ್ಸಲ್ಲಿ ಬೇರೆ ಅಶಾಸ್ತ್ರೀಯ
ವಿಚಾರಗಳನ್ನು ತುಂಬಿಕೊಂಡು ಗಂಗಾದಿ ತೀರ್ಥಗಳಲ್ಲಿ ೧೦೦೮ ಸಲ ಮುಳುಗಿದರೂ ಅದು ಮಡಿ
ಅಲ್ಲ. ಶಾಸ್ತ್ರಗಳಲ್ಲಿ ಹೇಳಿದ ಹಾಗೆ ಮಾಡಿ ನಿಜವಾದ ಮಡಿವಂತರಾಗೋಣ.
ಸರ್ವೇ ಜನಾಃ ಸುಖಿನೋ ಭವಂತು !
-------------------------------------------------------------------------------------------------------------------------------------------------------------------------------------------------------------------------------------------------------------------------------------------------------
Why Do We Wear Silk Clothes during Poojas & Rituals:
Knowing
or unknowing the exact reason, Majority of Indians prefer Silk clothes
while performing Poojas, Homas and Rituals. Here is the Science behind
this
Silk
clothes have the capacity to attract and store Electro magnetic energy.
With the friction between the body and the silk clothes, electric
energy is produced, which gives rise to Electro static attraction.
According
to shastras, this energy would act on the mind of the devotee. It is
also said that the vibrations, which are generated while worshiping, are
also stored by wearing the silk clothes. The external clothing, which
prevents the loss of these vibrations, would work on the mind to sustain
the much needed concentration. It is also said that any worship,
without concentration is useless.
Hence,
Silk clothes are preferred all over India during poojas, be it a
Maharashtrian lady in Ganesh puja, or a Bengali lady in Durga pooja or a
Gujarati lady in Laxmi pooja during Diwali and so on!
Share and let others know about science behind our Hindu tradition.*****************************************************************************************************************************************************************************************************************
*ಮರಣವನ್ನು ಯಾರು ನೋಡಿಲ:
ಬಹುಶ...ಅದು ಅಂದವಾಗಿ ಇರಬಹುದು !*
*ಏಕೆಂದರೆ ಅದನ್ನು ಒಂದು ಸಲ ಭೇಟಿಯಾದವರು...ಮತ್ತೆ ಜೀವಿಸಲು ಮರೆತುಬಿಡುತ್ತಿದ್ದಾರೆ !*
*ಪ್ರಕೃತಿಯ ನಿಯಮಗಳು ಕೂಡಾ ತುಂಬ ವಿಚಿತ್ರವಾಗಿದೆ -*
*ಪ್ರಾಣವಿರುವ ಮನುಷ್ಯ ನೀರಿನಲ್ಲಿ ಮುಳುಗಿ ಹೋಗುತ್ತಾನೆ !*
*ಸತ್ತವನು ನೀರಿನಲ್ಲಿ ತೇಲುತ್ತಾನೆ !*
*ಜೀವನವೆಲ್ಲ ಹಣದ ಹಿಂದೆ ಓಡುವವನಿಗೆ ಗೊತ್ತಾ ?*
*ನಾಳೆ ಸತ್ತ ಮೇಲೆ ಅವನು ಬರೀ ಕೈಯಲ್ಲಿ ಹೋಗುತ್ತಾನೆಂದು !*
*ಸುಂದರವಾದ ಶರೀರವನ್ನು ನೋಡಿ ಆನಂದಿಸುತ್ತೇವೆ ಆದರೆ...ನೀವಾದರು ನಾನಾದರು ಆಗುವುದು ಬೂದಿನೆ...*
*ಒಬ್ಬರು ಅತ್ತು ಮನಸು ಹಗುರ ಮಾಡಿಕೊಳ್ಳುತ್ತಾರೆ !*
*ಇನ್ನೊಬ್ಬರು ನಕ್ಕು ದುಃಖವನ್ನು ಮರೆಮಾಡಿಕೊಳ್ಳುತ್ತಾರೆ !*
*ಈ ಮನುಷ್ಯರ ಐಕ್ಯತೆಯನ್ನು ನೋಡಿದರೆ ನನಗೆ ಆಶ್ಚರ್ಯವಾಗುತ್ತದೆ !*
*ಬದುಕಿರುವವರೆಗು ಒಬ್ಬರನ್ನು ತುಳಿದು ಮೇಲೆ ಬರಬೇಕೆನ್ನುಕೊಳ್ಳುತ್ತಾನೆ...*
*ಇರುವಷ್ಟು ದಿನ ಕಿತ್ತಾಡಿಕೊಳ್ಳುತ್ತಾರೆ...*
*ಸತ್ತ ಮೇಲೆ ತನ್ನ ಹೆಗಲ ಮೇಲೆ ಹೊತ್ತುಕೊಂಡು...*
*ಮಸಣದ ವರೆಗೆ ಹೋಗುತ್ತಾನೆ...*
*ಇರುವವರೆಗು ಎಲ್ಲರನ್ನು ಪ್ರೀತಿಸೊಣ...*
*ಒಳ್ಳೆಯ ಮಾತನ್ನೆ ಆಡೊಣ..*
*ಒಬ್ಬರಿಗೊಬ್ಬರು ಸಹಾಯ ಮಾಡೊಣ....*
Comments
Post a Comment